ಆ್ಯಪ್ನಗರ

ತರಕಾರಿ ಭರ್ಜರಿ ವ್ಯಾಪಾರ ನಡೆಸಿದ ಮಕ್ಕಳು

ಅಂಕೋಲಾ : ತೆಂಕಣಕೇರಿಯ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಮಕ್ಕಳ ಸಂತೆಯಲ್ಲಿ ತರಕಾರಿ ತಿಂಡಿ-ತಿನಿಸುಗಳ ವ್ಯಾಪಾರ ಭರ್ಜರಿಯಾಗಿ ನಡೆಯಿತು. ವ್ಯಾಪಾರಸ್ಥರನ್ನು ಮೀರಿದ ಶೈಲಿಯಲ್ಲಿ ಮಕ್ಕಳು ವ್ಯವಹಾರ ನಡೆಸಿದರು.

Vijaya Karnataka 18 Jan 2019, 5:00 am
ಅಂಕೋಲಾ : ತೆಂಕಣಕೇರಿಯ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಮಕ್ಕಳ ಸಂತೆಯಲ್ಲಿ ತರಕಾರಿ ತಿಂಡಿ-ತಿನಿಸುಗಳ ವ್ಯಾಪಾರ ಭರ್ಜರಿಯಾಗಿ ನಡೆಯಿತು. ವ್ಯಾಪಾರಸ್ಥರನ್ನು ಮೀರಿದ ಶೈಲಿಯಲ್ಲಿ ಮಕ್ಕಳು ವ್ಯವಹಾರ ನಡೆಸಿದರು.
Vijaya Karnataka Web children with vegetable business
ತರಕಾರಿ ಭರ್ಜರಿ ವ್ಯಾಪಾರ ನಡೆಸಿದ ಮಕ್ಕಳು


ಬೆಂಡೆ, ಬದನೆ, ಪಡವಲಕಾಯಿ, ಮಾವಿನಕಾಯಿ, ಬಸಲೆ ಸೇರಿದಂತೆ ಹತ್ತಾರು ಬಗೆಯ ತರಕಾರಿಗಳು ಮಕ್ಕಳ ಸಂತೆಯಲ್ಲಿ ಮೇಳೈಸಿದ್ದವು. ಸಾಂಪ್ರದಾಯಿಕ ತಿನಿಸುಗಳಾದ ಕೊಟ್ಟೆರೊಟ್ಟಿ, ದೋಸೆ, ಇಡ್ಲಿ ಸೇರಿದಂತೆ ಆಧುನಿಕತೆಯ ತಿಂಡಿ ತಿನಿಸುಗಳು ಸಂತೆಯಲ್ಲಿ ಬಿಕರಿಯಾದವು.

ಆದರ್ಶ ಪ್ರೌಢಶಾಲೆಯ ಮುಖ್ಯಾಧ್ಯಾಪಕ ನಿತ್ಯಾನಂದ ನಾಯ್ಕ ಮಕ್ಕಳ ಸಂತೆಯನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ವ್ಯವಹಾರಿಕ ಜ್ಞಾನವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಆಯೋಜಿಸಿರುವ ಮಕ್ಕಳ ಸಂತೆಗೆ ಸಾರ್ವಜನಿಕರು ಉತ್ತಮವಾಗಿ ಸ್ಪಂದಿಸಿದ್ದಾರೆ. ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಸಾಮಾನ್ಯ ಜ್ಞಾನವನ್ನು ತುಂಬುವುದರೊಂದಿಗೆ ಶಿಕ್ಷಣಕ್ಕೂ ಪೂರಕವಾಗಿರುತ್ತದೆ ಎಂದು ಹೇಳಿದರು.

ಮಕ್ಕಳ ಸಂತೆಯಲ್ಲಿ ಹಿರಿಯ ನಿವೃತ್ತ ಶಿಕ್ಷ ಕ ಬೊಮ್ಮಯ್ಯ ನಾಯ್ಕ, ಎಸ್‌ಡಿಎಂಸಿ ಅಧ್ಯಕ್ಷ ರಾಜೇಶ ಮಿತ್ರಾ ನಾಯ್ಕ, ಮುಖ್ಯಾಧ್ಯಾಪಕಿ ಸುಶೀಲಾ ಆಗೇರ, ಶತಮಾನೋತ್ಸವ ಸಮಿತಿ ಕಾರ್ಯದರ್ಶಿ ವಾಸುದೇವ ಗುನಗಾ, ಖಜಾಂಚಿ ರಮೇಶ ಆಚಾರಿ, ಗ್ರಾ.ಪಂ. ಸದಸ್ಯೆ ಮುಕ್ತಾ ನಾಯ್ಕ, ಶಿಕ್ಷ ಕರಾದ ಶ್ರೀಧರ ಡಿ. ನಾಯ್ಕ, ಶೇಖರ ನಾಯಕ, ಪಾರ್ವತಿ ನಾಯಕ, ವನಿತಾ ನಾಯಕ, ಯಾಸ್ಮಿನ್‌ ಶೇಖ್‌, ಶೈಲಜಾ ಗುರವ, ನಿರ್ಮಲಾ ನಾಯ್ಕ, ಸಿ.ಆರ್‌.ಪಿ. ಅರ್ಚನಾ ಗಾಂವಕರ, ಪ್ರಮುಖರಾದ ವಸಂತ ಎಸ್‌. ನಾಯ್ಕ, ಪ್ರಮುಖರಾದ ಗೌರೀಶ ನಾಯ್ಕ, ಸಂತೋಷ ನಾಯ್ಕ, ರಾಮಕೃಷ್ಣ ನಾಯ್ಕ, ಲತಾ ಗುನಗಾ, ಶಿವಾ ರಾಯ್ಕರ, ದೀಪಾ ರಾಯ್ಕರ, ಮಾಣಿ ನಾಯ್ಕ, ವಿದ್ಯಾ ನಾಯ್ಕ, ಗಣಪತಿ ಪಾಂಡು ನಾಯ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ