ಆ್ಯಪ್ನಗರ

ಬಸ್‌ ಬರೋಲ್ಲ, ಕಾಯುವುದೇ ಕೆಲಸ

ಸಿದ್ದಾಪುರ : ಸಿದ್ದಾಪುರ-ನೆಜ್ಜೂರು ಮಾರ್ಗವಾಗಿ ಸಾಗರಕ್ಕೆ ಹೋಗುವ ಬಸ್‌ ಬಗ್ಗೆ ಪ್ರತಿ ತಾ.ಪಂ. ಸಭೆಯಲ್ಲೂಪ್ರಸ್ತಾಪಿಸಲಾಗುತ್ತಿದೆ. ಸಭೆ ನಡೆದ ಒಂದೆರಡು ದಿನ ಬಸ್‌ ಸರಿಯಾದ ಸಮಯಕ್ಕೆ ಬರುತ್ತದೆ. ನಂತರ ಬರುವುದಿಲ್ಲ. ವಿದ್ಯಾರ್ಥಿಗಳಿಗೆ ಬಸ್‌ ಕಾಯುವುದೇ ಕೆಲಸವಾಗುತ್ತಿದೆ. ದಯವಿಟ್ಟು ಈ ಬಸ್‌ ರದ್ದು ಪಡಿಸಿ ನಮಗೆ ನಿಮ್ಮ ಬಸ್‌ನ ಅವಶ್ಯಕತೆ ಇಲ್ಲಎಂದು ತಾಪಂ ಸದಸ್ಯ ನಾಸೀರ್‌ ವಲ್ಲಿಖಾನ್‌ ಸಾರಿಗೆ ಇಲಾಖೆಯವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Vijaya Karnataka 21 Dec 2019, 5:00 am
ಸಿದ್ದಾಪುರ : ಸಿದ್ದಾಪುರ-ನೆಜ್ಜೂರು ಮಾರ್ಗವಾಗಿ ಸಾಗರಕ್ಕೆ ಹೋಗುವ ಬಸ್‌ ಬಗ್ಗೆ ಪ್ರತಿ ತಾ.ಪಂ. ಸಭೆಯಲ್ಲೂಪ್ರಸ್ತಾಪಿಸಲಾಗುತ್ತಿದೆ. ಸಭೆ ನಡೆದ ಒಂದೆರಡು ದಿನ ಬಸ್‌ ಸರಿಯಾದ ಸಮಯಕ್ಕೆ ಬರುತ್ತದೆ. ನಂತರ ಬರುವುದಿಲ್ಲ. ವಿದ್ಯಾರ್ಥಿಗಳಿಗೆ ಬಸ್‌ ಕಾಯುವುದೇ ಕೆಲಸವಾಗುತ್ತಿದೆ. ದಯವಿಟ್ಟು ಈ ಬಸ್‌ ರದ್ದು ಪಡಿಸಿ ನಮಗೆ ನಿಮ್ಮ ಬಸ್‌ನ ಅವಶ್ಯಕತೆ ಇಲ್ಲಎಂದು ತಾಪಂ ಸದಸ್ಯ ನಾಸೀರ್‌ ವಲ್ಲಿಖಾನ್‌ ಸಾರಿಗೆ ಇಲಾಖೆಯವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
Vijaya Karnataka Web bus work wait
ಬಸ್‌ ಬರೋಲ್ಲ, ಕಾಯುವುದೇ ಕೆಲಸ


ಅವರು ಪಟ್ಟಣದ ತಾ.ಪಂ. ಸಭಾಭವನದಲ್ಲಿಶುಕ್ರವಾರ ತಾಪಂ ಅಧ್ಯಕ್ಷ ಸುಧೀರ್‌ ಗೌಡರ್‌ ಅಧ್ಯಕ್ಷತೆಯಲ್ಲಿನಡೆದ ಸಾಮಾನ್ಯ ಸಭೆಯಲ್ಲಿಈ ರೀತಿ ದೂರಿದರು.

ಡಿಪೋ ಮ್ಯಾನೇಜರ್‌ ರವೀಂದ್ರ ಮಾತನಾಡಿ, ಬಸ್‌ಗಳ ಕೊರತೆಯಿಂದ ಈ ರೀತಿ ಆಗುತ್ತಿದೆ ಇಂದು ನಾಲ್ಕು ಹೊಸ ಬಸ್‌ಗಳು ನಮ್ಮ ಡಿಪೋಗೆ ಬರುತ್ತಿವೆ. ಆ ನಾಲ್ಕು ಬಸ್‌ಗಳನ್ನು ಸಿದ್ದಾಪುರ ಮಾರ್ಗಕ್ಕೆ ನೀಡಲಾಗುವುದು ಎಂದು ಹೇಳಿದರು.

ಶಿರಸಿ ಡಿಪೋ ರಾಜಹಂಸ ಹಾಗೂ ಸ್ಲೀಪರ್‌ ಬಸ್‌ಗಳಲ್ಲಿತಿಗಣೆ ಕಾಟವಿದೆ. ಬಸ್‌ಗೆ ಹಾಕಿರುವ ಬಟ್ಟೆಗಳನ್ನು ತೊಳೆಯದೇ ಯಾವ ಕಾಲವಾಯಿತೋ ? ನಮ್ಮ ಶಾಸಕರು ನಿಮ್ಮ ಬಸ್ಸಿನಲ್ಲಿಓಡಾಡುವುದಿಲ್ಲ. ಅವರು ನಿಮ್ಮನ್ನು ಗದರಿಸುವುದೂ ಇಲ್ಲ. ಇದರಿಂದ ನಿಮಗೆ ಹೇಳುವವರು ಕೇಳುವವರು ಇಲ್ಲವಾಗಿದೆ ಎಂದು ನಾಸೀರ್‌ ಖಾನ್‌ ಚಾಟಿ ಬೀಸಿದರು.

ಆಸ್ಪತ್ರೆ ಸ್ವಚ್ಛತೆಗಿಲ್ಲಗಮನ : ಸರಕಾರಿ ಆಸ್ಪತ್ರೆಯ ಸ್ಥಿತಿ ಮೊದಲಿನಂತೆ ಆಗಿದ್ದು, ಯಾವಾಗ ಹೋದರೂ ವೈದ್ಯರು ಇರುವುದಿಲ್ಲ. ಬಡವರು ನಿಮ್ಮ ಆಸ್ಪತ್ರೆಗೆ ಬರುತ್ತಾರೆ. ವೈದ್ಯರಿಲ್ಲದಿದ್ದರೆ ಹೇಗೆ? ಡಿ.13ರಂದು ಒಬ್ಬ ವೈದ್ಯರೂ ಕಾರ್ಯ ನಿರ್ವಹಿಸುತ್ತಿರಲಿಲ್ಲ. ಆಸ್ಪತ್ರೆಯ ಆವರಣದಲ್ಲಿಬಿಟ್ಟು ಹೋಗಿರುವ ಚಪ್ಪಲಿಯ ರಾಶಿ ಇದೆ. ಒಪಿಡಿ ಚೀಟಿಯನ್ನು 15 ರೂ.ಗೆ ಏರಿಸಿದ್ದೀರಿ. ಆದರೆ ಸ್ವಚ್ಛತೆಯ ಬಗ್ಗೆ ಗಮನ ಕೊಡುತ್ತಿಲ್ಲಎಂದು ಸದಸ್ಯರು ದೂರಿದರು.

ಬಿಳಗಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿವಾರಕ್ಕೆ ಎರಡು ದಿನ ವೈದ್ಯರು ಬರುತ್ತಾರೆ. ಅಲ್ಲಿಮಹಿಳಾ ಆರೋಗ್ಯ ಕಾರ್ಯಕರ್ತೆಯರೂ ಇಲ್ಲ. ಖಾಲಿ ಇರುವ ಹುದ್ದೆಯನ್ನು ಯಾಕೆ ತುಂಬುತ್ತಿಲ್ಲ? ಬೇರೆ ಮಹಿಳಾ ಆರೋಗ್ಯ ಕಾರ್ಯಕರ್ತೆಯರು ಬರುವುದರೊಳಗೆ ಇಲ್ಲಿರುವವವರನ್ನು ಯಾಕೆ ವರ್ಗಾವಣೆ ಮಾಡಿದಿರಿ ಎಂದು ಉಪಾಧ್ಯಕ್ಷೆ ದಾಕ್ಷಾಯಣಿ ಗೌಡ ಪ್ರಶ್ನಿಸಿದರು.

ಡಾ.ಲೋಕೇಶ ಮಾತನಾಡಿ, ಇದು ತಾಲೂಕು ವೈದ್ಯಾಧಿಕಾರಿಗಳ ವ್ಯಾಪ್ತಿಗೆ ಬರುತ್ತದೆ. 13ರಂದು ಕಾರವಾರದಲ್ಲಿಕಾರ್ಯಾಗಾರವಿದ್ದ ಕಾರಣ ವೈದ್ಯರು ಅಲ್ಲಿಗೆ ಹೋಗಿದ್ದರು. ಆಸ್ಪತ್ರೆಯ ಸ್ವಚ್ಛತೆಯ ಬಗ್ಗೆ ಹೆಚ್ಚಿನ ಗಮನ ಕೊಡುವುದಕ್ಕೆ ಸೂಚಿಸಲಾಗುವುದು ಎಂದು ಹೇಳಿದರು. ಸಭೆಯಲ್ಲಿತಾಲೂಕು ವೈದ್ಯಾಧಿಕಾರಿ ಹಾಜರಿರಲಿಲ್ಲ.

ಕೃಷಿಭಾಗ್ಯ ಯೋಜನೆಗೆ ಸಾಕಷ್ಟು ಅರ್ಜಿಗಳು ಬಂದಿವೆ. ಆದರೆ ಅನುದಾನ ಬಂದಿಲ್ಲ. ಬೆಳೆ ಪರಿಹಾರದಲ್ಲಿತಾಲೂಕಿಗೆ 3.98 ಕೋಟಿ ರೂ. ಜಮಾ ಆಗಿದ್ದು, ರೈತರ ಖಾತೆಗೆ ನೇರವಾಗಿ ಜಮಾ ಆಗಿದೆ. ಈ ಬಗ್ಗೆ ಪರಿಹಾರ ವೆಬ್‌ನಲ್ಲಿಮಾಹಿತಿ ಸಿಗುತ್ತದೆ. ಪರಿಹಾರ ಸಿಗದ ರೈತರಿಗೆ ಸಿಗುವ ಮುಂದೆ ಸಿಗುವ ಸಾಧ್ಯತೆ ಇದೆ. ಪಿಡಿಒ ತಮ್ಮ ಗ್ರಾ.ಪಂ. ಕಚೇರಿಯಲ್ಲಿಪರಿಹಾರ ಪಡೆದ ರೈತರ ಮಾಹಿತಿ ಹಾಕುವುದು ಒಳ್ಳೆಯದು ಎಂದು ಕೃಷಿ ಅಧಿಕಾರಿ ಸಭೆಗೆ ತಿಳಿಸಿದರು.

ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಐ.ನಾಯ್ಕ ಮಾತನಾಡಿ, 107 ಅತಿಥಿ ಶಿಕ್ಷಕರ ನೇಮಕವಾಗಿದ್ದು, ಈಗ ತಾಲೂಕಿನಲ್ಲಿಶಿಕ್ಷಕರ ಕೊರತೆ ಇಲ್ಲಎಂದು ತಿಳಿಸಿದರು.

ಸಭೆಯಲ್ಲಿತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಮಹಾಬಲೇಶ್ವರ ಹೆಗಡೆ, ಸದಸ್ಯರಾದ ವಿವೇಕ ಭಟ್ಟ, ರಘುಪತಿ ಹೆಗಡೆ, ಪದ್ಮಾವತಿ ಮಡಿವಾಳ, ಗಿರಿಜಾ ಗೌಡ ಉಪಸ್ಥಿತರಿದ್ದರು.

ಬೆಳೆ ವಿಮೆ ಪರಿಹಾರಕ್ಕೆ 84 ಅರ್ಜಿ : ಬೆಳೆ ನಷ್ಟದಲ್ಲಿವಿಮಾ ಪರಿಹಾರಕ್ಕಾಗಿ 84 ಅರ್ಜಿಗಳು ಬಂದಿದ್ದು, 10 ರೈತರನ್ನು ಗುರುತಿಸಲಾಗಿದೆ. ಅತಿವೃಷ್ಟಿ ಹಾನಿಯಲ್ಲಿ3,19,98,808 ರೂ. ಪರಿಹಾರ ಬಂದಿದ್ದು ಉಂಬಳಮನೆ ಹೋಬಳಿ, 2.5 ಕೋಟಿ ರೂ.ಕೊಂಡ್ಲಿಹೋಬಳಿಗೆ 44.80 ಲಕ್ಷ ರೂ., ಕೋಡ್ಕಣಿ ಹೋಬಳಿಗೆ 70.13 ಲಕ್ಷ ರೂ. ಪರಿಹಾರ ದೊರೆತಿದೆ ಎಂದು ಕೃಷಿ ಅಧಿಕಾರಿ ಸಭೆಗೆ ತಿಳಿಸಿದರು.

ಅನುದಾನ ನೀಡಲು ಬರೋಲ್ಲ : ಸೋವಿನಕೊಪ್ಪದಲ್ಲಿನೆರೆ ಹಾವಳಿಯಿಂದ ಮನೆ ಕಳೆದುಕೊಂಡವರಿಗೆ ಮನೆ ಕಟ್ಟಿಕೊಳ್ಳಲು 5 ಲಕ್ಷ ರೂ. ಮಂಜೂರಾಗಿದ್ದು, ಒಂದು ಲಕ್ಷ ರೂ. ಅವರ ಖಾತೆಗೆ ಜಮಾ ಆಗಿದೆ. ಸೋವಿನಕೊಪ್ಪ ಗ್ರಾಮದ ಸರ್ವೆ ನಂ.41ರಲ್ಲಿ1.3 ಎಕರೆ ಸರಕಾರಿ ಜಾಗವಿದೆ. ಐದು ಗುಂಟೆ ಗ್ರಾ.ಪಂ. ಕಟ್ಟಡ ನಿರ್ಮಿಸಲು ಮೀಸಲಾಗಿಟ್ಟಿದ್ದು ಉಳಿದ ಜಾಗದಲ್ಲಿಮನೆ ಕಟ್ಟಿಕೊಳ್ಳಬಹುದು. ಆದರೆ ಸಂತ್ರಸ್ತರು ಸರ್ವೆ ನಂ.144ರ ಬೆಟ್ಟದಲ್ಲಿಮನೆಕಟ್ಟಲು ಅವಕಾಶ ಕಲ್ಪಿಸಿಕೊಡಬೇಕು ಎಂದು ಕೇಳುತ್ತಿದ್ದಾರೆ. ಆದರೆ ಅಲ್ಲಿಜಿಪಿಎಸ್‌ ಮಾಡಲು ಬರುವುದಿಲ್ಲ. ಸರಕಾರದ ಯಾವುದೇ ಅನುದಾನ ನೀಡಲು ಬರುವುದಿಲ್ಲಎಂದು ಉಪತಹಸೀಲ್ದಾರ ನಾಗರಾಜ ನಾಯ್ಕಡು ಸಭೆಗೆ ತಿಳಿಸಿದರು.

ಹಲಗಡಿಕೊಪ್ಪದಲ್ಲಿಬಸ್‌ ಡಿಪೋ : ಕೋಲಸಿರ್ಸಿ ಗ್ರಾ.ಪಂ. ವ್ಯಾಪ್ತಿಯ ಹಲಗಡಿಕೊಪ್ಪ ಗ್ರಾಮದ ಸರ್ವೆ ನಂ. 31/1ಅ ದಲ್ಲಿಆರು ಎಕರೆ ಜಾಗವಿದ್ದು, ಅಲ್ಲಿಬಸ್‌ ಡಿಪೋ ಮಾಡಲಾಗುವುದು. ಈಗಾಗಲೇ ಜಾಗವನ್ನು ಗುರುತಿಸಲಾಗಿದ್ದು ಸರ್ವೆ ಇಲಾಖೆಗೆ ಜಾಗವನ್ನು ಗುರುತಿಸಲು ಸೂಚಿಸಲಾಗಿದೆ ಎಂದು ಕಂದಾಯ ಅಧಿಕಾರಿ ಸಭೆಗೆ ತಿಳಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ