ಆ್ಯಪ್ನಗರ

ಸುದ್ದಿ ಆಧರಿಸಿ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ: ಆರ್‌ವಿಡಿ

ಕಾರವಾರ : ಯಾವುದೇ ಶಾಸಕರು ರಾಜೀನಾಮೆ ಕೊಟ್ಟಿರುವ ಬಗ್ಗೆ ಖಚಿತ ಮಾಹಿತಿ ಇಲ್ಲ. ಮಾಧ್ಯಮಗಳ ಸುದ್ದಿ ಆಧಾರದಲ್ಲಿ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ. ಶಾಸಕರು ಸ್ಪೀಕರ್‌ ರಮೇಶಕುಮಾರ ಕೈಯಲ್ಲಿ ರಾಜೀನಾಮೆ ಪತ್ರ ನೀಡಿದ ದೃಶ್ಯ ತಮಗೆ ಎಲ್ಲಿಯೂ ಕಂಡಿಲ್ಲ ಎಂದು ಸಚಿವ ಆರ್‌. ವಿ. ದೇಶಪಾಂಡೆ ಹೇಳಿದರು.

Vijaya Karnataka 7 Jul 2019, 5:00 am
ಕಾರವಾರ : ಯಾವುದೇ ಶಾಸಕರು ರಾಜೀನಾಮೆ ಕೊಟ್ಟಿರುವ ಬಗ್ಗೆ ಖಚಿತ ಮಾಹಿತಿ ಇಲ್ಲ. ಮಾಧ್ಯಮಗಳ ಸುದ್ದಿ ಆಧಾರದಲ್ಲಿ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ. ಶಾಸಕರು ಸ್ಪೀಕರ್‌ ರಮೇಶಕುಮಾರ ಕೈಯಲ್ಲಿ ರಾಜೀನಾಮೆ ಪತ್ರ ನೀಡಿದ ದೃಶ್ಯ ತಮಗೆ ಎಲ್ಲಿಯೂ ಕಂಡಿಲ್ಲ ಎಂದು ಸಚಿವ ಆರ್‌. ವಿ. ದೇಶಪಾಂಡೆ ಹೇಳಿದರು.
Vijaya Karnataka Web cant comment based on news rvd
ಸುದ್ದಿ ಆಧರಿಸಿ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ: ಆರ್‌ವಿಡಿ


ಜೊಯಿಡಾದಲ್ಲಿ ಶನಿವಾರ ಆಸ್ಪತ್ರೆ ಕಟ್ಟಡ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ ತಮ್ಮ ಬಗ್ಗೆ ಅಸಮಧಾನ ಹೊಂದಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಆರ್‌ವಿಡಿ, ''ಹೆಬ್ಬಾರ ಅವರಿಗೆ ಈಗಾಗಲೇ ಎನ್‌ಡಬ್ಲುಕೆಆರ್‌ಟಿಸಿ ಅಧ್ಯಕ್ಷ ಹುದ್ದೆ ನೀಡಲಾಗಿದೆ. ಅವರು ತಮ್ಮ ಹುದ್ದೆಯಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರು ನನ್ನ ಬಗ್ಗೆಯಾಗಲಿ ಅಥವಾ ತಮಗೆ ನೀಡಿದ ಹುದ್ದೆಯ ಬಗೆಗಾಗಲಿ ಅತೃಪ್ತಿ ವ್ಯಕ್ತಪಡಿಸಿರುವ ಕುರಿತು ಮಾಹಿತಿ ಇಲ್ಲ'' ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ