ಆ್ಯಪ್ನಗರ

ನೂತನ ಮಾರ್ಕೆಟ್‌ಗೆ ಜಾಗ ಪರಿಶೀಲನೆ

ಗೋಕರ್ಣ : ನೂತನ ಸಂತೆ ಮಾರುಕಟ್ಟೆಯನ್ನು ನಿರ್ಮಿಸಲು ಉದ್ದೇಶಿಸಿರುವ ಇಲ್ಲಿನ ಎಪಿಎಂಸಿ ಜಾಗವನ್ನು ಅಧಿಕಾರಿಗಳು ಶುಕ್ರವಾರ ಪರಿಶೀಲಿಸಿದರು. ಒಂದು ಎಕರೆ ವ್ಯಾಪ್ತಿಯಲ್ಲಿ ಇಲ್ಲಿನ ರೈತರಿಗೆ ಮತ್ತು ಖರಿದೀದಾರರಿಗೆ ಮೂಲ ಸೌಕರ್ಯಗಳನ್ನು ಒಳಗೊಂಡ ವಿಶಾಲ ಜಾಗದಲ್ಲಿ ಸುಸಜ್ಜಿತ ಮಾರುಕಟ್ಟೆ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. ಇದೇ ವೇಳೆ ಜಾಗದ ಗಡಿಗುರುತನ್ನು ಸಹ ಮಾಡಲಾಯಿತು.

Vijaya Karnataka 24 Aug 2019, 5:00 am
ಗೋಕರ್ಣ : ನೂತನ ಸಂತೆ ಮಾರುಕಟ್ಟೆಯನ್ನು ನಿರ್ಮಿಸಲು ಉದ್ದೇಶಿಸಿರುವ ಇಲ್ಲಿನ ಎಪಿಎಂಸಿ ಜಾಗವನ್ನು ಅಧಿಕಾರಿಗಳು ಶುಕ್ರವಾರ ಪರಿಶೀಲಿಸಿದರು. ಒಂದು ಎಕರೆ ವ್ಯಾಪ್ತಿಯಲ್ಲಿ ಇಲ್ಲಿನ ರೈತರಿಗೆ ಮತ್ತು ಖರಿದೀದಾರರಿಗೆ ಮೂಲ ಸೌಕರ್ಯಗಳನ್ನು ಒಳಗೊಂಡ ವಿಶಾಲ ಜಾಗದಲ್ಲಿ ಸುಸಜ್ಜಿತ ಮಾರುಕಟ್ಟೆ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. ಇದೇ ವೇಳೆ ಜಾಗದ ಗಡಿಗುರುತನ್ನು ಸಹ ಮಾಡಲಾಯಿತು.
Vijaya Karnataka Web checking the fields for the new market
ನೂತನ ಮಾರ್ಕೆಟ್‌ಗೆ ಜಾಗ ಪರಿಶೀಲನೆ


ಎಪಿಎಂಸಿ ಅಧ್ಯಕ್ಷ ಧೀರೂ ಶಾನಭಾಗ, ತಾ.ಪಂ. ಇಒ ಸಿ.ಟಿ.ನಾಯ್ಕ, ತಾ.ಪಂ.ಸದಸ್ಯ ಮಹೇಶ ಶೆಟ್ಟಿ, ಆರ್‌.ಜಿ.ಗುನಗಿ, ಪಿಡಿಒ ಬಾಲಕೃಷ್ಣ ನಾಯ್ಕ, ವಾಸುದೇವ ಶ್ರೀಧರ ಕಾಮತ, ಕಾರ್ಯದರ್ಶಿ ಶ್ರೀಧರ ಬೋಕರ, ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು. ಇಲ್ಲಿನ ತಾಜಾ ತರಕಾರಿ ಬೆಳೆಗಳಿಗೆ ರಾಜ್ಯ, ಹೂರ ರಾಜ್ಯಗಳಿಂದ ಬಹುಬೇಡಿಕೆ ಇದ್ದು, ಇದುವರೆಗೂ ಮಾರಟಕ್ಕೆ ರೈತರಿಗೆ ಸೂಕ್ತ ವ್ಯವಸ್ಥೆ ಇರದೇ ರಸ್ತೆ ಬದಿಯಲ್ಲೇ ವ್ಯಾಪಾರ ನಡೆಯುತ್ತಿತ್ತು, ಇದರಿಂದ ಸಂಚಾರದ ಜತೆಗೆ ಮಾರಾಟ ಮಾಡುವವರಿಗೆ ಮತ್ತು ಖರೀದಿದಾರರಿಗೆ ತೀವ್ರ ತೊಂದರೆಯಾಗಿತ್ತು. ಇನ್ನಾದರೂ ಶೀಘ್ರ ಕಾಮಗಾರಿ ಆರಂಭಿಸಿ ಸೂಕ್ತ ವ್ಯವಸ್ಥೆ ಕಲ್ಪಿಸಲಿ ಎಂಬುದು ಈ ಭಾಗದ ಬೆಳೆಗಾರರ ಅಭಿಪ್ರಾಯವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ