ಆ್ಯಪ್ನಗರ

ಪರಿಶ್ರಮವಿದ್ದರೆ ಸಿಎ ತೇರ್ಗಡೆ ಹೊಂದಲು ಸಾಧ್ಯ

ಯಲ್ಲಾಪುರ : ವೃತ್ತಿಪರ ಕೋರ್ಸ್‌ಗಳ ಬಗ್ಗೆ ಮಾಹಿತಿ ಪಡೆಯಲು ದೂರದ ಊರುಗಳಿಗೆ ತೆರಳಬೇಕಾದ ಇಂದಿನ ಸಂದರ್ಭದಲ್ಲಿ ನಮ್ಮೂರಿನ ಕಾಲೇಜಿನಲ್ಲಿಯೇ ನೀಡುತ್ತಿರುವ ಈ ಸಿಎ ತರಬೇತಿಯು ವಿದ್ಯಾರ್ಥಿಗಳಿಗೆ ಹೆಚ್ಚು ಸಹಕಾರಿಯಾಗಲಿದೆ. ಎಂದು ಪದವಿ ಪೂರ್ವ ಶಿಕ್ಷ ಣ ಇಲಾಖೆಯ ನಿವೃತ್ತ ಉಪನಿರ್ದೇಶಕ ಕೆ.ಟಿ.ಭಟ್ಟ ಹೇಳಿದರು.

Vijaya Karnataka 25 Mar 2019, 5:00 am
ಯಲ್ಲಾಪುರ : ವೃತ್ತಿಪರ ಕೋರ್ಸ್‌ಗಳ ಬಗ್ಗೆ ಮಾಹಿತಿ ಪಡೆಯಲು ದೂರದ ಊರುಗಳಿಗೆ ತೆರಳಬೇಕಾದ ಇಂದಿನ ಸಂದರ್ಭದಲ್ಲಿ ನಮ್ಮೂರಿನ ಕಾಲೇಜಿನಲ್ಲಿಯೇ ನೀಡುತ್ತಿರುವ ಈ ಸಿಎ ತರಬೇತಿಯು ವಿದ್ಯಾರ್ಥಿಗಳಿಗೆ ಹೆಚ್ಚು ಸಹಕಾರಿಯಾಗಲಿದೆ. ಎಂದು ಪದವಿ ಪೂರ್ವ ಶಿಕ್ಷ ಣ ಇಲಾಖೆಯ ನಿವೃತ್ತ ಉಪನಿರ್ದೇಶಕ ಕೆ.ಟಿ.ಭಟ್ಟ ಹೇಳಿದರು.
Vijaya Karnataka Web KWR-24 YLP 3


ಅವರು ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಸನ್ನದು ಲೆಕ್ಕಪರಿಶೋಧಕರ ಸಂಘದ ಶಿರಸಿ ವಿಭಾಗ ಹಾಗೂ ಪಟ್ಟಣದ ಸ.ಪ್ರ.ದ ಕಾಲೇಜುಗಳ ಸಂಯುಕ್ತ ಆಶ್ರಯದಲ್ಲಿ ಸಿಎ ವೃತ್ತಿಪರ ಕೋರ್ಸಿನ ಕುರಿತು ಕರಿಯರ್‌ ಗೈಡನ್ಸ್‌ ಎಂಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಲೆಕ್ಕ ಪರಿಶೋಧಕರ ಸಂಘದ ಬೆಂಗಳೂರು ಶಾಖೆಯ ಅಧ್ಯಕ್ಷ ಸಿ.ಎ.ಶಿವರಾಮ ಭಟ್ಟ ನಾಳಶೇರು ಮಾತನಾಡಿ, ದೇಶವು ಸನ್ನದು ಲೆಕ್ಕಪರಿಶೋಧಕರ ಕೊರತೆ ಎದುರಿಸುತ್ತಿದ್ದು, ನಮ್ಮ ಪ್ರದೇಶದ ವಿದ್ಯಾರ್ಥಿಗಳು ಇತ್ತೀಚೆಗೆ ಹೆಚ್ಚಿನ ಸಂಖ್ಯೆಯಲ್ಲಿ ಸಿಎ ತೇರ್ಗಡೆ ಹೊಂದುತ್ತಿರುವುದು ಶ್ಲಾಘನೀಯ. ಕಠಿಣ ಪರಿಶ್ರಮದಿಂದ ಸಿಎ ಪರೀಕ್ಷೆಯನ್ನು ತೇರ್ಗಡೆ ಹೊಂದಬಹುದು ಎಂದ ಅವರು, ಇದು ಉಳಿದ ಉನ್ನತ ಶಿಕ್ಷ ಣ ಕಲಿಕೆಯ ವೆಚ್ಚಕ್ಕೆ ಹೋಲಿಸಿದರೆ ಅತ್ಯಂತ ಕಡಿಮೆ ವೆಚ್ಚದ ವೃತ್ತಿಪರ ಶಿಕ್ಷ ಣವಾಗಿದೆ. ಅದರಲ್ಲೂ ನಮ್ಮ ತಾಲೂಕಿನ ಅನೇಕ ವಿದ್ಯಾರ್ಥಿಗಳು ಸಾಕಷ್ಟು ಪ್ರತಿಭಾವಂತರಿದ್ದಾರೆ. ಉಳಿದ ಕ್ಷೇತ್ರದಲ್ಲಿ ಸಾಕಷ್ಟು ಸ್ಪರ್ಧೆ ಇದೆ. ಇಲ್ಲಿ ಸ್ಪರ್ಧೆ ಇಲ್ಲದೇ ಸತತ ಪರಿಶ್ರಮದಿಂದ ಈ ಪರೀಕ್ಷೆಯಲ್ಲಿ ಯಶಸ್ಸನ್ನು ಪಡೆಯಬಹುದು. ಅದಕ್ಕೆ ಕಳೆದ ಹಲವಾರು ವರ್ಷಗಳಿಂದ ನಮ್ಮ ತಾಲೂಕಿನ ಅನೇಕರು ಸಿ.ಎ. ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಿರುವುದೇ ಸಾಕ್ಷಿಯಾಗಿದೆ ಎಂದರು.

ಕಾಲೇಜು ಪ್ರಾಂಶುಪಾಲೆ ಡಾ.ದಾಕ್ಷಾಯಣಿ ಹೆಗಡೆ ಅಧ್ಯಕ್ಷ ತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿದ್ದ ಸಿಎ ಎಸ್‌.ಜಿ.ಹೆಗಡೆ ಶಿರಸಿ, ಸಿಎ ವೇಣುಗೋಪಾಲ ಹೆಗಡೆ ಮಾಹಿತಿ ನೀಡಿದರು.

ಗ್ರಂಥಪಾಲಕ ಎಂ.ಎಂ.ಹೆಬ್ಬಳ್ಳಿ, ಉಪನ್ಯಾಸಕ ದತ್ತಾತ್ರೇಯ ತಾಪಸ್‌ ಉಪಸ್ಥಿತರಿದ್ದರು. ಉಪನ್ಯಾಸಕ ಶರತ್‌ಕುಮಾರ ಪ್ರಾಸ್ತಾವಿಕ ಮಾತನಾಡಿದರು. ಸಿಎ ವಿN್ನೕಶ್ವರ ಗಾಂವ್ಕರ ಸ್ವಾಗತಿಸಿದರು. ಸಿಎ ಆರ್‌.ಎನ್‌.ಹೆಗಡೆ ವಂದಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ