ಆ್ಯಪ್ನಗರ

‘ಪ್ರೊ’ದಿಂದ ಕ್ಯಾಂಪಸ್‌ ಸಂದರ್ಶನ 13ಕ್ಕೆ

ಕುಮಟಾ : ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮನೆ ಮಾತಾಗಿರುವ ಅಗ್ರಮಾನ್ಯ ಸಂಸ್ಥೆ 'ಪ್ರೊ' ಎ.ವಿ.ಬಾಳಿಗಾ ಕಾಲೇಜಿನಲ್ಲಿ ಡಿ.13ರಂದು ಕ್ಯಾಂಪಸ್‌ ಸಂದರ್ಶನ ನಡೆಸಲಿದೆ ಎಂದು ಪ್ರಾಚಾರ್ಯ ಯು.ಜಿ.ಶಾಸ್ತ್ರಿ ತಿಳಿಸಿದ್ದಾರೆ.

Vijaya Karnataka 7 Dec 2018, 5:00 am
ಕುಮಟಾ : ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮನೆ ಮಾತಾಗಿರುವ ಅಗ್ರಮಾನ್ಯ ಸಂಸ್ಥೆ 'ಪ್ರೊ' ಎ.ವಿ.ಬಾಳಿಗಾ ಕಾಲೇಜಿನಲ್ಲಿ ಡಿ.13ರಂದು ಕ್ಯಾಂಪಸ್‌ ಸಂದರ್ಶನ ನಡೆಸಲಿದೆ ಎಂದು ಪ್ರಾಚಾರ್ಯ ಯು.ಜಿ.ಶಾಸ್ತ್ರಿ ತಿಳಿಸಿದ್ದಾರೆ.
Vijaya Karnataka Web campus interview from pro to 13
‘ಪ್ರೊ’ದಿಂದ ಕ್ಯಾಂಪಸ್‌ ಸಂದರ್ಶನ 13ಕ್ಕೆ


ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡಬ್ಲ್ಯೂ.ಐ.ಎಲ್‌.ಪಿ, ಡಬ್ಲ್ಯೂ.ಎ.ಎಸ್‌.ಇ. ಮತ್ತು ಡಬ್ಲ್ಯೂ.ಐ.ಎಂ.ಎಸ್‌. ಕೋರ್ಸುಗಳಿಗೆ ಅಂತಿಮ ವರ್ಷದ ವಿಜ್ಞಾನ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಿದ್ದಾರೆ. ಡಬ್ಲ್ಯೂ.ಎ.ಎಸ್‌.ಇ. ಮತ್ತು ಡಬ್ಲ್ಯೂ.ಐ.ಎಂ.ಎಸ್‌. ವಿಶಿಷ್ಟ ಕಲಿಕೆಯ ಜೊತೆಯಲ್ಲಿನ ತರಬೇತಿ ಕೋರ್ಸುಗಳಾಗಿದ್ದು, ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳ ಬಯಸುವವರಿಗೆ ದೇಶದ ಪ್ರತಿಷ್ಠಿತ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳಲ್ಲಿ ಎಂ.ಟೆಕ್‌. ಪದವಿ ಪಡೆದುಕೊಳ್ಳಲು ಅವಕಾಶ ಕಲ್ಪಿಸಿಕೊಡಲಿದೆ. ಈ ಸ್ನಾತಕೋತ್ತರ ಪದವಿಯ ಸಂಪೂರ್ಣ ಪ್ರಾಯೋಜಕತ್ವವನ್ನು ವಿಪ್ರೋ ಸಂಸ್ಥೆ ವಹಿಸಿಕೊಳ್ಳಲಿದೆ ಎಂದು ವಿವರಿಸಿದರು.

ಎಸ್‌ಎಸ್‌ಎಲ್‌ಸಿಯಲ್ಲಿ ಕನಿಷ್ಠ 50, ದ್ವಿತೀಯ ಪಿಯುಸಿಯಲ್ಲಿ ಕನಿಷ್ಠ 50, ಪದವಿಯಲ್ಲಿ ಕನಿಷ್ಠ 60 ಅಂಕ ಪಡೆದಿರಬೇಕು. ಅಧ್ಯಯನ ಅವಧಿಯಲ್ಲಿ ಗರಿಷ್ಠ ಮೂರು ವರ್ಷಗಳ ಅಂತರವಿರಬೇಕು. ಹಿಂದಿನ ವಿಷಯಗಳು ಬಾಕಿ ಇರಕೂಡದು. ಬಿಎಸ್‌ಸಿ(ಸಿಎಸ್‌, ಐಟಿ, ಗಣಿತ, ಸಂಖ್ಯಾಶಾಸ್ತ್ರ, ಇಲೆಕ್ಟ್ರಾನಿಕ್ಸ್‌ ಮತ್ತು ಭೌತಶಾಸ್ತ್ರ), ಬಿಸಿಎ, ಐಚ್ಛಿಕ ವಿಷಯವಾಗಿ ಗಣಿತ ಕಡ್ಡಾಯ. 60 ತಿಂಗಳು ತರಬೇತಿ ಒಪ್ಪಂದ 75,000 ರೂ. ಸ್ಟೈಫಂಡ್‌ ನೀಡಲಾಗುವುದು. ಶಾಬ್ದಿಕ, ವಿಶ್ಲೇಷಣಾತ್ಮಕ, ಪರಿಮಾಣಾತ್ಮಕ ವಿಧಾನದ ಮೂಲಕ ಆಯ್ಕೆ ಮಾಡಲಾಗುವುದು. ಪ್ರತಿ ವಿಭಾಗಕ್ಕೆ 20 ನಿಮಿಷ ಅವಧಿ ನಿಗದಿ ಪಡಿಸಿ, 20 ಪ್ರಶ್ನೆ ನೀಡಲಾಗುವುದು. ಲಿಖಿತ ಸಂವಹನ ಪರೀಕ್ಷೆ 20 ನಿಮಿಷ. ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು ಎಂದು ಶಾಸ್ತ್ರಿ ತಿಳಿಸಿದರು.

ಅರ್ಜಿ ಆನ್‌ಲೈನ್‌ ನೋಂದಣಿ ಮಾಡಬೇಕು. ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ ಒಂದರಿಂದ ನಾಲ್ಕನೇ ಸೆಮಿಸ್ಟರ್‌ ಝೆರಾಕ್ಸ್‌ ಪ್ರತಿಗಳು, ಭಾವಚಿತ್ರ, ಗುರುತಿನ ಪತ್ರ ಪೂರೈಸಬೇಕು. ಸ್ಥಳದಲ್ಲಿ ನೋಂದಣಿಗೆ ಅವಕಾಶವಿಲ್ಲ. ಅಭ್ಯರ್ಥಿಗಳು ಸಂದರ್ಶನಕ್ಕೆ ಕನಿಷ್ಠ 2 ದಿನ ಮೊದಲು ಅಂದರೆ ಡಿಸೆಂಬರ್‌ 10ರೊಳಗೆ ನೋಂದಣಿ ಪ್ರಕ್ರಿಯೆ ಮುಗಿಸಬೇಕು. ಉತ್ತರ ಕನ್ನಡ ಜಿಲ್ಲೆಯ ಎಲ್ಲ ಕಾಲೇಜುಗಳಿಗೆ ಈಗಾಗಲೇ ಮಾಹಿತಿ ನೀಡಲಾಗಿದೆ. ಸಂದರ್ಶನಕ್ಕೆ ಕನಿಷ್ಠ 150 ಅಭ್ಯರ್ಥಿಗಳು ಹಾಜರಿರಬೇಕು. ಜಿಲ್ಲೆಯ ವಿದ್ಯಾರ್ಥಿಗಳಿಗೆ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಭವಿಷ್ಯ ರೂಪಿಸಿಕೊಳ್ಳಲು ಇದೊಂದು ಸುವರ್ಣಾವಕಾಶ. ಹೀಗಾಗಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಆಯ್ಕೆ ಪ್ರಕ್ರಿಯೆ ಯಶಸ್ವಿಗೊಳಿಸಬೇಕೆಂದು ಪ್ರಾಚಾರ್ಯರು ಮನವಿ ಮಾಡಿಕೊಂಡಿದ್ದಾರೆ. ಹೆಚ್ಚಿನ ಮಾಹಿತಿಗೆ ಡಾ.ಎಸ್‌.ವಿ.ಗಾಂವಕರ -9448906567, ಡಾ.ಪ್ರಕಾಶ ಪಂಡಿತ್‌-9448408663 ಇವರನ್ನು ಸಂಪರ್ಕಿಸಬಹುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಆಡಳಿತ ಸಮಿತಿಯ ಕಾರ್ಯಾಧ್ಯಕ್ಷ ಮುರಳೀಧರ ಪ್ರಭು, ಪ್ರೊ.ಎಂ.ಜಿ.ನಾಯ್ಕ, ವಿನೋದ ಪ್ರಭು ಮೊದಲಾದವರು ಉಪಸ್ಥಿತರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ