ಹಳಿಯಾಳ : ದಲಿತ ಮುಖಂಡ ಹಾಗೂ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ ಧ್ವನಿ ಚಂದ್ರಕಾಂತ ಕಾದ್ರೊಳ್ಳಿ ಬಣದ ರಾಜ್ಯಾಧ್ಯಕ್ಷ ರು ಆಗಿರುವ ಚಂದ್ರಕಾಂತ ಕಾದ್ರೊಳ್ಳಿ ಅವರನ್ನು ಹಳಿಯಾಳ ತಾಲೂಕು ದಲಿತ ಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಸ್ಥಾನದಿಂದ ಪದಚ್ಯುತ ಮಾಡಲಾಗಿದೆ ಎಂದು ಸಂಘಟನೆಯು ಪ್ರಕಟಣೆಯಲ್ಲಿ ತಿಳಿಸಿದೆ.
ಭಾನುವಾರ ಪಟ್ಟಣದಲ್ಲಿ ಆಯೋಜಿಸಿದ್ದ ತಾಲೂಕಾ ದಲಿತ ಸಂಘಟನೆಗಳ ಪರ ಸಂಘಟನೆಗಳ ಒಕ್ಕೂಟದ ಮಹಾಸಭೆಯಲ್ಲಿ ಈ ನಿರ್ಣಯಕ್ಕೆ ಬರಲಾಗಿದೆ. ಒಕ್ಕೂಟದ ಅಧ್ಯಕ್ಷ ರಾಗಿ ಆಯ್ಕೆಯಾಗಿದ್ದ ಚಂದ್ರಕಾಂತ ಕಾದ್ರೊಳ್ಳಿ ಅವರು ದಲಿತ ಸಮುದಾಯಕ್ಕೆ ವಿರುದ್ಧವಾಗಿ ವರ್ತನೆ ಮಾಡಿದ್ದರ ಪರಿಣಾಮ ಅವರನ್ನು ಇಂದಿನ ಸಭೆಯಲ್ಲಿ ಎಲ್ಲ ಸದಸ್ಯರ ನಿರ್ಣಯದಂತೆ ತೆಗೆದು ಹಾಕಲಾಗಿದೆ. ಮುಂದಿನ ಕೆಲವೇ ದಿನಗಳಲ್ಲಿ ಒಕ್ಕೂಟದ ಸಭೆ ನಡೆದು ಹೊಸ ಅಧ್ಯಕ್ಷ ರ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
ಮುಂದಿನ ಕೆಲವೇ ದಿನಗಳಲ್ಲಿ ಹಳಿಯಾಳ-ಜೊಯಿಡಾ ಮತಕ್ಷೇತ್ರದ ಎಲ್ಲ ದಲಿತ ಸಮುದಾಯದ ಸಂಘಟನೆಗಳ ಪದಾಧಿಕಾರಿಗಳು ಸಮಾವೇಶಗೊಂಡು ಸಭೆಗಳನ್ನು ನಡೆಸಿ, ಪರಸ್ಪರ ಚರ್ಚೆ ಮಾಡುವ ಮೂಲಕ ನೂತನ ಅಧ್ಯಕ್ಷ ರ ಆಯ್ಕೆ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಭೆಯಲ್ಲಿ ಯಲ್ಲಪ್ಪಾ ಹೊನ್ನೋಜಿ, ಪುರಸಭೆ ಸದಸ್ಯ ಸಂತೋಷ ಘಟಕಾಂಬಳೆ, ನ್ಯಾಯವಾದಿ ಮೇಘರಾಜ್ ಮೇತ್ರಿ, ಮಂಜುನಾಥ್ ಮಾದರ, ಹನುಮಂತ ಚಲವಾದಿ, ಪವಿತ್ರ ಮೇತ್ರಿ, ಬಡೇಸಾಬ ಕಕ್ಕೇರಿ ಸೇರಿದಂತೆ ನೂರಕ್ಕೂ ಅಧಿಕ ದಲಿತ ಮುಖಂಡರು ಭಾಗವಹಿಸಿದ್ದರು.
ಭಾನುವಾರ ಪಟ್ಟಣದಲ್ಲಿ ಆಯೋಜಿಸಿದ್ದ ತಾಲೂಕಾ ದಲಿತ ಸಂಘಟನೆಗಳ ಪರ ಸಂಘಟನೆಗಳ ಒಕ್ಕೂಟದ ಮಹಾಸಭೆಯಲ್ಲಿ ಈ ನಿರ್ಣಯಕ್ಕೆ ಬರಲಾಗಿದೆ. ಒಕ್ಕೂಟದ ಅಧ್ಯಕ್ಷ ರಾಗಿ ಆಯ್ಕೆಯಾಗಿದ್ದ ಚಂದ್ರಕಾಂತ ಕಾದ್ರೊಳ್ಳಿ ಅವರು ದಲಿತ ಸಮುದಾಯಕ್ಕೆ ವಿರುದ್ಧವಾಗಿ ವರ್ತನೆ ಮಾಡಿದ್ದರ ಪರಿಣಾಮ ಅವರನ್ನು ಇಂದಿನ ಸಭೆಯಲ್ಲಿ ಎಲ್ಲ ಸದಸ್ಯರ ನಿರ್ಣಯದಂತೆ ತೆಗೆದು ಹಾಕಲಾಗಿದೆ. ಮುಂದಿನ ಕೆಲವೇ ದಿನಗಳಲ್ಲಿ ಒಕ್ಕೂಟದ ಸಭೆ ನಡೆದು ಹೊಸ ಅಧ್ಯಕ್ಷ ರ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
ಮುಂದಿನ ಕೆಲವೇ ದಿನಗಳಲ್ಲಿ ಹಳಿಯಾಳ-ಜೊಯಿಡಾ ಮತಕ್ಷೇತ್ರದ ಎಲ್ಲ ದಲಿತ ಸಮುದಾಯದ ಸಂಘಟನೆಗಳ ಪದಾಧಿಕಾರಿಗಳು ಸಮಾವೇಶಗೊಂಡು ಸಭೆಗಳನ್ನು ನಡೆಸಿ, ಪರಸ್ಪರ ಚರ್ಚೆ ಮಾಡುವ ಮೂಲಕ ನೂತನ ಅಧ್ಯಕ್ಷ ರ ಆಯ್ಕೆ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಭೆಯಲ್ಲಿ ಯಲ್ಲಪ್ಪಾ ಹೊನ್ನೋಜಿ, ಪುರಸಭೆ ಸದಸ್ಯ ಸಂತೋಷ ಘಟಕಾಂಬಳೆ, ನ್ಯಾಯವಾದಿ ಮೇಘರಾಜ್ ಮೇತ್ರಿ, ಮಂಜುನಾಥ್ ಮಾದರ, ಹನುಮಂತ ಚಲವಾದಿ, ಪವಿತ್ರ ಮೇತ್ರಿ, ಬಡೇಸಾಬ ಕಕ್ಕೇರಿ ಸೇರಿದಂತೆ ನೂರಕ್ಕೂ ಅಧಿಕ ದಲಿತ ಮುಖಂಡರು ಭಾಗವಹಿಸಿದ್ದರು.