ಶಿರಸಿ : ಕೈಗಾ 5-6ನೇ ಘಟಕದ ಸ್ಥಾಪನೆಗೆ 2017ರಲ್ಲಿ ಜಿಲ್ಲಾ ಪಂಚಾಯಿತಿ ವಿರೋಧ ವ್ಯಕ್ತಪಡಿಸಿರುವುದು ಜಿಲ್ಲೆಯ ಸಾರ್ವತ್ರಿಕ ಅಭಿಪ್ರಾಯವಾಗಿದ್ದು ಕೈಗಾ 5-6ನೇ ಘಟಕದ ಸ್ಥಾಪನೆಯ ವಿಚಾರವನ್ನು ಕೇಂದ್ರ ಸರಕಾರ ತಕ್ಷ ಣ ಕೈಬಿಡಬೇಕು. ಡಿ.15ರಂದು ಕೈಗಾದಲ್ಲಿ ನಡೆಸುವ ಸಾರ್ವಜನಿಕ ಅಹವಾಲು ಸಭೆ ತಕ್ಷ ಣ ರದ್ದುಗೊಳಿಸಬೇಕು ಎಂದು ಜಿಲ್ಲಾ ಅರಣ್ಯ ಅತಿಕ್ರಮಣದಾರ ಹೋರಾಟಗಾರರ ವೇದಿಕೆ ಅಧ್ಯಕ್ಷ ಎ.ರವೀಂದ್ರ ನಾಯ್ಕ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಈಗಾಗಲೇ ಜಿಲ್ಲಾ ಪಂಚಾಯಿತಿ ನಿರ್ಣಯದೊಂದಿಗೆ ಜಿಲ್ಲೆಯ ಇನ್ನಿತರ ತಾಲೂಕು ಮತ್ತು ಸ್ಥಳೀಯ ಮಟ್ಟದ ಕಾನೂನು ಬದ್ಧ ಸ್ಥಳೀಯ ಸಂಸ್ಥೆಗಳಲ್ಲಿ ನಿರ್ಣಯಿಸಿರುವುದು ಜಿಲ್ಲೆಯ ಸಾರ್ವತ್ರಿಕ ಅಭಿಪ್ರಾಯ ಎಂಬುದನ್ನು ಕೇಂದ್ರ ಸರಕಾರ ಗಣನೆಗೆ ತೆಗೆದುಕೊಳ್ಳಬೇಕು ಎಂದರು.
ಜನಪ್ರತಿನಿಧಿ, ಸರಕಾರೇತರ ಸಂಸ್ಥೆಯ ಪರಿಸರ ತಜ್ಞ, ವಿಜ್ಞಾನಿ ಹಾಗೂ ಆಸಕ್ತರ ಪ್ರತಿನಿಧಿಗಳು ಇಲ್ಲದ ಕೇಂದ್ರ ಸರಕಾರದ ಅಧೀನದಲ್ಲಿನ ಮೆಕಾನ್ ಸಂಸ್ಥೆ ತಯಾರಿಸಿದ ವರದಿ ಏಕಪಕ್ಷೀಯ ಹಾಗೂ ಆಧಾರ ರಹಿತವಾಗಿರುವುದರಿಂದ ಈ ವರದಿ ತಿರಸ್ಕರಿಸಿ ಸರಕಾರದ ನಿಯಂತ್ರಣವಿಲ್ಲದ ಮೂರನೆ ಸಂಸ್ಥೆಯಿಂದ ಪ್ರಾಯೋಜಿತ ಘಟಕದ ಅಧ್ಯಯನದ ವರದಿಯನ್ನು ತಯಾರಿಸಬೇಕು ಎಂದು ಕೇಂದ್ರ ಸರಕಾರವನ್ನು ಒತ್ತಾಯಿಸಿದರು.
ನಿಯೋಜಿತ 5 ಮತ್ತು 6ನೇ ಘಟಕ ನಿರ್ಮಾಣ ಯೋಜನೆಯಿಂದ ಪರಮಾಣು ವಿದ್ಯುತ್ ದುಬಾರಿ, ಅಪಾಯಕಾರಿ, ಮುಂದಿನ ಪೀಳಿಗೆಗೆ ಹೆಮ್ಮಾರಿಯಾಗಿದ್ದು, ಕೈಗಾದ ಅಪಾಯಕಾರಿ ಅಣು ತಾಜ್ಯ ಉಡಿಯಲ್ಲಿ ಇಟ್ಟುಕೊಂಡ ಕೆಂಡದಂತಾಗಿದೆ. ಗಾಳಿಗೆ ನೀರಿಗೆ ವಿಕಿರಣ ಸೂಸುತ್ತಲೇ ಇರುತ್ತದೆ. ಕ್ಯಾನ್ಸರ್, ಕರುಳಿನ ಹುಣ್ಣು, ಯಕೃತ್ತಿನ ಊತ, ಶ್ವಾಸಕೋಶ ಹುಣ್ಣು, ಅಪಾಂಗ ಶಿಶುಗಳ ಜನನ, ಸ್ತ್ರೀರೋಗ ಇವೆಲ್ಲ ಕೈಗಾ ಸುತ್ತ ಹೆಚ್ಚುತಲೇ ಇವೆ ಎಂಬುದು ಜನಜನಿತ ಸಂಗತಿ. ಅಣುವಿಕಿರಣ ದೊಡ್ಡ ಪ್ರಮಾಣದಲ್ಲಿ ಸೂಸಿದರೆ ಕೃಷಿ, ತೋಟಗಾರಿಕಾ ಉತ್ಪನ್ನ, ಆರ್ಥಿಕತೆ ನೆಲಕಚ್ಚಬಹುದು. ಕೈಗಾದಿಂದ ಇನ್ನೊಂದು ಬೃಹತ್ ವಿದ್ಯುತ್ ತಂತಿಮಾರ್ಗ ನಿರ್ಮಾಣವಾದರೆ ಒಂದು ಲಕ್ಷ ಮರಗಳ ನಾಶ ಖಂಡಿತ. ಜನ, ಜಂಗಲ್, ಜಾನುವಾರು ಜಲದ ಮೇಲೆ ಅಣುಸ್ಥಾವರದಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಸ್ವತಂತ್ರ ಅಧ್ಯಯನ ನಡೆದಿಲ್ಲ. ಇಂದು ಸೌರ ವಿದ್ಯುತ್ ಅಗ್ಗವಾಗಿದೆ. ಕೈಗಾ 5-6 ನೇ ಘಟಕ ಕೈಬಿಟ್ಟು ಸೋಲಾರ ಸ್ಥಾವರ ಸ್ಥಾಪಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಇದು ಅಪಾಯಕಾರಿ ಪರಿಸರ ವಿರೋಧಿ ಆಗಿರುವುದಲ್ಲದೇ, ಅರಣ್ಯ ಪ್ರದೇಶದಲ್ಲಿ ವಾಸ್ತವ್ಯ ಹಾಗೂ ಜೀವನಕ್ಕಾಗಿ ಅವಲಂಬಿತವಾಗಿರುವ ಅರಣ್ಯವಾಸಿಗಳ ಜೀವನಕ್ಕೆ ಅಪಾಯಕಾರಿ ಆಗುವ ಪ್ರಸಂಗ ಬರುವುದರಿಂದ ಜಿಲ್ಲಾ ಅರಣ್ಯ ಅತಿಕ್ರಮಣದಾರ ಹೋರಾಟಗಾರರ ವೇದಿಕೆಯು ನಿಯೋಜಿತ 5 ಮತ್ತು 6 ನೇ ಘಟಕಕ್ಕೆ ತೀವ್ರ ವಿರೋಧವನ್ನು ವ್ಯಕ್ತಪಡಿಸುತ್ತದೆ ಎಂದು ಅವರು ತಿಳಿಸಿದ್ದಾರೆ.
ಸ್ವಾಮೀಜಿ ಹೋರಾಟಕ್ಕೆ ಬೆಂಬಲ: : ಕೈಗಾ 5 ಮತ್ತು 6 ನೇ ಯೋಜನೆಗೆ ವಿರೋಧಿಸಿ ಸೋಂದಾ ಸ್ವರ್ಣವಲ್ಲಿ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿಯವರ ನೇತೃತ್ವದ ಹೋರಾಟಕ್ಕೆ ಜಿಲ್ಲಾ ಅರಣ್ಯ ಅತಿಕ್ರಮಣದಾರ ಹೋರಾಟಗಾರರ ವೇದಿಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತದೆ. ಕೇಂದ್ರ ಸರ್ಕಾರದ ಪರಿಸರ ವಿರೋಧಿ ನೀತಿಯನ್ನು ಖಂಡಿಸುತ್ತದೆ ಎಂದು ವೇದಿಕೆ ಅಧ್ಯಕ್ಷ ಎ.ರವೀಂದ್ರ ನಾಯ್ಕ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಈಗಾಗಲೇ ಜಿಲ್ಲಾ ಪಂಚಾಯಿತಿ ನಿರ್ಣಯದೊಂದಿಗೆ ಜಿಲ್ಲೆಯ ಇನ್ನಿತರ ತಾಲೂಕು ಮತ್ತು ಸ್ಥಳೀಯ ಮಟ್ಟದ ಕಾನೂನು ಬದ್ಧ ಸ್ಥಳೀಯ ಸಂಸ್ಥೆಗಳಲ್ಲಿ ನಿರ್ಣಯಿಸಿರುವುದು ಜಿಲ್ಲೆಯ ಸಾರ್ವತ್ರಿಕ ಅಭಿಪ್ರಾಯ ಎಂಬುದನ್ನು ಕೇಂದ್ರ ಸರಕಾರ ಗಣನೆಗೆ ತೆಗೆದುಕೊಳ್ಳಬೇಕು ಎಂದರು.
ಜನಪ್ರತಿನಿಧಿ, ಸರಕಾರೇತರ ಸಂಸ್ಥೆಯ ಪರಿಸರ ತಜ್ಞ, ವಿಜ್ಞಾನಿ ಹಾಗೂ ಆಸಕ್ತರ ಪ್ರತಿನಿಧಿಗಳು ಇಲ್ಲದ ಕೇಂದ್ರ ಸರಕಾರದ ಅಧೀನದಲ್ಲಿನ ಮೆಕಾನ್ ಸಂಸ್ಥೆ ತಯಾರಿಸಿದ ವರದಿ ಏಕಪಕ್ಷೀಯ ಹಾಗೂ ಆಧಾರ ರಹಿತವಾಗಿರುವುದರಿಂದ ಈ ವರದಿ ತಿರಸ್ಕರಿಸಿ ಸರಕಾರದ ನಿಯಂತ್ರಣವಿಲ್ಲದ ಮೂರನೆ ಸಂಸ್ಥೆಯಿಂದ ಪ್ರಾಯೋಜಿತ ಘಟಕದ ಅಧ್ಯಯನದ ವರದಿಯನ್ನು ತಯಾರಿಸಬೇಕು ಎಂದು ಕೇಂದ್ರ ಸರಕಾರವನ್ನು ಒತ್ತಾಯಿಸಿದರು.
ನಿಯೋಜಿತ 5 ಮತ್ತು 6ನೇ ಘಟಕ ನಿರ್ಮಾಣ ಯೋಜನೆಯಿಂದ ಪರಮಾಣು ವಿದ್ಯುತ್ ದುಬಾರಿ, ಅಪಾಯಕಾರಿ, ಮುಂದಿನ ಪೀಳಿಗೆಗೆ ಹೆಮ್ಮಾರಿಯಾಗಿದ್ದು, ಕೈಗಾದ ಅಪಾಯಕಾರಿ ಅಣು ತಾಜ್ಯ ಉಡಿಯಲ್ಲಿ ಇಟ್ಟುಕೊಂಡ ಕೆಂಡದಂತಾಗಿದೆ. ಗಾಳಿಗೆ ನೀರಿಗೆ ವಿಕಿರಣ ಸೂಸುತ್ತಲೇ ಇರುತ್ತದೆ. ಕ್ಯಾನ್ಸರ್, ಕರುಳಿನ ಹುಣ್ಣು, ಯಕೃತ್ತಿನ ಊತ, ಶ್ವಾಸಕೋಶ ಹುಣ್ಣು, ಅಪಾಂಗ ಶಿಶುಗಳ ಜನನ, ಸ್ತ್ರೀರೋಗ ಇವೆಲ್ಲ ಕೈಗಾ ಸುತ್ತ ಹೆಚ್ಚುತಲೇ ಇವೆ ಎಂಬುದು ಜನಜನಿತ ಸಂಗತಿ. ಅಣುವಿಕಿರಣ ದೊಡ್ಡ ಪ್ರಮಾಣದಲ್ಲಿ ಸೂಸಿದರೆ ಕೃಷಿ, ತೋಟಗಾರಿಕಾ ಉತ್ಪನ್ನ, ಆರ್ಥಿಕತೆ ನೆಲಕಚ್ಚಬಹುದು. ಕೈಗಾದಿಂದ ಇನ್ನೊಂದು ಬೃಹತ್ ವಿದ್ಯುತ್ ತಂತಿಮಾರ್ಗ ನಿರ್ಮಾಣವಾದರೆ ಒಂದು ಲಕ್ಷ ಮರಗಳ ನಾಶ ಖಂಡಿತ. ಜನ, ಜಂಗಲ್, ಜಾನುವಾರು ಜಲದ ಮೇಲೆ ಅಣುಸ್ಥಾವರದಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಸ್ವತಂತ್ರ ಅಧ್ಯಯನ ನಡೆದಿಲ್ಲ. ಇಂದು ಸೌರ ವಿದ್ಯುತ್ ಅಗ್ಗವಾಗಿದೆ. ಕೈಗಾ 5-6 ನೇ ಘಟಕ ಕೈಬಿಟ್ಟು ಸೋಲಾರ ಸ್ಥಾವರ ಸ್ಥಾಪಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಇದು ಅಪಾಯಕಾರಿ ಪರಿಸರ ವಿರೋಧಿ ಆಗಿರುವುದಲ್ಲದೇ, ಅರಣ್ಯ ಪ್ರದೇಶದಲ್ಲಿ ವಾಸ್ತವ್ಯ ಹಾಗೂ ಜೀವನಕ್ಕಾಗಿ ಅವಲಂಬಿತವಾಗಿರುವ ಅರಣ್ಯವಾಸಿಗಳ ಜೀವನಕ್ಕೆ ಅಪಾಯಕಾರಿ ಆಗುವ ಪ್ರಸಂಗ ಬರುವುದರಿಂದ ಜಿಲ್ಲಾ ಅರಣ್ಯ ಅತಿಕ್ರಮಣದಾರ ಹೋರಾಟಗಾರರ ವೇದಿಕೆಯು ನಿಯೋಜಿತ 5 ಮತ್ತು 6 ನೇ ಘಟಕಕ್ಕೆ ತೀವ್ರ ವಿರೋಧವನ್ನು ವ್ಯಕ್ತಪಡಿಸುತ್ತದೆ ಎಂದು ಅವರು ತಿಳಿಸಿದ್ದಾರೆ.
ಸ್ವಾಮೀಜಿ ಹೋರಾಟಕ್ಕೆ ಬೆಂಬಲ: : ಕೈಗಾ 5 ಮತ್ತು 6 ನೇ ಯೋಜನೆಗೆ ವಿರೋಧಿಸಿ ಸೋಂದಾ ಸ್ವರ್ಣವಲ್ಲಿ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿಯವರ ನೇತೃತ್ವದ ಹೋರಾಟಕ್ಕೆ ಜಿಲ್ಲಾ ಅರಣ್ಯ ಅತಿಕ್ರಮಣದಾರ ಹೋರಾಟಗಾರರ ವೇದಿಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತದೆ. ಕೇಂದ್ರ ಸರ್ಕಾರದ ಪರಿಸರ ವಿರೋಧಿ ನೀತಿಯನ್ನು ಖಂಡಿಸುತ್ತದೆ ಎಂದು ವೇದಿಕೆ ಅಧ್ಯಕ್ಷ ಎ.ರವೀಂದ್ರ ನಾಯ್ಕ ತಿಳಿಸಿದ್ದಾರೆ.