ಆ್ಯಪ್ನಗರ

ಸಂಭ್ರಮದ ಕ್ರಿಸ್‌ಮಸ್‌

ಕಾರವಾರ : ಜಿಲ್ಲಾದ್ಯಂತ ಕ್ರೈಸ್ತ ಬಾಂಧವರು ಮಂಗಳವಾರ ಕ್ರಿಸ್‌ಮಸ್‌ ಹಬ್ಬವನ್ನು ಸಂಭ್ರಮ,ಸಡಗರದಿಂದ ಆಚರಿಸದರು. ಎಲ್ಲ ಚರ್ಚ್‌ಗಳನ್ನು ವಿದ್ಯುದ್ದೀಪಗಳಿಂದ ಶೃಂಗರಿಸಲಾಗಿತ್ತು.

Vijaya Karnataka 26 Dec 2018, 5:00 am
ಕಾರವಾರ : ಜಿಲ್ಲಾದ್ಯಂತ ಕ್ರೈಸ್ತ ಬಾಂಧವರು ಮಂಗಳವಾರ ಕ್ರಿಸ್‌ಮಸ್‌ ಹಬ್ಬವನ್ನು ಸಂಭ್ರಮ,ಸಡಗರದಿಂದ ಆಚರಿಸದರು. ಎಲ್ಲ ಚರ್ಚ್‌ಗಳನ್ನು ವಿದ್ಯುದ್ದೀಪಗಳಿಂದ ಶೃಂಗರಿಸಲಾಗಿತ್ತು.
Vijaya Karnataka Web KWR-25GAJA3


ನಗರದ ಕ್ಯಾಥಡ್ರೆಲ್‌ ಚರ್ಚ್‌, ಹೈಚರ್ಚ್‌, ಕ್ರಿಸ್ತ ಜ್ಯೋತಿ ದೇವಾಲಯ ಸೇರಿದಂತೆ ಅನೇಕ ಕಡೆಯ ಚರ್ಚ್‌ಗಳಿಗೆ ಸುಣ್ಣಬಣ್ಣ ಬಳಿದು ಕ್ರಿಸ್‌ಮಸ್‌ ಗಿಡಗಳಿಗೆ ವಿವಿಧ ರಂಗುರಂಗಿನ ಪ್ಲಾಸ್ಟಿಕ್‌ ನಕ್ಷ ತ್ರ,ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿತ್ತು. ಚರ್ಚ್‌ ಅಲ್ಲದೇ ಮನೆ ಮುಂದೆ ಕ್ರಿಸ್ತನ ಹಾಗೂ ಮಾತೆ ಮೇರಿಯ ಮಣ್ಣಿನ ಮೂರ್ತಿಗಳನ್ನು ಗೋದಳಿಗಳಲ್ಲಿಟ್ಟು ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಲಾಯಿತು.

ಕ್ರೈಸ್ತ ಬಾಂಧವರ ಅಂಗಡಿಗಳು, ಹೋಟೆಲ್‌ಗಳು, ಬ್ಯಾಂಕ್‌ ಸೇರಿದಂತೆ ಇನ್ನಿತರ ವ್ಯಾಪಾರ ಕೇಂದ್ರಗಳು ಕೂಡ ವಿದ್ಯುತ್‌ ದೀಪಗಳಿಂದ ಅಲಂಕಾರಗೊಳಿಸಲಾಗಿತ್ತು. ಪ್ರಮುಖ ಹೊಟೆಲ್‌ಗಳ ಎದುರು ಸಾಂತಾ ಕ್ಲಾಸ್‌, ಗೊಂಬೆಗಳ ವೇಷ ತೊಟ್ಟವರು ಹೆಪಿ ಕ್ರಿಸ್‌ಮಸ್‌ ಶುಭಾಶಯ ಹೇಳಿ ಚಿಣ್ಣರಿಗೆ ಚಾಕ್‌ಲೇಟ್‌ ವಿತರಿಸಿದರು. ಹೋಟೆಲ್‌ಗಳಿಗೆ ಬರುವ ಗ್ರಾಹಕರಿಗೆ ಹಸ್ತಲಾಘವ ಶುಭಾಶಯ ಹೇಳುತ್ತಿರುವುದು ವಿಶೇಷವಾಗಿತ್ತು.

ಅಲ್ಲದೇ ನಗರದ ಪಾದ್ರಿಬಾಗ್‌,ಕಾಜುಬಾಗ್‌, ಮಾರಿಯಾನಗರ, ಹೈಚರ್ಚ್‌ ಪ್ರದೇಶಗಳಲ್ಲಿ ಹಾಗೂ ತಾಲೂಕಿನ ವಿವಿಧ ಗ್ರಾಮಗಳಲ್ಲಿ ವಾಸವಿರುವ ಸಮಾಜ ಬಾಂಧವರಿಗೆ,ಸ್ನೇಹಿತರಿಗೆ ಎಲ್ಲರೂ ಪರಸ್ಪರ ಹಬ್ಬದ ಸಿಹಿ ತಿನಿಸು ಕೇಕ್‌, ಗಿಫ್ಟ್‌ ಐಟಂಗಳನ್ನು ಹಂಚಿ ಕ್ರಿಸ್‌ಮಸ್‌ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಇಲ್ಲೆಲ್ಲ ಕ್ರೈಸ್ತ ಬಾಂಧವರು ಮಧ್ಯರಾತ್ರಿ ಸಮಯದಲ್ಲಿ ಕ್ರಿಸ್ತನ ಜನನದ ಪ್ರತೀಕವಾಗಿ ಪ್ರಾರ್ಥನೆ ಸಲ್ಲಿಸಿದರು. ಇದಲ್ಲದೇ ಸದಾಶಿವಗಡ್‌, ಹಳಗಾ, ಮಖೇರಿ, ಚೆಂಡಿಯಾ, ಅಮದಳ್ಳಿ ಮುಂತಾದ ಗ್ರಾಮೀಣ ಪ್ರದೇಶದ ಚರ್ಚ್‌ಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಸಿದ ಬಳಿಕ ಚರ್ಚ್‌ನ ಧರ್ಮಗುರುಗಳು ಜೀಸಸ್‌ ಕ್ರಿಸ್ತನ ಸಂದೇಶಗಳನ್ನು ಬೋಧಿಸಿದರು.

ಭಾವೈಕ್ಯತೆಯ ಪ್ರತೀಕವಾಗಿ ಅನ್ಯ ಧರ್ಮಿಯರೂ ಕೂಡ ಕ್ರೈಸ್ತ ಬಾಂಧವರಿಗೆ ಶುಭಾಶಯ ಹೇಳಿದ್ದು,ವಿಶೇಷವಾಗಿತ್ತು. ಸಾಮಾಜಿಕ ಜಾಲತಾಣಗಳ ಮೂಲಕ ಸಹ ಸ್ನೇಹಿತರಿಗೆ ಹಾಗೂ ಬಂಧು-ಬಾಂಧವರಿಗೆ ಶುಭಾಶಯ ಕಳಿಸುವ ದೃಶ್ಯ ಸಾಮಾನ್ಯವಾಗಿತ್ತು.

ಅಮದಳ್ಳಿ ಮೊಂಬತ್ತಿ ಹಿಡಿದು ಮೆರವಣಿಗೆ : ಅಮದಳ್ಳಿಯ ಚರ್ಚ್‌ನಲ್ಲಿ ಮಧ್ಯರಾತ್ರಿ ಸಾಮೂಹಿಕ ಪ್ರಾರ್ಥನೆ ನಡೆಸಿದ ಬಳಿಕ ಮಂಗಳವಾರ ಸಂಜೆ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯು ಚರ್ಚ್‌ ಆವರಣದಿಂದ ಸಾಗಿ ಅಮದಳ್ಳಿ ಮಾರುಕಟ್ಟೆ ತನಕ ಸಾಗಿತು. ಮೆರವಣಿಗೆಯಲ್ಲಿ ಮೊಂಬತ್ತಿ ದೀಪ ಹಿಡಿದು ನೂರಾರು ಜನರು ಭಾಗವಹಿಸಿದ್ದರು. ಆನಂತರ ಅಮದಳ್ಳಿ ಚರ್ಚ್‌ನ ಪ್ರಾರ್ಥನಾ ಸಭೆಯಲ್ಲಿ ಸೇರಿದ ಜನರನ್ನುದ್ದೇಶಿಸಿ ಧರ್ಮಗುರು ಬ್ರಿಟ್ಟೋ ಡಿಸಿಲ್ವ ಮಾತನಾಡಿ, ಜೀಸಸ್‌ ಕ್ರೈಸ್ತ್‌ನ ಶಾಂತಿ, ಸಹನೆ, ಸಹಬಾಳ್ವೆ ಮಹತ್ವವನ್ನು ಸಾರಿದರು ಎಂದು ಸ್ಥಳೀಯ ನಿವಾಸಿ ಇನ್ನಾಸ್‌ ಡಿಸೋಜಾ ಮಾಹಿತಿ ನೀಡಿದ್ದಾರೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ