ಆ್ಯಪ್ನಗರ

ಸ್ಮಶಾನ ಜಾಗ ತೆರವು

ಗೋಕರ್ಣ :ಹತ್ತಿರದ ನಾಡುಮಾಸ್ಕೇರಿ ಗ್ರಾಮದಲ್ಲಿ ಖಾಸಗಿಯವರು ಅತಿಕ್ರಮಣ ಮಾಡಿದ ಸ್ಮಶಾನ ಜಾಗದ ತೆರವು ಕಾರ್ಯಾಚರಣೆ ಬುಧವಾರ ಬೆಳಗಿನಿಂದ ನಡೆಯಿತು.

Vijaya Karnataka 20 Dec 2018, 5:00 am
ಗೋಕರ್ಣ :ಹತ್ತಿರದ ನಾಡುಮಾಸ್ಕೇರಿ ಗ್ರಾಮದಲ್ಲಿ ಖಾಸಗಿಯವರು ಅತಿಕ್ರಮಣ ಮಾಡಿದ ಸ್ಮಶಾನ ಜಾಗದ ತೆರವು ಕಾರ್ಯಾಚರಣೆ ಬುಧವಾರ ಬೆಳಗಿನಿಂದ ನಡೆಯಿತು.
Vijaya Karnataka Web KWR-19 GKN 1 A


ಸುಮಾರು 2 ಎಕರೆ 20 ಗುಂಟೆ ಜಾಗದಲ್ಲಿ ಬೇರೆ ಬೇರೆ ಸಮಾಜದವರ 7 ಪ್ರತ್ಯೇಕ ಸ್ಮಶಾನಕ್ಕಾಗಿ ಮೀಸಲಿಡಲು ರೆವೆನ್ಯೂ ಖಾತೆಯವರು ಗ್ರಾ.ಪಂ. ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಪಿಡಿಒ ಹಾಗೂ ಗೋಕರ್ಣದ ಪೊಲೀಸರ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ ನಡೆಯಿತು. ಈ ಕುರಿತು ಉಪತಸೀಲ್ದಾರ ಯಶೋಧಾ ಲಕ್ಕುಮನೆ ಅವರನ್ನು ವಿಚಾರಿಸಿದಾಗ ಗೋಮಾಳ ಜಾಗವನ್ನು ಬಿಟ್ಟು ಸ್ಮಶಾನ ಜಾಗವನ್ನು ಮಾತ್ರ ತೆರವು ಗೊಳಿಸುತ್ತಿದ್ದೇವೆ. ಆದರೆ ನಾಡುಮಾಸ್ಕೇರಿಯ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗೋಮಾಳ ಹಾಗೂ ಸ್ಮಶಾನ ಜಾಗ ಸೇರಿ 21 ಎಕರೆಗೂ ಅಧಿಕ ಸರಕಾರಿ ಗೋಮಾಳ ಇರುವ ಬಗ್ಗೆ ಅಧಿಕೃತ ದಾಖಲೆಗಳಿವೆ. ನಾಡು ಮಾಸ್ಕೇರಿ ಗೋಮಾಳದಲ್ಲಿ ಇನ್ನೊಮ್ಮೆ ನಾವು ಸರ್ವೇ ಕಾರ್ಯ ನಡೆಸುತ್ತೇವೆ ಎಂದು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ