ಕಾರವಾರ : ಸಿಎಎ ವಿರುದ್ಧ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಬಿಜೆಪಿ ಪರ ಶಕ್ತಿಗಳು ದಾಳಿ ನಡೆಸಿ ಸಾವು ನೋವಿಗೆ ದೇಶದ ರಾಜಧಾನಿ ದೆಹಲಿಯಲ್ಲಿಕಾರಣವಾಗಿರುವುದು ತೀವ್ರ ಕಳವಳಕಾರಿಯಾಗಿದೆ. ಈ ದಾಳಿಯನ್ನು ಸಿಪಿಐ(ಎಂ.) ಜಿಲ್ಲಾಸಮಿತಿ ತೀವ್ರವಾಗಿ ಖಂಡಿಸುತ್ತದೆ ಎಂದು ಜಿಲ್ಲಾಸಮಿತಿ ಕಾರ್ಯದರ್ಶಿ ಶಾಂತಾರಾಮ ನಾಯಕ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ,ಕೇಂದ್ರ ಸರಕಾರದ ಗೃಹ ಇಲಾಖೆಯ ವೈಫಲ್ಯ ಇದಾಗಿದ್ದು, ಕೂಡಲೇ ಶಾಂತಿ ಕಾಪಾಡಲು ಸರಕಾರ ಕ್ರಮ ತೆಗೆದುಕೊಳ್ಳಬೇಕು. ಪೊಲೀಸರ ಎದುರು ಗಲಭೆಕೋರರ ಗುಂಪುಗಳು ಗುಂಡು ಹಾರಿಸುತ್ತಿರುವುದು, ಕಲ್ಲುತೂರುತ್ತಿರುವುದು ಮತ್ತು ಸಿಕ್ಕ ಸಿಕ್ಕಲ್ಲಿಬೆಂಕಿ ಹಚ್ಚುತ್ತಿರುವುದು ಅರಾಜಕತೆ ತೋರಿಸುತ್ತದೆ. ಈ ಹಿಂಸಾಚಾರದ ಹಿಂದೆ ವ್ಯವಸ್ಥಿತ ಷಡ್ಯಂತ್ರ ನಡೆದಿರುವುದು ಕಂಡುಬರುತ್ತದೆ. ಗಲಭೆಕೋರರ ವಿರುದ್ಧ ಕೂಡಲೇ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಸರ್ಕಾರ ಶಾಂತಿ ನೆಲೆಸುವ ವಾತಾವರಣ ನಿರ್ಮಾಣ ಮಾಡಬೇಕೆಂದು ಅವರು ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ,ಕೇಂದ್ರ ಸರಕಾರದ ಗೃಹ ಇಲಾಖೆಯ ವೈಫಲ್ಯ ಇದಾಗಿದ್ದು, ಕೂಡಲೇ ಶಾಂತಿ ಕಾಪಾಡಲು ಸರಕಾರ ಕ್ರಮ ತೆಗೆದುಕೊಳ್ಳಬೇಕು. ಪೊಲೀಸರ ಎದುರು ಗಲಭೆಕೋರರ ಗುಂಪುಗಳು ಗುಂಡು ಹಾರಿಸುತ್ತಿರುವುದು, ಕಲ್ಲುತೂರುತ್ತಿರುವುದು ಮತ್ತು ಸಿಕ್ಕ ಸಿಕ್ಕಲ್ಲಿಬೆಂಕಿ ಹಚ್ಚುತ್ತಿರುವುದು ಅರಾಜಕತೆ ತೋರಿಸುತ್ತದೆ. ಈ ಹಿಂಸಾಚಾರದ ಹಿಂದೆ ವ್ಯವಸ್ಥಿತ ಷಡ್ಯಂತ್ರ ನಡೆದಿರುವುದು ಕಂಡುಬರುತ್ತದೆ. ಗಲಭೆಕೋರರ ವಿರುದ್ಧ ಕೂಡಲೇ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಸರ್ಕಾರ ಶಾಂತಿ ನೆಲೆಸುವ ವಾತಾವರಣ ನಿರ್ಮಾಣ ಮಾಡಬೇಕೆಂದು ಅವರು ಆಗ್ರಹಿಸಿದ್ದಾರೆ.