ಆ್ಯಪ್ನಗರ

ಇಡಗುಂದಿ ಬಳಿ ಕಾರು ಡಿಕ್ಕಿಯಿಂದ ರಸ್ತೆ ಪಕ್ಕಕ್ಕೆ ವಾಲಿದ ಬಸ್; ಅದೃಷ್ಟವಶಾತ್ ಪಾರಾದ ಪ್ರಯಾಣಿಕರು!

ಅಂಕೋಲಾ ಘಟಕಕ್ಕೆ ಸೇರಿದ ಸಾರಿಗೆ ಬಸ್ ಗೆ ಯಲ್ಲಾಪುರ ತಾಲೂಕಿನ ಇಡಗುಂದಿ ಆರ್ತಿಬೈಲ್ ಬಳಿ ವೇಗದಲ್ಲಿ ಬಂದ ಬೆಂಗಳೂರು ನೋಂದಣಿಯ ಕಾರು ಡಿಕ್ಕಿಯಾಗಿದೆ. ಪರಿಣಾಮ ಕಾರು ಹಾಗೂ ಬಸ್ ನ ಮುಂಭಾಗ ಜಖಂ ಆಗಿದೆ.

Vijaya Karnataka Web 22 Nov 2021, 2:02 pm
ಕಾರವಾರ: ಕಾರು ಚಾಲಕನ ನಿರ್ಲಕ್ಷ್ಯದಿಂದಾಗಿ ಸಾರಿಗೆ ಬಸ್ಸೊಂದು ರಸ್ತೆ ಪಕ್ಕಕ್ಕೆ ವಾಲಿ, ಅದೃಷ್ಟವಶಾತ್ ಹೆಚ್ಚಿನ ಅಪಾಯದಿಂದ ಪ್ರಯಾಣಿಕರು ಪಾರಾದ ಘಟನೆ ನಡೆದಿದೆ.
Vijaya Karnataka Web ಬಸ್ ಕಾರು ಢಿಕ್ಕಿ


ಅಂಕೋಲಾ ಘಟಕಕ್ಕೆ ಸೇರಿದ ಸಾರಿಗೆ ಬಸ್ ಗೆ ಯಲ್ಲಾಪುರ ತಾಲೂಕಿನ ಇಡಗುಂದಿ ಆರ್ತಿಬೈಲ್ ಬಳಿ ವೇಗದಲ್ಲಿ ಬಂದ ಬೆಂಗಳೂರು ನೋಂದಣಿಯ ಕಾರು ಡಿಕ್ಕಿಯಾಗಿದೆ. ಪರಿಣಾಮ ಕಾರು ಹಾಗೂ ಬಸ್ ನ ಮುಂಭಾಗ ಜಖಂ ಆಗಿದ್ದು, ಡಿಕ್ಕಿಯಿಂದಾಗಿ ಚಾಲಕನ ನಿಯಂತ್ರಣ ತಪ್ಪಿದ ಬಸ್ ರಸ್ತೆ ಪಕ್ಕಕ್ಕೆ ವಾಲಿದೆ.
ರಸ್ತೆ ಪಕ್ಕದಲ್ಲಿ ಜಾಹೀರಾತು ಕಂಬವೊಂದು ಇದ್ದಿದ್ದರಿಂದ ಬಸ್ ಅದಕ್ಕೆ ತಾಗಿಕೊಂಡು ವಾಲಿ ನಿಂತಿದೆ. ಜಾಹೀರಾತು ಕಂಬ ಇಲ್ಲದಿದ್ದರೆ ಬಸ್ ಹೊಂಡಕ್ಕೆ ಬೀಳುವ ಸಾಧ್ಯತೆ ಇತ್ತು. ಡಿಕ್ಕಿಯ ರಭಸದಿಂದಾಗಿ ಬಸ್ ಹಾಗೂ ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ