ಆ್ಯಪ್ನಗರ

ಮಕರ ಸಂಕ್ರಮಣ ಸಡಗರ

ಶಿರಸಿ : ಸೂರ್ಯನ ಚಲನೆ ಮತ್ತು ಪ್ರಕೃತಿಯಲ್ಲಿಬದಲಾವಣೆಯ ಪರ್ವ ಕಾಲವಾದ ಮಕರ ಸಂಕ್ರಾಂತಿ ದಿನದ ಆಚರಣೆಯ ಉತ್ಸಾಹ ಬುಧವಾರ ಜಿಲ್ಲೆಯ ಎಲ್ಲೆಡೆ ಸಡಗರ ಉತ್ಸಾಹದಿಂದ ನಡೆಯಿತು. ಮಕ್ಕಳು ಸೇರಿದಂತೆ ಅನೇಕರು ಎಳ್ಳು ಬೆಲ್ಲಮತ್ತು ಸಂಕ್ರಾಂತಿ ಕಾಳು ವಿತರಿಸಿ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.

Vijaya Karnataka 16 Jan 2020, 5:00 am
ಶಿರಸಿ : ಸೂರ್ಯನ ಚಲನೆ ಮತ್ತು ಪ್ರಕೃತಿಯಲ್ಲಿಬದಲಾವಣೆಯ ಪರ್ವ ಕಾಲವಾದ ಮಕರ ಸಂಕ್ರಾಂತಿ ದಿನದ ಆಚರಣೆಯ ಉತ್ಸಾಹ ಬುಧವಾರ ಜಿಲ್ಲೆಯ ಎಲ್ಲೆಡೆ ಸಡಗರ ಉತ್ಸಾಹದಿಂದ ನಡೆಯಿತು. ಮಕ್ಕಳು ಸೇರಿದಂತೆ ಅನೇಕರು ಎಳ್ಳು ಬೆಲ್ಲಮತ್ತು ಸಂಕ್ರಾಂತಿ ಕಾಳು ವಿತರಿಸಿ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.
Vijaya Karnataka Web capricorn transit progression
ಮಕರ ಸಂಕ್ರಮಣ ಸಡಗರ


ಸಂಕ್ರಾಂತಿ ಹಬ್ಬದ ಪ್ರಯುಕ್ತ ಹಲವರು ಜಿಲ್ಲೆಯ ವಿವಿಧೆಡೆಯ ದೇವಾಲಯಗಳಿಗೆ ತೆರಳಿ ದೇವರ ದರ್ಶನ ಪಡೆದು ಸೇವೆ ಸಲ್ಲಿಸಿದರು. ಗೋಕರ್ಣದಲ್ಲಿಭಕ್ತರು ಸಮುದ್ರಸ್ನಾನ ಮಾಡಿ ಶ್ರೀ ಮಹಾಬಲೇಶ್ವರ ದೇವಾಲಯಲ್ಲಿಆತ್ಮಲಿಂಗದ ದರ್ಶನ ಪಡೆದರು. ಶಿರಸಿಯ ಶ್ರೀ ಮಾರಿಕಾಂಬಾ ದೇವಸ್ಥಾನ ಸೇರಿದಂತೆ ನಾನಾ ಕಡೆಗಳ ದೇವಸ್ಥಾನಗಳಲ್ಲಿಭಕ್ತಿ ಸಡಗರದ ವಾತಾವರಣ ನಿರ್ಮಾಣವಾಗಿತ್ತು.

ಪ್ರವಾಸಿ ತಾಣಗಳಲ್ಲಿ... ಇದೇ ಸಂದರ್ಭದಲ್ಲಿಅನೇಕರು ಜಿಲ್ಲೆಯ ನಾನಾ ಕಡೆಗಳ ಪ್ರವಾಸಿ ತಾಣಗಳಿಗೆ ತೆರಳಿ ರಜೆಯ ಖುಷಿಯನ್ನು ಅನುಭವಿಸಿದರು. ಸಹಸ್ರಲಿಂಗ, ಯಾಣ, ಶಿವಗಂಗಾ ಜಲಪಾತ, ಮುರೇಗಾರ ಜಲಪಾತ, ಬನವಾಸಿ ದೇವಾಲಯ ಸೇರಿದಂತೆ ವಿವಿಧೆಡೆಗಳಲ್ಲಿಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿಸೇರಿದ್ದರು. ಕೆಲವೆಡೆ ಕೆಲವರು ನೀರಿಗೆ ಇಳಿದು ಸ್ನಾನ ಮಾಡಿದರು.

ಸೂರ್ಯ ಜಪ : ಈ ಭಾಗದಲ್ಲಿಅಪರೂಪದ್ದಾದ ಶ್ರೀ ಸೂರ್ಯನಾರಾಯಣ ದೇವಸ್ಥಾನವು ಶಿರಸಿ- ಹುಬ್ಬಳ್ಳಿ ಮಾರ್ಗದ ಪಕ್ಕದ ಬಿಸಲಕೊಪ್ಪ ಗ್ರಾಮದಲ್ಲಿಇದ್ದು ಅಲ್ಲಿಮಕರ ಸಂಕ್ರಮಣದ ಪ್ರಯುಕ್ತ ವಿಶೇಷ ಧಾರ್ಮಿಕ ಕಾರ್ಯ ಆಯೋಜಿಸಲಾಗಿತ್ತು. ಸೂರ್ಯನಿಗೆ ಪ್ರಿಯವಾದ ಮಕರ ಸಂಕ್ರಮಣದ ಸಂದರ್ಭದಲ್ಲಿಸೂರ್ಯ ದೇವರ ಜಪ ಮತ್ತು ಅವನ ಹಮ್ಮಿಕೊಳ್ಳಲಾಗಿತ್ತು. ನೂರಾರು ಭಕ್ತರು ಪಾಲ್ಗೊಂಡರು.

ನಾಟ್ಯ ಪ್ರದರ್ಶನ.. ಪ್ರತಿ ವರ್ಷದಂತೆ ಈ ವರ್ಷವೂ ಕೂಡ ನಗರದ ನಟರಾಜ ನೃತ್ಯಶಾಲೆಯವರು ಸಂಕ್ರಾಂತಿಯ ಸಂದರ್ಭದಲ್‌ ವಾರ್ಷಿಕೋತ್ಸವ ಹಮ್ಮಿಕೊಂಡು ಭರತನಾಟ್ಯ ಪ್ರದರ್ಶನ ನೀಡಿದರು. ಸಂಕ್ರಾಂತಿ ಸಡಗರದಲ್ಲಿಇದ್ದ ನೂರಾರು ಜನರು ಪಾಲ್ಗೊಂಡು ನಾಟ್ಯ ರೂಪಕ ವೀಕ್ಷಿಸಿ ಆನಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ