ಆ್ಯಪ್ನಗರ

ಮೋಡಿ ಮಾಡಿದ ತಬಲಾ, ಮುರಳಿ ನಾದ

ಶಿರಸಿ : ವಿಕಾರಿನಾಮ ಸಂವತ್ಸರದ ಯುಗಾದಿ ಹಬ್ಬದ ಸಂಭ್ರಮ ಮುತ್ಸಂಜೆಯಲ್ಲಿ ಮುರಳಿ ನಾದ ಮೋಡಿ ಮಾಡಿತು. ಸುಮಾರು ಎರಡು ತಾಸುಗಳ ಕಾಲ ನಡೆದ ಮುರಳಿ ನಾದ ಹಾಗೂ ತಬಲಾ ವಾದನ ನವ ವರ್ಷದ ಪ್ರಥಮ ದಿನಕ್ಕೆ ಹೊಸ ಬೆರಗು ಕಟ್ಟಿಕೊಟ್ಟಿತು.

Vijaya Karnataka 12 Apr 2019, 5:00 am
ಶಿರಸಿ : ವಿಕಾರಿನಾಮ ಸಂವತ್ಸರದ ಯುಗಾದಿ ಹಬ್ಬದ ಸಂಭ್ರಮ ಮುತ್ಸಂಜೆಯಲ್ಲಿ ಮುರಳಿ ನಾದ ಮೋಡಿ ಮಾಡಿತು. ಸುಮಾರು ಎರಡು ತಾಸುಗಳ ಕಾಲ ನಡೆದ ಮುರಳಿ ನಾದ ಹಾಗೂ ತಬಲಾ ವಾದನ ನವ ವರ್ಷದ ಪ್ರಥಮ ದಿನಕ್ಕೆ ಹೊಸ ಬೆರಗು ಕಟ್ಟಿಕೊಟ್ಟಿತು.
Vijaya Karnataka Web SRS-7SRS2


ವಿಶ್ವಶಾಂತಿ ಸೇವಾ ಟ್ರಸ್ಟ್‌ ಹಮ್ಮಿಕೊಂಡ ವೇಣು ನಾದ ಕಾರ್ಯಕ್ರಮದಲ್ಲಿ ಪ್ರಸಿದ್ಧ ಕಲಾವಿದ ಪ್ರಕಾಶ ಹೆಗಡೆ ಕಲ್ಲಾರೆಮನೆ ಕೊಳಲು, ಜಾಖೀರ್‌ ಹುಸೇನ್‌ ಶಿಷ್ಯ ಲಕ್ಷ್ಮೀಶರಾವ್‌ ಕಲ್ಗುಂಡಿಕೊಪ್ಪ ಅವರ ತಬಲಾ ಗಮನ ಸೆಳೆದವು. ಗ್ರಾಮೀಣ ಸೊಗಡಿನ ವಾತಾವರಣದ ತಂಗಾಳಿಯಲ್ಲಿ ವಿಶಿಷ್ಟ ಅನುಭವ ಕಟ್ಟಿಕೊಟ್ಟಿತು.

ಈಚೆಗಷ್ಟೇ ಕೊಳಲು ವಾದನಕ್ಕೆ ಏ ಗ್ರೇಡ್‌ ಕಲಾವಿದರಾಗಿ ಮಾನ್ಯತೆ ಪಡೆದ ಪ್ರಕಾಶ ಹೆಗಡೆ ಕಲ್ಲಾರೆಮನೆ ಅವರನ್ನು ಟ್ರಸ್ಟನಿಂದ ಸನ್ಮಾನಿಸಲಾಯಿತು. ಯಕ್ಷ ಗಾನ ಅಕಾಡೆಮಿ ಸದಸ್ಯ ನಾಗರಾಜ ಜೋಶಿ ಸೋಂದಾ, ಲಯನ್ಸ್‌ ಶಿಕ್ಷ ಣ ಸಂಸ್ಥೆ ಗೌರವ ಕಾರ್ಯದರ್ಶಿ ಎಂ.ಎಂ.ಭಟ್ಟ ಕಾರೇಕೊಪ್ಪ, ಎಂಎಸ್‌ಪಿ ಸಮಿತಿ ಕಾರ್ಯದರ್ಶಿ ಎಂ.ವಿ.ಹೆಗಡೆ ಕಾನಗೋಡ, ಟ್ರಸ್ಟ್‌ ಕಾರ್ಯದರ್ಶಿ ಗಾಯತ್ರಿ ರಾಘವೇಂದ್ರ, ಉಪಾಧ್ಯಕ್ಷ ರಮೇಶ ಹೆಗಡೆ ಹಳೇಕಾನಗೋಡ, ನಿರ್ದೇಶಕರಾದ ಕೇಶವ ಹೆಗಡೆ ಕೊಳಗಿ, ವೆಂಕಟೇಶ ಬೊಗ್ರಿಮಕ್ಕಿ, ನರೇಂದ್ರ ಹೆಗಡೆ, ಗುರುಪ್ರಸಾದ ಶಿಂಗನಮನೆ ಮುಂತಾದವರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ