ಆ್ಯಪ್ನಗರ

ಚಿಗಳ್ಳಿ ಡ್ಯಾಂ: ಠಾಣೆಗೆ ದೂರು ದಾಖಲು

ಮುಂಡಗೋಡ: ತಾಲೂಕಿನ ಚಿಗಳ್ಳಿ ಜಲಾಶಯವನ್ನು ಯಾರೋ ಕಿಡಿಗೇಡಿಗಳು ಉದ್ದೇಶ ಪೂರ್ವಕವಾಗಿ ಒಡೆದಿದ್ದು, ಈ ಬಗ್ಗೆ ತನಿಖೆ ನಡೆಸಿ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ಚಿಗಳ್ಳಿ ಗ್ರಾಮದ ವ್ಯಕ್ತಿಯೊಬ್ಬರು ಬುಧವಾರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Vijaya Karnataka 15 Aug 2019, 5:00 am
ಮುಂಡಗೋಡ: ತಾಲೂಕಿನ ಚಿಗಳ್ಳಿ ಜಲಾಶಯವನ್ನು ಯಾರೋ ಕಿಡಿಗೇಡಿಗಳು ಉದ್ದೇಶ ಪೂರ್ವಕವಾಗಿ ಒಡೆದಿದ್ದು, ಈ ಬಗ್ಗೆ ತನಿಖೆ ನಡೆಸಿ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ಚಿಗಳ್ಳಿ ಗ್ರಾಮದ ವ್ಯಕ್ತಿಯೊಬ್ಬರು ಬುಧವಾರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
Vijaya Karnataka Web chighali dam complaint to station
ಚಿಗಳ್ಳಿ ಡ್ಯಾಂ: ಠಾಣೆಗೆ ದೂರು ದಾಖಲು


ಚಿಗಳ್ಳಿ ಗ್ರಾಮದ ಮಹೇಶ ಬಂಗಾರಪ್ಪ ಬೆನ್ನೂರ ಎನ್ನುವವರು ದೂರು ದಾಖಲಿಸಿದ್ದಾರೆ. ಆ.12ರಂದು 9 ಗಂಟೆ ಸುಮಾರಿಗೆ ಚಿಗಳ್ಳಿ ಜಲಾಶಯದ ಬಲಗಡೆ ಗೇಟ್‌ನ ಸಮೀಪದಲ್ಲಿ ಜಲಾಶಯದ ಕೆಳ ಭಾಗದ ಅತಿಕ್ರಮಣ ಮಾಡಿದ ರೈತರ ಪೈಕಿ ಯಾರೋ ತಮ್ಮ ಬೆಳೆ ಹಾಗೂ ವಾಸ್ತವ್ಯದ ಸುರಕ್ಷ ತೆ ಹಾಳಾಗುತ್ತದೆ ಎಂಬ ಉದ್ದೇಶದಿಂದ ಒಡ್ಡಿನಲ್ಲಿ ಸಣ್ಣ ಪ್ರಮಾಣದ ಕಾಲುವೆ ಮಾಡಿ ನೀರು ಹರಿ ಬಿಟ್ಟಿದ್ದಾರೆ. ರೈತರ ಬೆಳೆ ನಾಶಪಡಿಸಿ, ಸರಕಾರಿ ರಸ್ತೆಗಳನ್ನು ಸಹ ನಾಶಪಡಿಸಿದ್ದಾರೆ. ಈ ಕುರಿತು ವಿಚಾರಣೆ ನಡೆಸಿ ಆರೋಪಿಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ಅವರು ದೂರಿನಲ್ಲಿ ಒತ್ತಾಯಿಸಿದ್ದಾರೆ. ಸಿಪಿಐ ಡಾ.ಶಿವಾನಂದ ಚಲವಾದಿ ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ