ಆ್ಯಪ್ನಗರ

ಆಕರ್ಷಕ ಉಡುಪು ಧರಿಸಿ ಗಮನ ಸೆಳೆದ ಮಕ್ಕಳು

ಕುಮಟಾ : ತಾಲೂಕಿನಾದ್ಯಂತ ಶಾಲಾ ಪ್ರಾರಂಭೋತ್ಸವ ವಿಜ್ರಂಭಣೆಯಿಂದ ನಡೆಯಿತು. ಪಟ್ಟಣದ ಗುಡಗಾರಗಲ್ಲಿ ಶಾಲೆಯಲ್ಲಿ ಶಿಕ್ಷ ಕರು ಮಕ್ಕಳಿಗೆ ಹೂವು ನೀಡಿ ಸ್ವಾಗತಿಸಿದರು.

Vijaya Karnataka 31 May 2019, 5:00 am
ಕುಮಟಾ : ತಾಲೂಕಿನಾದ್ಯಂತ ಶಾಲಾ ಪ್ರಾರಂಭೋತ್ಸವ ವಿಜ್ರಂಭಣೆಯಿಂದ ನಡೆಯಿತು. ಪಟ್ಟಣದ ಗುಡಗಾರಗಲ್ಲಿ ಶಾಲೆಯಲ್ಲಿ ಶಿಕ್ಷ ಕರು ಮಕ್ಕಳಿಗೆ ಹೂವು ನೀಡಿ ಸ್ವಾಗತಿಸಿದರು.
Vijaya Karnataka Web children who are dressed in attractive clothing
ಆಕರ್ಷಕ ಉಡುಪು ಧರಿಸಿ ಗಮನ ಸೆಳೆದ ಮಕ್ಕಳು


ಪಟ್ಟಣ ಹಾಗೂ ಹಳ್ಳಿಯ ಕೆಲವು ಶಾಲೆಗಳು ತಳಿರುತೋರಣಗಳಿಂದ ಕಂಗೋಳಿಸುತ್ತಿದ್ದವು. ಶಿಕ್ಷ ಕರು ಮಕ್ಕಳನ್ನು ಬರಮಾಡಿಕೊಂಡ ರೀತಿ ಅವರನ್ನು ಆಕರ್ಷಿಸಿತು. ಶಿಕ್ಷ ಕರ ಜೊತೆ ಎಸ್‌ಡಿಎಂಸಿ ಸದಸ್ಯರು ಮಕ್ಕಳನ್ನು ಬರ ಮಾಡಿಕೊಂಡು ಪಠ್ಯಪುಸ್ತಕ, ಬ್ಯಾಗ್‌, ಸಮವಸ್ತ್ರ ನೀಡಿ ಸಿಹಿ ಹಂಚಿದರು. ಪ್ರಥಮ ದಿನವೇ ಮಕ್ಕಳಿಗೆ ಇದೊಂದು ಹಬ್ಬದ ವಾತಾವರಣದಂತೆ ತೋರಿತು. ಅಲ್ಲದೆ ಕೆಲವು ಶಾಲೆಗಳು ಜಾಥಾ ನಡೆಸಿ ಶಿಕ್ಷ ಣದ ಜಾಗೃತಿ ಮೂಡಿಸಿದವು. ಶಾಲೆಯ ಸ್ವಚ್ಛತೆ ಮತ್ತು ಪರಿಸರ ಎದ್ದು ಕಾಣುತ್ತಿತ್ತು. ಮಕ್ಕಳನ್ನು ಕಲಿಕೆಗೆ ಅಣಿಗೊಳಿಸಲು ಶಿಕ್ಷ ಕರು ಸನ್ನದ್ಧರಾದಂತೆ ಕಂಡು ಬಂದರು. ಶಾಲೆಗೆ ಆಗಮಿಸಿದ್ದ ಮಕ್ಕಳು ಸಂಭ್ರಮ ಪಟ್ಟರು. ಭವಿಷ್ಯ ಬೆಳಗಿಸಲು ಜ್ಞಾನ ದೇಗುಲದ ಪ್ರವೇಶ ಮಕ್ಕಳಿಗೆ ವಿಶೇಷ ಅನುಭವ ನೀಡಿತು. ಆಕರ್ಷಕ ಉಡುಪುಗಳನ್ನು ಧರಿಸಿದ ಮಕ್ಕಳು ಶಿಕ್ಷ ಕರ ಗಮನ ಸೆಳೆದರು.

ಏಪ್ರಿಲ್‌, ಮೇ ತಿಂಗಳ ರಜೆ ಮುಗಿಸಿ, ಬುಧವಾರ ಶಾಲೆಗೆ ಬಂದ ಮಕ್ಕಳಿಗೆ ಶಿಕ್ಷ ಕರಿಂದ ದೊರೆತ ಆತ್ಮೀಯ ಸ್ವಾಗತ ರಜಾ ದಿನಗಳ ತುಂಟಾಟ ಮರುಕಳಿಸಿದಂತೆ ಮಾಡಿತು. ಅಲ್ಲದೆ ಕುಮಟಾ ತಾಲೂಕಿನಾದ್ಯಂತ ಬಹುತೇಕ ಎಲ್ಲ ಶಾಲೆಗಳಲ್ಲಿ ಪ್ರಾರಂಭೋತ್ಸವ ಕಾರ್ಯಕ್ರಮ ಹಮ್ಮಿಕೊಂಡು, ಪಾಲಕರಿಗೆ ಸರಕಾರಿ ಶಾಲೆಯಲ್ಲಿ ದೊರೆಯುವ ಸೌಲಭ್ಯ ಮತ್ತು ಗುಣಮಟ್ಟದ ಶಿಕ್ಷ ಣದ ಬಗ್ಗೆ ಜಾಗೃತಿ ಮೂಡಿಸಲಾಯಿತು. ಅಲ್ಲದೆ ಈ ವರ್ಷ ಕುಮಟಾ ಪಟ್ಟಣದ ನೆಲ್ಲೀಕೇರಿ ಪಬ್ಲಿಕ್‌ ಶಾಲೆಯಲ್ಲಿ ಮೇ 10 ರಿಂದ ಆಂಗ್ಲ ಮಾಧ್ಯಮ ತೆರೆಯಲಾಗುತ್ತಿದ್ದು, ಈಗಾಗಲೇ ದಾಖಲಾತಿ ಬೇಡಿಕೆ ಇನ್ನೂ ಜಾಸ್ತಿಯಾಗಿರುವುದು ಸರಕಾರಿ ಶಾಲೆಯಲ್ಲಿ ಆಂಗ್ಲ ಮಾಧ್ಯಮ ತೆರೆದು, ಮಕ್ಕಳ ದಾಖಲಾತಿ ಹೆಚ್ಚಿಸಲು ಶಿಕ್ಷ ಣ ಇಲಾಖೆ ಕೈಗೊಂಡ ಕ್ರಮ ಫಲ ನೀಡುವಂತಿದೆ. ನೆಲ್ಲೀಕೇರಿ ಪಬ್ಲಿಕ್‌ ಸ್ಕೂಲ್‌, ಚಿತ್ರಗಿ ಮಹಾತ್ಮಗಾಂಧಿ ಪ್ರೌಢ ಶಾಲೆ, ಹೆರವಟ್ಟಾದ ಹಿರಿಯ ಪ್ರಥಮಿಕ ಶಾಲೆ ಸೇರಿದಂತೆ ಅನೇಕ ಶಾಲೆಗಳನ್ನು ತಳಿರುತೋರಣಗಳಿಂದ ಅಲಂಕರಿಸಲಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ