ಆ್ಯಪ್ನಗರ

ಜ.ಫಕೀರೇಶ್ವರರ ಸಂಭ್ರಮದ ರಥೋತ್ಸವ

ಶಿರಹಟ್ಟಿ (ಗದಗ) : ದ್ವೇಷ-ಬಿಡು, ಪ್ರೀತಿ-ಮಾಡು ಎಂಬ ದಿವ್ಯಸಂದೇಶವನ್ನು ಜಗತ್ತಿಗೆ ಸಾರಿ ದೇಶದ ಉದ್ದಗಲಕ್ಕೂ ಸಂಚರಿಸಿ ಕೋಮು-ಸೌಹಾರ್ದತೆಯ ಹರಿಕಾರನಾಗಿ, ರಾಜ-ಮಹಾರಾಜರುಗಳಿಂದ ಬಿರುದು ಬಾವಲಿಗಳನ್ನು ಪಡೆದು ಶಿರಹಟ್ಟಿಗೆ ಬಂದು ನೆಲೆಸಿ ಸರ್ಪರೂಪಿಯಾಗಿ ದೇಹತ್ಯಾಗ ಮಾಡಿದ ಕರ್ತೃ ಶ್ರೀ ಜ.ಫಕೀರೇಶ್ವರರ ಜಾತ್ರಾ ಮಹೋತ್ಸವ ಶನಿವಾರ ಸಂಜೆ ಸಹಸ್ರಾರು ಭಕ್ತರ ಹರ ಹರ ಮಹಾದೇವ ಜಯಘೋಷಣೆಯೊಂದಿಗೆ ಸಂಭ್ರಮದಿಂದ ಜರುಗಿತು.

Vijaya Karnataka 19 May 2019, 5:00 am
ಶಿರಹಟ್ಟಿ (ಗದಗ) : ದ್ವೇಷ-ಬಿಡು, ಪ್ರೀತಿ-ಮಾಡು ಎಂಬ ದಿವ್ಯಸಂದೇಶವನ್ನು ಜಗತ್ತಿಗೆ ಸಾರಿ ದೇಶದ ಉದ್ದಗಲಕ್ಕೂ ಸಂಚರಿಸಿ ಕೋಮು-ಸೌಹಾರ್ದತೆಯ ಹರಿಕಾರನಾಗಿ, ರಾಜ-ಮಹಾರಾಜರುಗಳಿಂದ ಬಿರುದು ಬಾವಲಿಗಳನ್ನು ಪಡೆದು ಶಿರಹಟ್ಟಿಗೆ ಬಂದು ನೆಲೆಸಿ ಸರ್ಪರೂಪಿಯಾಗಿ ದೇಹತ್ಯಾಗ ಮಾಡಿದ ಕರ್ತೃ ಶ್ರೀ ಜ.ಫಕೀರೇಶ್ವರರ ಜಾತ್ರಾ ಮಹೋತ್ಸವ ಶನಿವಾರ ಸಂಜೆ ಸಹಸ್ರಾರು ಭಕ್ತರ ಹರ ಹರ ಮಹಾದೇವ ಜಯಘೋಷಣೆಯೊಂದಿಗೆ ಸಂಭ್ರಮದಿಂದ ಜರುಗಿತು.
Vijaya Karnataka Web celebration of j fakiraswaras ritual
ಜ.ಫಕೀರೇಶ್ವರರ ಸಂಭ್ರಮದ ರಥೋತ್ಸವ


ಇದಕ್ಕೂ ಮೊದಲು ಜ.ಫಕೀರ ಸಿದ್ದರಾಮ ಸ್ವಾಮೀಜಿಗಳು ಶ್ರೀಮಠದ ಪರಂಪರೆಯಂತೆ ಹಿಂದೂ-ಮುಸ್ಲಿಂ ಭಾವೈಕ್ಯತೆ ಸಾರುವ ಕೇಸರಿ ಹಾಗೂ ಹಸಿರು ಪೋಷಾಕುಗಳನ್ನು ಧರಿಸಿ, ಮೈ ಮೇಲೆ ವಜ್ರ-ವೈಡೂರ‍್ಯಗಳನ್ನು ಧರಿಸಿ ಅಶ್ವಾರೂಢರಾಗಿ ಕರ್ತೃ ಶ್ರೀ ಫಕೀರೇಶ್ವರರ ಗದ್ದುಗೆಗೆ ಪೂಜೆ ಸಲ್ಲಿಸಿ ತದನಂತರ ರಥದ ಚಕ್ರಕ್ಕೆ ಟೆಂಗಿನಕಾಯಿ ಒಡೆಯುವುದರ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು.

ವಿಶೇಷ ಪರಂಪರೆಯನ್ನು ಹೊಂದಿರುವಂತಹ ಶ್ರೀ ಮಠಕ್ಕೆ ರಾಜ್ಯ ಹಾಗೂ ಹೊರರಾಜ್ಯಗಳಿಂದಲೂ ಜಾತ್ರಾ ಮಹೋತ್ಸವಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ರಥೋತ್ಸವದಲ್ಲಿ ಭಾಗಿಯಾಗಿದ್ದರು. ರಥೋತ್ಸವಕ್ಕೆ ಚಾಲನೆ ಸಿಗುತ್ತಿದ್ದಂತೆಯೇ ಭಕ್ತರು ರಥದ ಕಳಸಕ್ಕೆ ಉತ್ತತ್ತಿ, ಬಾಳೆಹಣ್ಣು ಸಮರ್ಪಿಸಿ ಭಕ್ತಿ ಭಾವದಿಂದ ಫಕೀರೇಶ್ವರರಿಗೆ ಜೈಕಾರ ಹಾಕಿದರು. ಪಟ್ಟಣದ ಎಲ್ಲ ಪ್ರಮುಖ ಬೀದಿಗಳಲ್ಲಿಯೂ ಸಹ ಬೆಳಗ್ಗೆಯಿಂದಲೇ ಭಕ್ತರ ದಂಡು ಹರಿದು ಬರುವುದು ಸಾಮಾನ್ಯವಾಗಿತ್ತು. ಜನದಟ್ಟಣೆ ನಿಯಂತ್ರಿಸಲು ಪೊಲೀಸರು ಅಗತ್ಯ ಬಂದೋಬಸ್ತ್‌ ವ್ಯವಸ್ಥೆ ಮಾಡಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ