ಆ್ಯಪ್ನಗರ

'ಮಿಸ್ಟರ್‌ ಯಡಿಯೂರಪ್ಪ ನಿಮ್ಮದೇನಪ್ಪ'? ಸಿಎಂಗೆ ಸಿದ್ದು ಟಾಂಗ್! ​ಹೆಬ್ಬಾರ್ ಮಾರಾಟವಾಗಿದ್ದು ಸತ್ಯವಂತೆ

‘ರಾಜ್ಯದಲ್ಲಿ ಕಾಂಗ್ರೆಸ್‌ ಸರಕಾರ ಇದ್ದಾಗ ಜನಸಾಮಾನ್ಯರಿಗೆ, ಬಡವರಿಗೆ ಸಹಾಯವಾಗುವಂಥ ನಾನಾ ಯೋಜನೆಗಳನ್ನು ತಂದೆವು. ಆದರೆ ಈಗ ಚುನಾವಣಾ ಪ್ರಚಾರದ ಸಮಯದಲ್ಲಿ ಬಿಜೆಪಿಯವರು ಬಂದು ಬಣ್ಣದ ಮಾತುಗಳನ್ನು ಆಡುತ್ತಿದ್ದಾರೆ' - ಸಿದ್ದರಾಮಯ್ಯ

Vijaya Karnataka Web 25 Nov 2019, 7:37 pm
ಯಲ್ಲಾಪುರ (ಉತ್ತರ ಕನ್ನಡ): ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಪರ ಪ್ರಚಾರ ನಡೆಸಿದ ಮಾಜಿ ಸಿಎಂ ಸಿದ್ದರಾಮಯ್ಯ, ಯಡಿಯೂರಪ್ಪಗೆ ಭರ್ಜರಿ ಟಾಂಗ್ ಕೊಟ್ಟರು. ಮುಂಡಗೋಡ ತಾಲೂಕಿನ ಇಂದೂರು ಗ್ರಾಮದಲ್ಲಿ ಮಾತನಾಡಿದ ಸಿದ್ದು, ‘ಬಡವರಿಗೆ ಅನ್ನಭಾಗ್ಯ ಯೋಜನೆ ತಂದದ್ದು ಯಾರು? ಪಶು ಭಾಗ್ಯ, ಕ್ಷೀರ ಭಾಗ್ಯ, ಶೂ ಭಾಗ್ಯ, ಶಾದಿ ಭಾಗ್ಯ, ಇಂದಿರಾ ಕ್ಯಾಂಟೀನ್‌ ಯೋಜನೆ ಕೊಟ್ಟಿದ್ಯಾರು? ಎಲ್ಲವನ್ನೂ ಮಾಡಿದ್ದು ನಿಮ್ಮ ಸಿದ್ದರಾಮಯ್ಯ.. ಹಾಗಾದ್ರೆ ಬಿಜೆಪಿ ಸರಕಾರ ಯಾವ್‌ ಯೋಜನೆ ಕೊಟ್ಟಿದೆ? ಮಿಸ್ಟರ್‌ ಯಡಿಯೂರಪ್ಪ.. ನಿಮ್ಮದೇನಪ್ಪ..?’ ಎಂದು ವಿಡಂಬನಾತ್ಮಕವಾಗಿ ಸಿದ್ದರಾಮಯ್ಯ ಕುಟುಕಿದರು.
Vijaya Karnataka Web by election campaign siddaramaiah takes on bs yeddyurappa and bjp government
'ಮಿಸ್ಟರ್‌ ಯಡಿಯೂರಪ್ಪ ನಿಮ್ಮದೇನಪ್ಪ'? ಸಿಎಂಗೆ ಸಿದ್ದು ಟಾಂಗ್! ​ಹೆಬ್ಬಾರ್ ಮಾರಾಟವಾಗಿದ್ದು ಸತ್ಯವಂತೆ


‘ರಾಜ್ಯದಲ್ಲಿ ಕಾಂಗ್ರೆಸ್‌ ಸರಕಾರ ಇದ್ದಾಗ ಜನಸಾಮಾನ್ಯರಿಗೆ, ಬಡವರಿಗೆ ಸಹಾಯವಾಗುವಂಥ ನಾನಾ ಯೋಜನೆಗಳನ್ನು ತಂದೆವು. ಆದರೆ ಈಗ ಚುನಾವಣಾ ಪ್ರಚಾರದ ಸಮಯದಲ್ಲಿ ಬಿಜೆಪಿಯವರು ಬಂದು ಬಣ್ಣದ ಮಾತುಗಳನ್ನು ಆಡುತ್ತಿದ್ದಾರೆ. ಅದರಿಂದ ಜನರ ಹೊಟ್ಟೆ ತುಂಬುವುದಿಲ್ಲ’ ಎಂದು ಸಿದ್ದರಾಮಯ್ಯ ಹೇಳಿದರು.

ಮತ್ತೆ ಕಾಂಗ್ರೆಸ್‌ ಅಧಿಕಾರಕ್ಕೆ

‘ಉಪ ಚುನಾವಣೆ ಫಲಿತಾಂಶದ ನಂತರ ಬಿಜೆಪಿ ಸರಕಾರ ಉರುಳಿ ಮಧ್ಯಂತರ ಚುನಾವಣೆ ನಡೆಯುತ್ತದೆ. ಮತ್ತೆ ಕಾಂಗ್ರೆಸ್‌ ಅಧಿಕಾರಕ್ಕೇರಲಿದೆ. ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚುತ್ತಿದೆ. ಯುವಕರು ಉದ್ಯೋಗ ಕೇಳಿದರೆ ಪ್ರಧಾನಿ ಮೋದಿ ಪಕೋಡಾ, ಬೋಂಡಾ ಮಾರಾಟ ಮಾಡಿ ಎನ್ನುತ್ತಿದ್ದಾರೆ. ಇವರೆಂಥ ಪ್ರಧಾನಿ’ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು.

ಹೊಸ ತಿರುವಿಗೆ ನಾಂದಿ ಹಾಡಿದ ಜಿಟಿ ದೇವೇಗೌಡ - ಶ್ರೀರಾಮುಲು ಭೇಟಿ

ಬಿಎಸ್‌ವೈ ಆಪರೇಶನ್‌ ಕಮಲದ ಪಿತಾಮಹ

ಯಲ್ಲಾಪುರದ ತಾಲೂಕಿನ ಕಿರವತ್ತಿಯಲ್ಲಿ ಮಾತನಾಡಿದ ಸಿದ್ದು, ‘ಯಡಿಯೂರಪ್ಪ ಆಪರೇಶನ್‌ ಕಮಲದ ಪಿತಾಮಹ. 2008ರಲ್ಲಿ 9 ಜನ ಶಾಸಕರನ್ನು ಆಪರೇಶನ್‌ ಕಮಲದ ಮೂಲಕ ಸೆಳೆದಿದ್ದರು. ಇದೀಗ 17 ಜನ ಶಾಸಕರಿಗೆ ಆಸೆ, ಆಮಿಷ ತೋರಿಸಿ ಸಮ್ಮಿಶ್ರ ಸರಕಾರವನ್ನು ಪತನಗೊಳಿಸಲಾಗಿದೆ’ ಎಂದು ಆರೋಪಿಸಿದರು.

ಜಾತಿ ಹೆಸ್ರಲ್ಲಿ ಮತಯಾಚನೆ - ಸಿಎಂ ವಿರುದ್ಧ ಚುನಾವಣಾ ಆಯೋಗಕ್ಕೆ ಜೆಡಿಎಸ್ ದೂರು

ಹೆಬ್ಬಾರ್ ಮಾರಾಟವಾಗಿದ್ದು ಸತ್ಯ

ಹಿಂದೆ ನಾವೆಲ್ಲ ಸಂತೆಯಲ್ಲಿ ಕುರಿ, ಕೋಳಿ, ಕೋಣ, ಎತ್ತು, ಎಮ್ಮೆಗಳ ವ್ಯಾಪಾರ ಆಗುತ್ತಿದ್ದನ್ನು ನೋಡುತ್ತಿದ್ದೆವು. ಇಂದು ಎಂಎಲ್‌ಎಗಳ ವ್ಯಾಪಾರವಾಗುತ್ತಿದೆ. ಯಲ್ಲಾಪುರ ಶಾಸಕರಾಗಿದ್ದ ಶಿವರಾಮ ಹೆಬ್ಬಾರ ಕೂಡಾ ಮಾರಾಟವಾಗಿದ್ದು ಸತ್ಯ ಎಂದು ಸಿದ್ದರಾಮಯ್ಯ ಹೇಳಿದರು.

‘ನೀವು ಸಿಎಂ ಆಗೋದಾದ್ರೆ ಓಟ್ ಹಾಕ್ತೀವಿ’- ಪರಂ ಮುಂದೆ ಗರಂ ಆದ ಗ್ರಾಮಸ್ಥರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ