ಆ್ಯಪ್ನಗರ

ಬಂದೂಕೂ ಇದ್ರೂ ಬಳಸುವಂತಿಲ್ಲ!

ಕಾರವಾರ : ಜಿಲ್ಲೆಯಲ್ಲಿಕಾಡು ಪ್ರಾಣಿಗಳಿಂದ ಬೆಳೆ ರಕ್ಷಣೆ ಸಲುವಾಗಿ ಪಡೆದ ಬಂದೂಕುಗಳ ಲೈಸೆನ್ಸ್‌ ನವೀಕರಣ ವಿಪರೀತ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿರೈತರು ಸಂಕಷ್ಟ ಅನುಭವಿಸುವಂತಾಗಿದೆ. ಬಂದೂಕು ಇದ್ದರೂ ಪ್ರಯೋಜನಕ್ಕೆ ಬಾರದಂತಾಗಿದ್ದು ಬೆಳೆಗಳು ಪ್ರಾಣಿಗಳಿಗೆ ಆಹಾರವಾಗುವುದನ್ನು ಮೂಕ ಪ್ರೇಕ್ಷಕರಂತೆ ನೋಡಬೇಕಾಗಿದೆ ಎಂಬುದು ಕೃಷಿಕರ ಅಳಲು.

Vijaya Karnataka 18 Mar 2020, 5:00 am
ಕಾರವಾರ : ಜಿಲ್ಲೆಯಲ್ಲಿಕಾಡು ಪ್ರಾಣಿಗಳಿಂದ ಬೆಳೆ ರಕ್ಷಣೆ ಸಲುವಾಗಿ ಪಡೆದ ಬಂದೂಕುಗಳ ಲೈಸೆನ್ಸ್‌ ನವೀಕರಣ ವಿಪರೀತ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿರೈತರು ಸಂಕಷ್ಟ ಅನುಭವಿಸುವಂತಾಗಿದೆ. ಬಂದೂಕು ಇದ್ದರೂ ಪ್ರಯೋಜನಕ್ಕೆ ಬಾರದಂತಾಗಿದ್ದು ಬೆಳೆಗಳು ಪ್ರಾಣಿಗಳಿಗೆ ಆಹಾರವಾಗುವುದನ್ನು ಮೂಕ ಪ್ರೇಕ್ಷಕರಂತೆ ನೋಡಬೇಕಾಗಿದೆ ಎಂಬುದು ಕೃಷಿಕರ ಅಳಲು.
Vijaya Karnataka Web cant use it
ಬಂದೂಕೂ ಇದ್ರೂ ಬಳಸುವಂತಿಲ್ಲ!


ಶೇ. 80ರಷ್ಟು ಅರಣ್ಯ ಪ್ರದೇಶವನ್ನೇ ಹೊಂದಿರುವ ಉತ್ತರಕನ್ನಡದಲ್ಲಿಬಹುತೇಕ ಕೃಷಿ ಭೂಮಿ ಅರಣ್ಯದ ಅಂಚಿನಲ್ಲಿವೆ. ಬೆಳೆಗಳಿಗೆ ನಿರಂತರವಾಗಿ ಕಾಡು ಪ್ರಾಣಿಗಳ ಕಾಟದಿಂದ ರೈತರು ಅಕ್ಷರಶಃ ಬೇಸತ್ತು ಹೋಗಿದ್ದಾರೆ. ಆನೆಗಳು, ಮಂಗ, ಕಾಡು ಹಂದಿಯಿಂದ ಹಿಡಿದು ಅಳಿಲು, ಮೊಲ ಮೊದಲಾದ ಸಣ್ಣ ಪ್ರಾಣಿಗಳೂ ಸಹ ಕೃಷಿ ಭೂಮಿಗೆ ಹಿಂಡು ಹಿಂಡಾಗಿ ಬಂದು ದಾಳಿ ಮಾಡಿ ಬೆಳೆ ನಾಶ ಮಾಡುತ್ತವೆ.

ಇತ್ತ ಅರಣ್ಯ ಇಲಾಖೆಯವರೂ ಸಹ ಕಾಡು ಪ್ರಾಣಿಗಳ ಹಾವಳಿಯಿಂದಾದ ಬೆಳೆ ನಾಶಕ್ಕೆ ಅಷ್ಟಿಷ್ಟು ಪರಿಹಾರ ಕೊಟ್ಟು ಕೈ ತೊಳೆದುಕೊಳ್ಳುತ್ತಾರೆ ವಿನಃ ಕಾಡು ಪ್ರಾಣಿಗಳ ನಿಯಂತ್ರಣಕ್ಕೆ ವೈಜ್ಞಾನಿಕ ಕ್ರಮ ಅನುಸರಿಸುವ ಗೋಜಿಗೆ ಹೋಗುತ್ತಿಲ್ಲ. ಇನ್ನೊಂದೆಡೆ ಪ್ರಾಣಿಗಳನ್ನು ಬೆದರಿಸಿ ಓಡಿಸಲು ಬಂದೂಕು ಪಡೆದಿದ್ದರೂ ಲೈಸೆನ್ಸ್‌ ನವೀಕರಣಕ್ಕೇ 2-3 ತಿಂಗಳು ಹಿಡಿಯುತ್ತಿದೆ. ಇದರಿಂದ ಬೆಳೆ ಪ್ರಾರಂಭವಾಗುವ ಅವಧಿಯಲ್ಲಿಕಾಡು ಪ್ರಾಣಿಗಳ ಹಾವಳಿಯನ್ನು ನೋಡಿ ರೈತರು ಮರುಗುವಂತಾಗಿದೆ.

ಇದು ಹಂಗಾಮು ಪ್ರಾರಂಭ : ಘಟ್ಟದ ಮೇಲ್ಭಾಗದಲ್ಲಿಪ್ರಧಾನ ಬೆಳೆಯಾದ ಅಡಕೆ ಈಗ ಸಿಂಗಾರ ಒಡೆದು ಕಾಯಿ ಕಚ್ಚುವ ಅವಧಿಯಾಗಿದೆ. ಅಡಕೆ ತೋಟಗಳಿಗೆ ಮಂಗಗಳ ಹಾವಳಿ ವಿಪರೀತವಾಗಿದ್ದು ಮಿಳ್ಳೆ ಮತ್ತು ಸಿಂಗಾರವನ್ನು ಸಂಪೂರ್ಣ ನಾಶ ಮಾಡುತ್ತವೆ. ಬಂದೂಕು ಸಿಡಿಸಿ ಮಂಗಗಳನ್ನು ಬೆದರಿಸೋಣವೆಂದರೆ ಪಡೆದ ಬಂದೂಕು ಲೈಸೆನ್ಸ್‌ ನವೀಕರಣವಾಗದ ಕಾರಣ ಪೊಲೀಸ್‌ ಸ್ಟೇಷನ್‌ನಲ್ಲೇ ಅಡಮಾನ ಇಡಲಾಗಿದೆ ಎಂದು ಶಿರಸಿ ತಾಲೂಕು ಹೆಗಡೆಕಟ್ಟೆಯ ಕೃಷ್ಣ ಹೆಗಡೆ ಅಳಲು ತೋಡಿಕೊಂಡರು. ನಾವೇನೂ ಬಂದೂಕಿನಿಂದ ಪ್ರಾಣಿಗಳನ್ನು ಬೇಟೆಯಾಡುವವರಲ್ಲ. ಕಾಡು ಪ್ರಾಣಿಗಳನ್ನು ಬೆದರಿಸಲು ಮಾತ್ರ ಬಳಸುತ್ತೇವೆ. ಸದ್ಯ ಕಾಡು ಪ್ರಾಣಿಗಳಿಂದ ಬೆಳೆ ರಕ್ಷಣೆಗೆ ನಮಗಿರುವುದು ಇದೊಂದೇ ಮಾರ್ಗ ಎಂದು ಅವರು ಹೇಳಿದರು.

ಚುನಾವಣೆ ಅವಧಿಯಲ್ಲಿಟ್ಟಿದ್ದು : ಯಲ್ಲಾಪುರ ವಿಧಾನಸಭಾ ಕ್ಷೇತ್ರಕ್ಕೆ 2019ರ ಡಿಸೆಂಬರ್‌ ನಲ್ಲಿಉಪ ಚುನಾವಣೆ ನಡೆಯಿತು. ಅದಕ್ಕೂ ಒಂದು ತಿಂಗಳು ಮೊದಲಿನಿಂದಲೇ ಇಡೀ ಜಿಲ್ಲೆಗೆ ನೀತಿ ಸಂಹಿತೆ ಜಾರಿಯಾಗಿದ್ದು ಬಂದೂಕುಗಳನ್ನು ಸಂಬಂಧಪಟ್ಟ ಪೊಲೀಸ್‌ ಸ್ಟೇಶನ್‌ಗಳಲ್ಲಿಅಡಮಾನ ಇಡಲಾಯಿತು. ಡಿಸೆಂಬರ್‌ 31ರ ಬಳಿಕ ಜಿಲ್ಲೆಯ ಸುಮಾರು 5000ಕ್ಕೂ ಹೆಚ್ಚು ಬಂದೂಕುಗಳ ಪೈಕಿ ಸುಮಾರು ಶೇ. 30ರಷ್ಟು ಬಂದೂಕುಗಳ ಲೈಸೆನ್ಸ್‌ ಅವಧಿ ಮುಕ್ತಾಯಗೊಂಡು ನವೀಕರಣ ಮಾಡಬೇಕಾಯಿತು. ಆದರೆ ಮಾರ್ಚ್ ತಿಂಗಳು ಎರಡನೇ ವಾರ ಕಳೆದರೂ ಬಹುತೇಕ ಬಂದೂಕುಗಳ ನವೀಕರಣ ಪ್ರತಿ ಬೆಳೆಗಾರರಿಗೆ ಸಿಕ್ಕಿಲ್ಲ. ಇದರಿಂದ ಬಂದೂಕುಗಳು ಪೊಲೀಸ್‌ ಸ್ಟೇಶನ್‌ನಲ್ಲೇ ಬಾಕಿ ಆಗಿವೆ. ಶೀಘ್ರದಲ್ಲಿನವೀಕರಣ ಮಾಡಿ ಬೆಳೆ ರಕ್ಷಣೆಗೆ ಅನುವು ಮಾಡಿಕೊಡಿ ಎಂದು ರೈತರು ಆಗ್ರಹಿಸಿದ್ದಾರೆ.

ಕೆಲಸ ಹೆಚ್ಚಾಗಿದೆ : ಮೊದಲು ಲೈಸೆನ್ಸ್‌ ನವೀಕರಣದ ಪ್ರಕ್ರಿಯೆ ಸರಳವಾಗಿತ್ತು. ಆದರೆ ಈಗ ಪ್ರತಿಯೊಂದೂ ಮಾಹಿತಿಯನ್ನು ಸಂಬಂಧಪಟ್ಟ ವೆಬ್‌ಸೈಟ್‌ಗೆ ಅಪ್‌ಲೋಡ್‌ ಮಾಡಲಾಗುತ್ತದೆ. ಇದರಿಂದ ಮೊದಲು 4-5 ನಿಮಿಷದಲ್ಲಿಮುಗಿಯುತ್ತಿದ್ದ ಕೆಲಸ ಈಗ 10-15 ನಿಮಿಷ ತೆಗೆದುಕೊಳ್ಳುತ್ತದೆ. ಹಾಗಾಗಿ ಲೈಸೆನ್ಸ್‌ ನವೀಕರಣ ವಿಳಂಬವಾಗುತ್ತಿದೆ ಎಂದು ಜಿಲ್ಲಾಧಿಕಾರಿ ಕಚೇರಿಯಲ್ಲಿಬಂದೂಕು ಲೈಸೆನ್ಸ್‌ ನವೀಕರಣ ಮಾಡುವ ಅಧಿಕಾರಿ ಹೇಳುತ್ತಾರೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ