ಆ್ಯಪ್ನಗರ

ಪತ್ರ ಸಂಸ್ಕೃತಿಯಿಂದ ಜೀವನಕ್ಕೆ ಮೆರಗು

ಶಿರಸಿ : ಪತ್ರ ಬರೆಯುವ, ಪತ್ರಕ್ಕಾಗಿ ಕಾಯುವ ಮತ್ತು ಸಂಭ್ರಮಿಸುವ ಆನಂದಾನುಭೂತಿಯ ಕ್ಷಣಗಳು ಇಂದು ಮಾಯವಾಗಿವೆ ಎಂದು ಲೇಖಕ ದಾಳೆ ಗೌಡ ಭದ್ರಾವತಿ ಹೇಳಿದರು.

Vijaya Karnataka 14 Nov 2019, 5:00 am
ಶಿರಸಿ : ಪತ್ರ ಬರೆಯುವ, ಪತ್ರಕ್ಕಾಗಿ ಕಾಯುವ ಮತ್ತು ಸಂಭ್ರಮಿಸುವ ಆನಂದಾನುಭೂತಿಯ ಕ್ಷಣಗಳು ಇಂದು ಮಾಯವಾಗಿವೆ ಎಂದು ಲೇಖಕ ದಾಳೆ ಗೌಡ ಭದ್ರಾವತಿ ಹೇಳಿದರು.
Vijaya Karnataka Web cheer for life from letter culture
ಪತ್ರ ಸಂಸ್ಕೃತಿಯಿಂದ ಜೀವನಕ್ಕೆ ಮೆರಗು


ಲಯನ್ಸ್‌ ಕ್ಲಬ್‌, ಲಯನ್ಸ್‌ ಶಿಕ್ಷಣ ಸಂಸ್ಥೆಯಲ್ಲಿಏರ್ಪಡಿಸಿದ್ದ ಕಾರ್ಯಕ್ರಮದಲ್ಲಿಅವರು ಮಾತನಾಡಿದರು. ಈಗ ವಾಟ್ಸಪ್‌, ಟ್ವಿಟರ್‌, ಇ-ಮೇಲ್‌ ಯುಗ. ಜೀವಂತ ಅಕ್ಷರಗಳೇ ಮಾತಾಡಿ ಮಧುರಾನುಭವ ನೀಡುವ ಕಾಲ ಗತಿಸಿಹೋದ ಅನುಭವವಾಗುತ್ತಿದೆ. ಇದೇ ನೆಲೆಯಲ್ಲಿಪತ್ರ ಸಂಸ್ಕೃತಿ ಸಂಘಟನೆ ಸ್ಥಾಪಿಸಿ ಕಳೆದ 15 ವರ್ಷಗಳಿಂದ ಶಾಲಾ-ಕಾಲೇಜುಗಳಿಗೆ ತೆರಳಿ ಜಾಗೃತ ಮೂಡಿಸುತ್ತಿದ್ದೇವೆ ಎಂದರು. ಕಾಯಕಯೋಗಿ ಜಗತನ್ನೇ ಬದಲಿಸಬಲ್ಲ. ಹಾಗೆಯೇ ಪತ್ರ ಸಂಸ್ಕೃತಿ ಮಾನವ ಸಂವಹನದಲ್ಲಿಮಧುರ ಸಂಬಂಧವನ್ನು ಸೊಗಸಾಗಿಸಿ ಜೀವನಕ್ಕೆ ಮೆರಗು ನೀಡುತ್ತದೆ, ಮಾತೃಭಾಷೆಯನ್ನು ಪ್ರೀತಿಸಿ ಎಂದರು.

ಸಭಾಧ್ಯಕ್ಷತೆ ವಹಿಸಿದ್ದ ಲಯನ್ಸ್‌ ಕ್ಲಬ್‌ ಅಧ್ಯಕ್ಷ ಜಿ.ಎ.ಹೆಗಡೆ ಸೋಂದಾ ಮಾತನಾಡಿ, ಭಾಷೆ-ಭಾವ ಎರಡನ್ನೂ ಉಳಿಸಿ ನಮ್ಮ ಅಸ್ಮಿತೆಯ ಅದಮ್ಯತೆಗೆ ಪತ್ರ ಸಂಸ್ಕೃತಿಯು ನೀಡುವ ಕೊಡುಗೆ ಅನುಪಮವಾಗಿದೆ. ಪುರಾಣಗಳಲ್ಲಿಯೂ ಸಹ ಪಾರಿವಾಳಗಳ ಮೂಲಕ ದೂತರ ಮೂಲಕ ಬರೆದ ಪತ್ರಗಳನ್ನು ಕಳುಹಿಸುವ ಸಂಸ್ಕೃತಿ ಇತ್ತು ಎಂಬುದನ್ನು ನಳ ದಮಯಂತಿ, ರುಕ್ಮಿಣಿ ಕಲ್ಯಾಣ, ಭಕ್ತ ಚಂದ್ರಹಾಸದಂತಹ ಕಥಾನಕಗಳನ್ನು ಉಲ್ಲೇಖಿಸಿ ತಿಳಿಸಿದರು.

ಕನ್ನಡ ಪತ್ರ ಸಂಸ್ಕೃತಿಯು ಪದ ಸಂಪತ್ತು, ಜ್ಞಾನ, ಸ್ಮರಣಶಕ್ತಿ ವರ್ಧಿಸಿ ವ್ಯಕ್ತಿಯ ಸೃಜನಶೀಲತೆಗೆ ಇಂಬು ನೀಡಿ ಕನ್ನಡ ಭಾಷೆಯನ್ನು ಸಂರಕ್ಷಿಸುತ್ತದೆ. ಆಂಗ್ಲಭಾಷೆಯೂ ಸೇರಿ ಅನ್ಯ ಭಾಷೆಗಳನ್ನು ದೂಷಿಸದೆ, ದ್ವೇಷಿಸದೆ, ಪ್ರೀತಿಸುತ್ತಾ ಮಾತೃ ಭಾಷೆಯಲ್ಲಿವ್ಯವಹರಿಸುವ ಸಮಚಿತ್ತ ಸ್ಥಿತಿ ಇಂದಿನ ಅಗತ್ಯ ಎಂದರು.

ಕನ್ನಡ ಪರ ಕೈಂಕರ್ಯ ಕೈಗೊಂಡ ದಾಳೆ ಗೌಡ ಅವರನ್ನು ಲಯನ್ಸ್‌ ಕ್ಲಬ್‌ ಪರವಾಗಿ ಸನ್ಮಾನಿಸಲಾಯಿತು. ಲಯನ್ಸ್‌ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎನ್‌. ವಿ. ಜಿ. ಭಟ್ಟ, ಲಯನೆಸ್‌ ಅಧ್ಯಕ್ಷೆ ವರ್ಷ ಪಟವರ್ಧನ್‌ ಮಾತನಾಡಿದರು. ಕಾರ್ಯದರ್ಶಿ ಗುರುರಾಜ ಹೊನ್ನಾವರ, ಸಾಹಿತಿ ಜಿ.ವಿ.ಕೊಪ್ಪಲತೋಟ ಉಪಸ್ಥಿತರಿದ್ದರು. ಸುಮಂಗಲಾ ಹೆಗಡೆ ಪರಿಚಯಿಸಿದರು. ಎಂ.ಎಂ.ಭಟ್ಟ ಕಾರೇಕೊಪ್ಪ ಸ್ವಾಗತಿಸಿದರು. ಬಿಂದು ಹೆಗಡೆ, ಪ್ರತಿಭಾ ಹೆಗಡೆ ನಿರೂಪಿಸಿದರು. ಶಿಕ್ಷಕಿ ರೋಹಿಣಿ ಹೆಗಡೆ ವಂದಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ