ಆ್ಯಪ್ನಗರ

ದಾಂಡೇಲಿಯಲ್ಲಿ ರುದ್ರಭೂಮಿ ಪರಿಶೀಲನೆ

ದಾಂಡೇಲಿ : ಹಿಂದೂ ರುದ್ರಭೂಮಿಯನ್ನು ಅತಿಕ್ರಮಿಸಿ, ಕಾನೂನು ಬಾಹಿರ ಕೆಲಸ ಮಾಡಿದ್ದಾರೆಂಬ ಆರೋಪವಿರುವ ಪಟೇಲನಗರ ಸ್ಥಳಕ್ಕೆ ನಗರಸಭೆ ಪೌರಾಯುಕ್ತರು ಹಾಗೂ ಪಿಎಸ್‌ಐ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Vijaya Karnataka 12 Apr 2019, 5:00 am
ದಾಂಡೇಲಿ : ಹಿಂದೂ ರುದ್ರಭೂಮಿಯನ್ನು ಅತಿಕ್ರಮಿಸಿ, ಕಾನೂನು ಬಾಹಿರ ಕೆಲಸ ಮಾಡಿದ್ದಾರೆಂಬ ಆರೋಪವಿರುವ ಪಟೇಲನಗರ ಸ್ಥಳಕ್ಕೆ ನಗರಸಭೆ ಪೌರಾಯುಕ್ತರು ಹಾಗೂ ಪಿಎಸ್‌ಐ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
Vijaya Karnataka Web cemetery inspection in dandeli
ದಾಂಡೇಲಿಯಲ್ಲಿ ರುದ್ರಭೂಮಿ ಪರಿಶೀಲನೆ


ಪಟೇಲನಗರದ ರುದ್ರಭೂಮಿಯಲ್ಲಿ ನಡೆದ ಅತಿಕ್ರಮಣ ಕೆಲಸದ ಕುರಿತಾಗಿ ಬುಧವಾರ ಮಾಜಿ ಶಾಸಕ ಸುನೀಲ ಹೆಗಡೆ ಸ್ಥಳಕ್ಕೆ ಭೇಟಿ ನೀಡಿ, ಎರಡು ದಿನಗಳೊಳಗೆ ಸಂಬಂಧಪಟ್ಟವರ ಮೇಲೆ ಕ್ರಮ ಕೈಗೊಳ್ಳದಿದ್ದರೆ ಹೋರಾಟ ಮಾಡುವ ಎಚ್ಚರಿಕೆ ನೀಡಿದ್ದರು. ಇದೀಗ ಪೊಲೀಸ್‌ ಹಾಗೂ ನಗರಾಡಳಿತದಿಂದ ಪರಿಶೀಲನೆ ನಡೆದಿದೆ.

ದೂರು ಬಂದಿರುವ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದೇವೆ. ಇದಕ್ಕೆ ಸಂಬಂಧ ಪಟ್ಟ ಎಲ್ಲ ದಾಖಲೆ ಪರಿಶೀಲಿಸಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತೇವೆ ಎಂದು ಪೌರಾಯುಕ್ತ ಸಯ್ಯದ್‌ ಅಲಿ ತಿಳಿಸಿದ್ದಾರೆ. ನಗರಸಭಾ ಸದಸ್ಯರಾದ ನರೇಂದ್ರ ಚೌಹಾಣ, ದಶರಥ ಬಂಡಿವಡ್ಡರ್‌ ಉಪಸ್ಥಿತರಿದ್ದರು.

ಈ ರುದ್ರಭೂಮಿ ಪ್ರದೇಶದಲ್ಲಿರುವ ಮರಗಳನ್ನು ಕಡಿದ ದೂರಿಗೆ ಸಂಬಂಧಿಸಿ ಅರಣ್ಯ ಇಲಾಖೆಯವರು ಪ್ರಕರಣ ದಾಖಲಿಸಿ ಪಂಚನಾಮೆಯನ್ನೂ ನಡೆಸಿದ್ದಾರೆಂಬ ಮಾಹಿತಿಯಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ