ಆ್ಯಪ್ನಗರ

ದಾಯಾದಿಗಳ ಆಸ್ತಿ ಕಲಹ: ಗುಂಡು ಹಾರಿಸಿ ತಾಯಿ, ಮಗನ ಹತ್ಯೆ

ಅಂಕೋಲಾ (ಉತ್ತರ ಕನ್ನಡ) : ಪಟ್ಟಣದ ಮಠಾಕೇರಿಯಲ್ಲಿ ದಾಯಾದಿಗಳ ನಡುವಿನ ಆಸ್ತಿ ಕಲಹ ವಿಕೋಪಕ್ಕೆ ಹೋಗಿ ವ್ಯಕ್ತಿಯೊಬ್ಬ ತನ್ನ ಸಹೋದರನ ಪತ್ನಿ ಹಾಗೂ ಮಗನನ್ನು ಗುಂಡಿಕ್ಕಿ ಶನಿವಾರ ರಾತ್ರಿ ಹತ್ಯೆ ಮಾಡಿದ್ದಾನೆ.

Vijaya Karnataka 28 Jul 2019, 5:00 am
ಅಂಕೋಲಾ (ಉತ್ತರ ಕನ್ನಡ) : ಪಟ್ಟಣದ ಮಠಾಕೇರಿಯಲ್ಲಿ ದಾಯಾದಿಗಳ ನಡುವಿನ ಆಸ್ತಿ ಕಲಹ ವಿಕೋಪಕ್ಕೆ ಹೋಗಿ ವ್ಯಕ್ತಿಯೊಬ್ಬ ತನ್ನ ಸಹೋದರನ ಪತ್ನಿ ಹಾಗೂ ಮಗನನ್ನು ಗುಂಡಿಕ್ಕಿ ಶನಿವಾರ ರಾತ್ರಿ ಹತ್ಯೆ ಮಾಡಿದ್ದಾನೆ.
Vijaya Karnataka Web claiming property of cousins mother and son shot dead
ದಾಯಾದಿಗಳ ಆಸ್ತಿ ಕಲಹ: ಗುಂಡು ಹಾರಿಸಿ ತಾಯಿ, ಮಗನ ಹತ್ಯೆ


ಭೂ ಸೇನೆಯ ನಿವೃತ್ತ ಹವಾಲ್ದಾರ ಸುಬ್ರಾಯ ಯಾನೆ ಅಜಯ ಅಚ್ಯುತ ಪ್ರಭು (45) ಗುಂಡು ಹಾರಿಸಿದ ಆರೋಪಿ. ನಗರದ ಜೈಹಿಂದ್‌ ಆಂಗ್ಲ ಮಾಧ್ಯಮ ಶಾಲೆಯ 2 ತರಗತಿ ವಿದ್ಯಾರ್ಥಿಯಾಗಿದ್ದ ಅನುಜ ಅಮಿತ ಪ್ರಭು (8) ಮತ್ತು ಈತನ ತಾಯಿ ಮೇಧಾ ಅಮಿತ ಪ್ರಭು (33) ಮೃತರು.

ಘಟನೆಯ ವಿವರ: ಆರೋಪಿ ಸುಬ್ರಾಯ ಶನಿವಾರ ರಾತ್ರಿ 7.30ಕ್ಕೆ ತನ್ನ ಮನೆಯ ಕೆಳ ಮಹಡಿಯಲ್ಲಿರುವ ಸಹೋದರನ ಮನೆಗೆ ಅಗಮಿಸಿ ತಾಯಿ ಮಗನಿಗೆ ಪಾಠ ಹೇಳಿಕೊಡುತ್ತಿದ್ದ ವೇಳೆ ಏಕಾಏಕಿ ತನ್ನ ಲೈಯನ್ಸ್‌ ಹೊಂದಿರುವ 12 ಬೋರ್‌, ಡಬಲ್‌ ಬ್ಯಾರೆಲ್‌ ಬಂದೂಕಿನಿಂದ 2 ಬಾರಿ ಗುಂಡು ಹಾರಿಸಿದ್ದಾನೆ. ಆಗ ಬಾಲಕ ಸ್ಥಳದಲ್ಲೇ ಅಸುನೀಗಿದ್ದಾನೆ.

ತೀವ್ರವಾಗಿ ಗಾಯಗೊಂಡಿದ್ದ ಮೇಧಾ ಅವರಿಗೆ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಕೊನೆಯುಸಿರೆಳೆದರು.

ಸಿಪಿಐ ಬಿ. ಪ್ರಮೋದಕುಮಾರ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ. ಎಸ್ಪಿ ವಿನಾಯಕ ಪಾಟೀಲ ಮತ್ತು ಡಿವೈಎಸ್ಪಿ ಶಂಕರ ಮಾರಿಹಾಳ ಘಟನಾ ಸ್ಥಳಕ್ಕೆ ಅಗಮಿಸಿ ಪರಿಶೀಲಿಸಿದ್ದಾರೆ. ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ