ಕಾರವಾರ:ದೇಶದ ಏಕತೆ ಹಾಗೂ ಅಖಂಡತೆಗಾಗಿ ಶ್ರಮಿಸಿದ ಸರದಾರ್ ವಲ್ಲಭಾಯಿ ಪಟೇಲರ ಸ್ಮರಣೆಗಾಗಿ ಏಕತಾ ದಿವಸ್ ಜೊತೆಗೆ ಕರ್ನಾಟಕ ಏಕೀಕರಣದ ವಜ್ರ ಮಹೋತ್ಸವ ಸಂದರ್ಭದಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು ಗ್ರಾಮೀಣ ಭಾಗದಲ್ಲಿ ಕ್ರೀಡಾಕೂಟ ಆಯೋಜನೆ ಮಾಡುವುದರ ಮೂಲಕ ಅರ್ಥಪೂರ್ಣವಾಗಿ ಆಚರಿಸಿದಂತಾಗಿದೆ ಎಂದು ತಾಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಪುರುಷೋತ್ತಮ ಗೌಡ ಹೇಳಿದರು.
ಅವರು ಅಮದಳ್ಳಿಯಲ್ಲಿ ಇತ್ತೀಚೆಗೆ ಕಾರವಾರದ ನೆಹರು ಯುವ ಕೇಂದ್ರ , ಅಮದಳ್ಳಿಯ ಬಂಟದೇವ ಯುವಕ ಸಂಘ, ದುರ್ಗಾ ದೇವಿ ಯುವಕ ಮಂಡಳ, ಮುದಗಾದ ನೇತಾಜಿ ಯುವಕ ಮಂಡಳ, ಬ್ರಹ್ಮದೇವ ಯುವಕ ಮಂಡಳ, ನಾರಾಯಣ ಯುವಕ ಮಂಡಳ, ಮಾಚಿದೇವ ಯುವಕ ಸಂಘಗಳ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಏಕತಾ ದಿವಸ್ ಹಾಗು ಕನ್ನಡ ರಾಜ್ಯೋತ್ಸವದಂಗವಾಗಿ ಹಮ್ಮಿಕೊಂಡ ಅಮದಳ್ಳಿ ಪಂಚಾಯಿತಿ ಮಟ್ಟದ ವ್ಹಾಲಿಬಾಲ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷ ತೆಯನ್ನು ಗ್ರಾಮ ಪಂಚಾಯಿತಿ ಸದಸ್ಯ ಉಲ್ಲಾಸ ತಳೇಕರ ವಹಿಸಿದ್ದರು.
ಸಂಜೆ ವಿಜೇತರಿಗೆ ಬಹುಮಾನ ವಿತರಣಾ ಸಮಾರಂಭ ನಡೆಯಿತು. ಗ್ರಾಮ ಪಂಚಾಯಿತಿ ಸದಸ್ಯ ಅಶೋಕ ತೆಂಡೂಲ್ಕರ ಬಹುಮಾನ ವಿತರಿಸಿದರು. ಹುಣಸೆ ಮಕ್ಕಿಯ ಹುಲಿದೇವ ತಂಡ ಪ್ರಥಮ ಸ್ಥಾನ ಪಡೆದು 3000 ನಗದು ಬಹುಮಾನ, ಸಾಣೆಮಕ್ಕಿಯ ತಂಡ ದ್ವಿತೀಯ ಸ್ಥಾನ 2000 ಹಾಗೂ ಮಾದೇವಾಡ ಪ್ರೆಂಡ್ಸ ತಂಡ ತೃತೀಯ ಸ್ಥಾನ 1000 ನಗದು ಬಹುಮಾನ ಪಡೆದು ಕೊಂಡವು.
ವೇದಿಕೆಯಲ್ಲಿ ಗ್ರಾಮ ಪಂಚಯಿತಿ ಸದಸ್ಯ ಉಲ್ಲಾಸ ತಳೇಕರ, ಬೇಬಿ ಆಗೇರ, ಜೀವನಾ ಅಮದಳ್ಳಿ, ದತ್ತಾತ್ರೇಯ ಗೌಡ, ವಿಷ್ಣು ತಳೇಕರ, ಹಿರಿಯ ಪಾಂಡುರಂಗ ಗೌಡ, ರೋಹನ ಭಟ್ಕಳಕರ, ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ತೋಕು ಹರಿಕಂತ್ರ, ರಂಗಶ್ರೀ ಯಕ್ಷ ಗಾನ ಮಂಡಳಿಯ ಅಧ್ಯಕ್ಷ ಉದಯ ನಾಯ್ಕ,ರಾಜೇಶ ತೆಂಡೂಲ್ಕರ, ಅಜಯ ಮಡಿವಾಳ, ಗೌರೀಶ ಅಮದಳ್ಳಿ, ಪ್ರಶಾಂತ ಗೌಡ ಮುಂತಾದವರು ಉಪಸ್ಥಿತರಿದ್ದರು.
ಮಂಜುನಾಥ ಮುದಗೇಕರ ಕಾರ್ಯಕ್ರಮ ನಿರೂಪಿಸಿದರು. ರಾಜು ಹರಿಕಂತ್ರ ಸ್ವಾಗತಿಸಿದರು. ರಾಜೇಶ ಮಡಿವಾಳ ವಂದಿಸಿದರು.