ಆ್ಯಪ್ನಗರ

ಉತ್ತರ ಕನ್ನಡದ ಹೆದ್ದಾರಿಯಲ್ಲಿ ಕಾರ್ಮಿಕರಿಂದ ಮೇಲ್ಸೇತುವೆ ಕಾಮಗಾರಿ; ಭಯದಲ್ಲೇ ಸಾಗುವ ವಾಹನ ಸವಾರರು!

ಮೇಲ್ಭಾಗದಲ್ಲಿ ಕಾಮಗಾರಿ ನಡೆಯುತ್ತಿದ್ದರೆ, ಕೆಳಭಾಗದ ಹೆದ್ದಾರಿಯಲ್ಲಿ ವಾಹನಗಳ ಓಡಾಟ, ಪ್ರವಾಸಿಗರು ಹಾಗೂ ಸ್ಥಳೀಯರು ತಿರುಗಾಡುತ್ತಿರುತ್ತಾರೆ. ಟ್ಯಾಗೋರ್ ಕಡಲತೀರಕ್ಕೆ ಈ ಸೇತುವೆಯ ಅಡಿಯಿಂದಲೇ ತೆರಳಬೇಕಾಗಿದೆ. ಆದರೆ ಮೇಲ್ಭಾಗದಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರು, ಭಾರೀ ಕಬ್ಬಿಣಗಳನ್ನು ಮೇಲಿನಿಂದ ಕೆಳಕ್ಕೆ ಎಸೆಯುವ ಕಾರ್ಯವನ್ನೂ ಮಾಡುತ್ತಿದ್ದು, ಸ್ವಲ್ಲ ಎಡವಿದರೆ ರಸ್ತೆಯಲ್ಲಿ ಓಡಾಡುವವರ ಮೇಲೆ ಬೀಳುವ ಆತಂಕವೂ ಇದೆ.

Vijaya Karnataka Web 27 Nov 2021, 3:17 pm
ಕಾರವಾರ: ಕೋವಿಡ್ ಲಾಕ್ ಡೌನ್ ತೆರವುಗೊಳಿಸಿರುವುದರಿಂದ ಹಾಗೂ ಸದ್ಯ ಮಳೆ ಬಿಡುವು ನೀಡಿರುವುದರಿಂದ ಜಿಲ್ಲೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ಗರಿಗೆದರಿದೆ. ಅದರಂತೆ ರಾಷ್ಟ್ರೀಯ ಹೆದ್ದಾರಿ 66ರ ಮೇಲೆ, ಜಿಲ್ಲಾಧಿಕಾರಿ ಕಚೇರಿ ಎದುರು ಮೇಲ್ಸೇತುವೆ (ಫ್ಲೈ ಓವರ್) ನಿರ್ಮಾಣ ಕಾರ್ಯವೂ ಭರದಿಂದ ಸಾಗಿದೆ. ಆದರೆ ಕಾಮಗಾರಿ ಸ್ಥಳದಲ್ಲಿ ಕಾರ್ಮಿಕರು ಸುರಕ್ಷತಾ ಕ್ರಮಗಳನ್ನು ಅನುಸರಿಸದಿರುವುದು ಕಂಡುಬಂದಿದೆ.
Vijaya Karnataka Web ಸೇತುವೆ


ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿ ನಡೆಸುತ್ತಿರುವ ಐಡಿಯಲ್ ರೋಡ್ ಬಿಲ್ಡರ್ಸ್ (ಐಆರ್ ಬಿ) ಕಂಪನಿಯು ಈ ಮೇಲ್ಸೇತುವೆಯ ಕಾಮಗಾರಿ ಕೈಗೆತ್ತುಕೊಂಡಿದೆ. 2017ರಲ್ಲಿ ಆರಂಭವಾದ ಈ ಸೇತುವೆಯ ಕಾಮಗಾರಿ ನಾಲ್ಕು ವರ್ಷ ಕಳೆಯುತ್ತಿದ್ದರೂ ಇನ್ನೂ ಪೂರ್ಣಗೊಂಡಿಲ್ಲ. ಕೋವಿಡ್ ಲಾಕ್ ಡೌನ್, ಮಳೆ- ಪ್ರವಾಹದ ಕಾರಣಗಳನ್ನೊಡ್ಡಿ ಕಾಮಗಾರಿ ವಿಳಂಬವಾಗುತ್ತಿದ್ದು, ಸದ್ಯ ನಾಲ್ಕು ತಿಂಗಳಿಂದ ಕಾಮಗಾರಿ ಪ್ರಗತಿಯಲ್ಲಿದೆ. ‌

ಕಾಮಗಾರಿ ಸ್ಥಳದಲ್ಲಿ ಬಿಹಾರ, ಉತ್ತರ ಪ್ರದೇಶ, ಮಧ್ಯ ಪ್ರದೇಶ ಮೂಲದ ಕಾರ್ಮಿಕರು ಕೆಲಸ ಮಾಡುತ್ತಿದ್ದು, ಈ ವೇಳೆ ಯಾವುದೇ ಸುರಕ್ಷತಾ ಕ್ರಮಗಳನ್ನು ಅನುಸರಿಸುತ್ತಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸುಮಾರು 40 ಅಡಿ ಎತ್ತರದಲ್ಲಿ ಸೇತುವೆ ಕಾಮಗಾರಿ ಕೈಗೊಳ್ಳುತ್ತಿರುವ ಕಾರ್ಮಿಕರು, ಸುರಕ್ಷತಾ ಪರಿಕರಗಳಾದ ಹೆಲ್ಮೆಟ್, ಗ್ಲೌಸ್, ಗಮ್ ಬೂಟ್ ಯಾವುದನ್ನೂ ಧರಿಸುತ್ತಿಲ್ಲ. ವೆಲ್ಡಿಂಗ್, ಕಬ್ಬಿಣದ ಸರಳುಗಳನ್ನು ಜೋಡಿಸುವುದು (ಸೆಂಟ್ರಿಂಗ್), ಸಿಮೆಂಟ್ ಪ್ಲಾಸ್ಟರಿಂಗ್ ನಂಥ ಕೆಲಸಗಳನ್ನು ಮಾಡುತ್ತಿರುವ ಕಾರ್ಮಿಕರು, ಕೊಂಚ ಆಯ ತಪ್ಪಿದರೂ ಪ್ರಾಣಾಪಾಯಕ್ಕೆ ಒಳಗಾಗುವ ಸಾಧ್ಯತೆ ಇದೆ.
ಚುನಾವಣೆಯಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿದರೆ ಪ್ರಕರಣ ದಾಖಲು: ಉತ್ತರ ಕನ್ನಡ ಜಿಲ್ಲಾಧಿಕಾರಿ ಎಚ್ಚರಿಕೆ
ಇನ್ನು ಮೇಲ್ಭಾಗದಲ್ಲಿ ಕಾಮಗಾರಿ ನಡೆಯುತ್ತಿದ್ದರೆ, ಕೆಳಭಾಗದ ಹೆದ್ದಾರಿಯಲ್ಲಿ ವಾಹನಗಳ ಓಡಾಟ, ಪ್ರವಾಸಿಗರು ಹಾಗೂ ಸ್ಥಳೀಯರು ತಿರುಗಾಡುತ್ತಿರುತ್ತಾರೆ. ಟ್ಯಾಗೋರ್ ಕಡಲತೀರಕ್ಕೆ ಈ ಸೇತುವೆಯ ಅಡಿಯಿಂದಲೇ ತೆರಳಬೇಕಾಗಿದೆ. ಆದರೆ ಮೇಲ್ಭಾಗದಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರು, ಭಾರೀ ಕಬ್ಬಿಣಗಳನ್ನು ಮೇಲಿನಿಂದ ಕೆಳಕ್ಕೆ ಎಸೆಯುವ ಕಾರ್ಯವನ್ನೂ ಮಾಡುತ್ತಿದ್ದು, ಸ್ವಲ್ಲ ಎಡವಿದರೆ ರಸ್ತೆಯಲ್ಲಿ ಓಡಾಡುವವರ ಮೇಲೆ ಬೀಳುವ ಆತಂಕವೂ ಇದೆ.

ಇನ್ನು ಈ ಬಗ್ಗೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಈ ಹಿಂದೆಯೇ ಐಆರ್ ಬಿ ಕಂಪನಿಯವರು ಕರೆಯಿಸಿ ಸಭೆ ನಡೆಸಿ, ಸೂಚನೆಗಳನ್ನೂ ನೀಡಿದ್ದರು. ಆದರೂ ಕಂಪನಿಯ ಕಾರ್ಮಿಕರು ಯಾವುದೇ ನಿಯಮಗಳನ್ನು ಪಾಲನೆ ಮಾಡುತ್ತಿಲ್ಲ. ಮೇಲ್ವಿಚಾರಕರೂ ಕೂಡ ಕಾಮಗಾರಿ ಸ್ಥಳದಲ್ಲಿರುವುದಿಲ್ಲ.
ಬೆಂಗಳೂರು ನಗರದಲ್ಲಿ ಪ್ರವಾಹ ತಡೆಗೆ 900 ಕೋಟಿ ವೆಚ್ಚದಲ್ಲಿ ಹೊಸ ರಾಜಕಾಲುವೆ ನಿರ್ಮಾಣ!
ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಕಾರ್ಮಿಕರ ಕಾನೂನಿನನ್ವಯ ಕಂಪನಿ ಹಾಗೂ ಕಾರ್ಮಿಕರು ವಹಿಸಬೇಕಾದ ಮುಂಜಾಗ್ರತಾ ಕ್ರಮಗಳನ್ನು ವಹಿಸಲೇಬೇಕು. ಅದನ್ನು ಪಾಲನೆ ಮಾಡದಿದ್ದಲ್ಲಿ ಪರಿಶೀಲಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ