ಆ್ಯಪ್ನಗರ

ಚಂದ್ರಕಾಂತ ಅಧ್ಯಕ್ಷ ಸ್ಥಾನದಿಂದ ಪದಚ್ಯುತಿ

ಹಳಿಯಾಳ : ದಲಿತ ಮುಖಂಡ ಹಾಗೂ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ ಧ್ವನಿ ಚಂದ್ರಕಾಂತ ಕಾದ್ರೊಳ್ಳಿ ಬಣದ ರಾಜ್ಯಾಧ್ಯಕ್ಷ ರು ಆಗಿರುವ ಚಂದ್ರಕಾಂತ ಕಾದ್ರೊಳ್ಳಿ ಅವರನ್ನು ಹಳಿಯಾಳ ತಾಲೂಕು ದಲಿತ ಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಸ್ಥಾನದಿಂದ ಪದಚ್ಯುತ ಮಾಡಲಾಗಿದೆ ಎಂದು ಸಂಘಟನೆಯು ಪ್ರಕಟಣೆಯಲ್ಲಿ ತಿಳಿಸಿದೆ.

Vijaya Karnataka 17 Jun 2019, 5:00 am
ಹಳಿಯಾಳ : ದಲಿತ ಮುಖಂಡ ಹಾಗೂ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ ಧ್ವನಿ ಚಂದ್ರಕಾಂತ ಕಾದ್ರೊಳ್ಳಿ ಬಣದ ರಾಜ್ಯಾಧ್ಯಕ್ಷ ರು ಆಗಿರುವ ಚಂದ್ರಕಾಂತ ಕಾದ್ರೊಳ್ಳಿ ಅವರನ್ನು ಹಳಿಯಾಳ ತಾಲೂಕು ದಲಿತ ಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಸ್ಥಾನದಿಂದ ಪದಚ್ಯುತ ಮಾಡಲಾಗಿದೆ ಎಂದು ಸಂಘಟನೆಯು ಪ್ರಕಟಣೆಯಲ್ಲಿ ತಿಳಿಸಿದೆ.
Vijaya Karnataka Web chandrakanta deposed as president
ಚಂದ್ರಕಾಂತ ಅಧ್ಯಕ್ಷ ಸ್ಥಾನದಿಂದ ಪದಚ್ಯುತಿ


ಭಾನುವಾರ ಪಟ್ಟಣದಲ್ಲಿ ಆಯೋಜಿಸಿದ್ದ ತಾಲೂಕಾ ದಲಿತ ಸಂಘಟನೆಗಳ ಪರ ಸಂಘಟನೆಗಳ ಒಕ್ಕೂಟದ ಮಹಾಸಭೆಯಲ್ಲಿ ಈ ನಿರ್ಣಯಕ್ಕೆ ಬರಲಾಗಿದೆ. ಒಕ್ಕೂಟದ ಅಧ್ಯಕ್ಷ ರಾಗಿ ಆಯ್ಕೆಯಾಗಿದ್ದ ಚಂದ್ರಕಾಂತ ಕಾದ್ರೊಳ್ಳಿ ಅವರು ದಲಿತ ಸಮುದಾಯಕ್ಕೆ ವಿರುದ್ಧವಾಗಿ ವರ್ತನೆ ಮಾಡಿದ್ದರ ಪರಿಣಾಮ ಅವರನ್ನು ಇಂದಿನ ಸಭೆಯಲ್ಲಿ ಎಲ್ಲ ಸದಸ್ಯರ ನಿರ್ಣಯದಂತೆ ತೆಗೆದು ಹಾಕಲಾಗಿದೆ. ಮುಂದಿನ ಕೆಲವೇ ದಿನಗಳಲ್ಲಿ ಒಕ್ಕೂಟದ ಸಭೆ ನಡೆದು ಹೊಸ ಅಧ್ಯಕ್ಷ ರ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

ಮುಂದಿನ ಕೆಲವೇ ದಿನಗಳಲ್ಲಿ ಹಳಿಯಾಳ-ಜೊಯಿಡಾ ಮತಕ್ಷೇತ್ರದ ಎಲ್ಲ ದಲಿತ ಸಮುದಾಯದ ಸಂಘಟನೆಗಳ ಪದಾಧಿಕಾರಿಗಳು ಸಮಾವೇಶಗೊಂಡು ಸಭೆಗಳನ್ನು ನಡೆಸಿ, ಪರಸ್ಪರ ಚರ್ಚೆ ಮಾಡುವ ಮೂಲಕ ನೂತನ ಅಧ್ಯಕ್ಷ ರ ಆಯ್ಕೆ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಸಭೆಯಲ್ಲಿ ಯಲ್ಲಪ್ಪಾ ಹೊನ್ನೋಜಿ, ಪುರಸಭೆ ಸದಸ್ಯ ಸಂತೋಷ ಘಟಕಾಂಬಳೆ, ನ್ಯಾಯವಾದಿ ಮೇಘರಾಜ್‌ ಮೇತ್ರಿ, ಮಂಜುನಾಥ್‌ ಮಾದರ, ಹನುಮಂತ ಚಲವಾದಿ, ಪವಿತ್ರ ಮೇತ್ರಿ, ಬಡೇಸಾಬ ಕಕ್ಕೇರಿ ಸೇರಿದಂತೆ ನೂರಕ್ಕೂ ಅಧಿಕ ದಲಿತ ಮುಖಂಡರು ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ