ಆ್ಯಪ್ನಗರ

ಬಸ್‌, ಕಾರು ಡಿಕ್ಕಿ: ನಾಲ್ವರಿಗೆ ಗಾಯ

ಯಲ್ಲಾಪುರ: ಕೆಎಸ್‌ಆರ್‌ಟಿಸಿ ಬಸ್‌ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಕಾರಿನಲ್ಲಿದ್ದ ನಾಲ್ವರು ಪ್ರಯಾಣಿಕರು ಗಾಯಗೊಂಡ ಘಟನೆ ಮಂಗಳವಾರ ತಾಳಗುಪ್ಪಾ-ಅಳ್ನಾವರ ರಾಜ್ಯ ಹೆದ್ದಾರಿಯ ಮೇಲೆ ತಾಲೂಕಿನ ಹುತ್ಕಂಡ ಕ್ರಾಸ್‌ ಬಳಿ ಸವಣಗೇರಿಯಲ್ಲಿ ನಡೆದಿದೆ.

Vijaya Karnataka 24 Jul 2019, 5:00 am
ಯಲ್ಲಾಪುರ: ಕೆಎಸ್‌ಆರ್‌ಟಿಸಿ ಬಸ್‌ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಕಾರಿನಲ್ಲಿದ್ದ ನಾಲ್ವರು ಪ್ರಯಾಣಿಕರು ಗಾಯಗೊಂಡ ಘಟನೆ ಮಂಗಳವಾರ ತಾಳಗುಪ್ಪಾ-ಅಳ್ನಾವರ ರಾಜ್ಯ ಹೆದ್ದಾರಿಯ ಮೇಲೆ ತಾಲೂಕಿನ ಹುತ್ಕಂಡ ಕ್ರಾಸ್‌ ಬಳಿ ಸವಣಗೇರಿಯಲ್ಲಿ ನಡೆದಿದೆ.
Vijaya Karnataka Web bus car collision four injured
ಬಸ್‌, ಕಾರು ಡಿಕ್ಕಿ: ನಾಲ್ವರಿಗೆ ಗಾಯ


ಯಲ್ಲಾಪುರದಿಂದ ಮಡಿಕೇರಿಗೆ ಹೊರಟಿದ್ದ ಯಲ್ಲಾಪುರ ಘಟಕದ ಬಸ್‌ಗೆ ರಾಣೇಬೆನ್ನೂರಿನಿಂದ ಯಲ್ಲಾಪುರ ಕಡೆಗೆ ಬರುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ. ಇದರಿಂದ ಕಾರು ಸಂಪೂರ್ಣ ಜಖಂಗೊಂಡಿದ್ದು, ಬಸ್‌ನ ಮುಂಭಾಗ ಜಖಂಗೊಂಡಿದೆ.

ಇದರಿಂದಾಗಿ ಕಾರಿನಲ್ಲಿದ್ದ ನಾಲ್ವರು ಪ್ರಯಾಣಿಕರಿಗೆ ಗಾಯಗಳಾಗಿದ್ದು, ಅವರನ್ನು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆ ಹುಬ್ಬಳ್ಳಿಗೆ ಕರೆದೊಯ್ಯಲಾಗಿದೆ.

ಈ ಘಟನೆಯಲ್ಲಿ ಗಾಯಗೊಂಡವರನ್ನು ರಾಣೇಬೆನ್ನೂರಿನ ಕೋಟೇಶ್ವರ ನಗರದ ಅರುಣಕುಮಾರ್‌ ಯಲ್ಲಪ್ಪಾ ಹಡಗಲಿ, ದೊಡ್ಡಪೇಟೆಯ ನಂಜುಂಡಿ ಶಿವಪ್ಪಾ ಚಕ್ರಸಾಲಿ, ರೈಲ್ವೇಸ್ಟೇಶನ್‌ ಹತ್ತಿರದ ಪ್ರವೀಣ ಶಿವಾನಂದ ಸಂಕಮ್ಮನವರ್‌, ಬಸವೇಶ್ವರ ದೇವಸ್ಥಾನ ಹತ್ತಿರದ ವಾದೀಶ್‌ ಚಂದ್ರಶೇಖರ್‌ ಹಾದಿಮನಿ ಎಂದು ಗುರುತಿಸಲಾಗಿದೆ. ಈ ಕುರಿತು ಪಟ್ಟಣದ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ