ಆ್ಯಪ್ನಗರ

ಅಚ್ಚುಕಟ್ಟಾಗಿ ಸಿದ್ದರಾಮೇಶ್ವರ ಜಯಂತಿ ಆಚರಿಸಿ

ಮುಂಡಗೋಡ : ಸಂಘಟಕರು ಹೆಚ್ಚು ಆಸಕ್ತಿ ವಹಿಸಿ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಆಚರಿಸಬೇಕು ಎಂದು ತಹಸೀಲ್ದಾರ್‌ ಅಶೋಕ ಗುರಾಣಿ ಶುಕ್ರವಾರ ಹೇಳಿದರು.

Vijaya Karnataka 12 Jan 2019, 5:00 am
ಮುಂಡಗೋಡ : ಸಂಘಟಕರು ಹೆಚ್ಚು ಆಸಕ್ತಿ ವಹಿಸಿ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಆಚರಿಸಬೇಕು ಎಂದು ತಹಸೀಲ್ದಾರ್‌ ಅಶೋಕ ಗುರಾಣಿ ಶುಕ್ರವಾರ ಹೇಳಿದರು.
Vijaya Karnataka Web KWR-11MND1


ತಹಸೀಲ್ದಾರ್‌ ಕಚೇರಿಯ ಸಭಾಭವನದಲ್ಲಿ ನಡೆದ ಸಿದ್ದರಾಮೇಶ್ವರ ಜಯಂತಿಯ ಪೂರ್ವಬಾವಿ ಸಭೆಯಲ್ಲಿ ಅವರು ಮಾತನಾಡಿದರು.

ಪ್ರತಿವರ್ಷದಂತೆ ಈ ವರ್ಷವೂ ಸಿದ್ದರಾಮ ಜಯಂತಿಯನ್ನು ಆಚರಿಸೋಣ. ಸಮಾಜದವರು ಹಾಗೂ ಅಧಿಕಾರಿಗಳು ಸೇರಿ ಸಿದ್ದರಾಮ ಜಯಂತಿಯಲ್ಲಿ ಭಾಗವಹಿಸೋಣ. ಈ ವರ್ಷ ಸಿದ್ದರಾಮೇಶ್ವರ ಜಯಂತಿ ದಿನಾಂಕವನ್ನು ಬದಲಾವಣೆ ಮಾಡುವ ಸಾಧ್ಯತೆಗಳಿದ್ದು, ಪ್ರತಿವರ್ಷ ಜ.15ರಂದು ಸಿದ್ದರಾಮ ಜಯಂತಿಯನ್ನು ಆಚರಿಸಲಾಗುತ್ತಿತ್ತು. ಆದರೆ ಈ ವರ್ಷ ಜ.22ರಂದು ಜಯಂತಿ ಆಚರಣೆ ಮಾಡುವ ಬಗ್ಗೆ ಹಿರಿಯ ಅಧಿಕಾರಿಗಳಿಂದ ಅಧಿಕೃತ ಮಾಹಿತಿ ದೊರೆತ ನಂತರ ಸಂಘಟಕರಿಗೆ ತಿಳಿಸಲಾಗುವುದು ಎಂದರು.

ಜಯಂತಿ ಆಚರಣೆಗೆ ಸರಕಾರದಿಂದ ಅನುದಾನ ಬಿಡುಗಡೆಯಾಗಿಲ್ಲ. ಅನುದಾನ ಬಂದ ನಂತರ ನೀಡಲಾಗುವುದು. ಸದ್ಯ ಸಂಘಟಕರು ಜಯಂತಿ ಆಚರಣೆಗೆ ಬರುವ ಖರ್ಚು ವೆಚ್ಚ ಮಾಡುವಂತೆ ಸಭೆಯಲ್ಲಿ ತಹಸೀಲ್ದಾರ್‌ ಸೂಚಿಸಿದರು.

ಈ ವೇಳೆ ಸಮಾಜ ಮುಖಂಡರು ಮಾತನಾಡಿ, ಪ್ರತಿವರ್ಷದಂತೆ ಈ ವರ್ಷವೂ ಜ.15ರಂದು ಜಯಂತಿ ಆಚರಿಸಿದರೆ ಅನುಕೂಲವಾಗುತ್ತದೆ ಎಂದರು. ಅಧಿಕೃತ ಸೂಚನೆ ದೊರೆತ ನಂತರ ಈ ಬಗ್ಗೆ ನಿರ್ಧರಿಸೋಣ ಎಂದು ಹೇಳಿದರು.

ಸಂಘಟಕರು ಹೆಚ್ಚು ಆಸಕ್ತಿ ವಹಿಸಿ ಸಮರ್ಪಕವಾಗಿ ಜಯಂತಿ ಆಚರಿಸಬೇಕು. ಮೆರವಣಿಗೆ ಮಾರ್ಗವನ್ನು ಸ್ವಲ್ಪ ಕಡಿಮೆ ಮಾಡಬೇಕು ಇತ್ಯಾದಿ ಕುರಿತು ಚರ್ಚಿಸಲಾಯಿತು.

ಪ.ಪಂ. ಮುಖ್ಯಾಧಿಕಾರಿ ಸಂಗನಬಸಯ್ಯ, ತೋಟಗಾರಿಕಾ ಅಧಿಕಾರಿ ನಾಗಾರ್ಜುನ ಗೌಡ್ರ, ಅರಣ್ಯ ಇಲಾಖೆಯ ಅಧಿಕಾರಿ ಶಂಕರ ಬಾಗೇವಾಡಿ, ಸಮಾಜದ ಮುಖಂಡರಾದ ಕೃಷ್ಣ ಹಿರಳ್ಳಿ, ಗುರುಸ್ವಾಮಿ ಕಳಸಾಪುರ, ರವಿ ಹಾವೇರಿ, ಹನ್ಮಂತಪ್ಪ ಆರೇಗೋಪ್ಪ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ