ಆ್ಯಪ್ನಗರ

ಪರಿಸರ ಕಾರ್ಯಕರ್ತರ ಪ್ರಶಿಕ್ಷಣ ವರ್ಗ

ಶಿರಸಿ : ಪರಿಸರ ಕೆಲಸ ಮಾಡಲು ಬೇಕಾದ ಜ್ಞಾನ, ಕೌಶಲ ನೀಡುವ ಉದ್ದೇಶದೊಂದಿಗೆ ಪರಿಸರ ಕಾರ್ಯಕರ್ತರ ಪ್ರಶಿಕ್ಷಣ ವರ್ಗ ಇಲ್ಲಿನ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿಡಿ.27ರಿಂದ 29ರವರೆಗೆ ಏರ್ಪಡಿಸಲಾಗಿದೆ.

Vijaya Karnataka 26 Dec 2019, 5:00 am
ಶಿರಸಿ : ಪರಿಸರ ಕೆಲಸ ಮಾಡಲು ಬೇಕಾದ ಜ್ಞಾನ, ಕೌಶಲ ನೀಡುವ ಉದ್ದೇಶದೊಂದಿಗೆ ಪರಿಸರ ಕಾರ್ಯಕರ್ತರ ಪ್ರಶಿಕ್ಷಣ ವರ್ಗ ಇಲ್ಲಿನ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿಡಿ.27ರಿಂದ 29ರವರೆಗೆ ಏರ್ಪಡಿಸಲಾಗಿದೆ.
Vijaya Karnataka Web class of environmental workers
ಪರಿಸರ ಕಾರ್ಯಕರ್ತರ ಪ್ರಶಿಕ್ಷಣ ವರ್ಗ


ನಗರದ ಅರಣ್ಯ ಮಹಾವಿದ್ಯಾಲಯಲ್ಲಿಸುದ್ದಿಗೋಷ್ಠಿ ನಡೆಸಿದ ಪರಿಸರ ತಜ್ಞ ಡಾ.ಆರ್‌.ವಾಸುದೇವ, ಯೂತ್‌ ಫಾರ್‌ ಸೇವಾ ಪ್ರಮುಖ ಉಮಾಪತಿ ಭಟ್ಟ ಈ ಕುರಿತು ವಿವರಣೆ ನೀಡಿದರು. ಪರಿಸರ ಕಾರ‍್ಯದ ಜತೆ ಜೀವನ ನಿರ್ವಹಣೆ ಹೇಗೆ ಮಾಡಬಹುದು ಎಂಬುದನ್ನು ತಿಳಿಸಿಕೊಡಲಾಗುತ್ತದೆ. ಟಿಶ್ಯುಕಲ್ಚರ್‌, ಮಳೆಕೊಯ್ಲುಮುಂತಾದವುಗಳ ಬಗ್ಗೆ ತಿಳಿ ಹೇಳಲಾಗುತ್ತದೆ. ಸುಸ್ಥಿರ ಅಭಿವೃದ್ಧಿಗೆ ಒತ್ತು ನೀಡಿದ್ದೇವೆ, ಈ ಕ್ಷೇತ್ರದಲ್ಲಿಕೆಲಸ ಮಾಡಿದ ಸಾಕಷ್ಟು ಮಂದಿ ಕಾರ್ಯಕ್ರಮದಲ್ಲಿಭಾಗವಹಿಸಲಿದ್ದಾರೆ ಎಂದರು.

ಯೂತ್‌ ಫಾರ್‌ ಸೇವಾ, ಶ್ರೀದುರ್ಗಾ ನರ್ಸರಿ ಸಮಗ್ರ ವಿಕಾಸ ಟ್ರಸ್ಟ ಮುಂತಾದ ಸಂಘಟನೆಗಳ ಸಹಯೋಗದಲ್ಲಿಕಾರ್ಯಕ್ರಮ ಸಂಘಟಿಸಲಾಗಿದೆ. ಡಿ.27ರಂದು ಬೆಳಗ್ಗೆ 10ಕ್ಕೆ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಅಶೀಸರ ಉದ್ಘಾಟಿಸಲಿದ್ದು, ಪ್ರಾಸ್ತಾವಿಕವಾಗಿ ಡಾ. ಆರ್‌.ವಾಸುದೇವ ಮಾತನಾಡುವರು. ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್‌.ಜಿ.ಹೆಗಡೆ, ಪ್ರಕೃತಿ ಶಿಕ್ಷಣ ಕೇಂದ್ರದ ಪ್ರಾದೇಶಿಕ ನಿರ್ದೇಶಕ ಸಂತೋಷ ಸುತಾರ, ಯೂತ್‌ ಫಾರ್‌ ಸೇವಾದ ಭಾಸ್ಕರ ಕೇಶವಮೂರ್ತಿ, ಸಂಶೋಧಕ ಶ್ರೀಕಾಂತ ಗುನಗಾ, ತಾಪಂ ಉಪಾಧ್ಯಕ್ಷ ಚಂದ್ರು ಎಸಳೆ ಪಾಲ್ಗೊಳ್ಳುವರು ಎಂದರು.

28ರಂದು ವಿವಿಧ ಗೋಷ್ಠಿ ನಡೆಯಲಿದ್ದು, ಸುಸ್ಥಿರ ಅಭಿವೃದ್ಧಿಗಾಗಿ ಶಿಕ್ಷಣ ವಿಷಯವಾಗಿ ಸಂತೋಷ ಸುತಾರ, ಜೀವ ವೈವಿಧ್ಯ ಕುರಿತು ವಾಸುದೇವ, ಜೀವ ವೈವಿಧ್ಯ ದಾಖಲಾತಿಯ ಮಹತ್ವದ ಕುರಿತು ಶ್ರೀಕಾಂತ ಗುನಗಾ, ವನ್ಯಜೀವಿ ಪರಿಸರದ ಕುರಿತು ಶ್ರೀಧರ ಭಟ್ಟ, ಮಳೆ ಕೋಯ್ಲಿನ ಕುರಿತು ಶಿವಾನಂದ ಕಳವೆ, ಶ್ರೀನಿವಾಸ ಹೆಬ್ಬಾರ, ಚಂದ್ರು ಎಸಳೆ, ಶ್ರೀಕಾಂತ ಹೆಗಡೆ, ನರಸಿಂಹ ಛಾಪಖಂಡ, ಶೈಲಜಾ ಗೋರ್ನಮನೆ, ವಿಶ್ವೇಶ್ವರ ಸಜ್ಜನ, ಪಂಚಯ್ಯ ಹಿರೇಮಠ ಮಾತನಾಡುವರು ಎಂದರು.

ವನದರ್ಶನ, ಶ್ರೀಕಾಂತ ಹೆಗಡೆ ಮಳೆ ಕೊಯ್ಲುವೀಕ್ಷಣೆ, ಕಾನ್ಮನೆ, ಚಾರೆ ಜಡ್ಡಿಗೆ ಚಾರಣ, ಭೀಮನವಾರೆ, ಜೇನು ಕೃಷಿಯ ಮಾಹಿತಿ, ಧರ್ಮೇಂದ್ರ ಹೆಗಡೆ ಜೊತೆ ಸಂವಾದ ನಡೆಯಲಿದೆ. ನಂತರ ಪರಿಸರ ಸಂರಕ್ಷಣೆ ಕುರಿತು ಗೊಂಬೆಯಾಟ ನಡೆಯಲಿದೆ ಎಂದರು.

29ರಂದು ಹಸಿರು ಆಹಾರದ ಕುರಿತು ಡಾ. ಜಗದೀಶ ಯಾಜಿ, ಪಶುವೈದ್ಯದಲ್ಲಿಹಸಿರು ಔಷಧ ಕುರಿತು ಡಾ. ಗಣೇಶ ಹೆಗಡೆ, ಪರಿಸರ ಕಾರ್ಯ ಸರಕಾರ ಯೋಜನೆಗಳು ಕುರಿತು ಸತೀಶ ಹೆಗಡೆ, ಜಿ.ಆರ್‌.ಭಟ್ಟ, ಔಷಧ ಸಸ್ಯಗಳ ಮಾರುಕಟ್ಟೆ ಕುರಿತು ಲಕ್ಷಿತ್ರ್ಮೕನಾರಾಯಣ ಹೆಗಡೆ, ಕಸಿ ಕಟ್ಟುವ ಕುರಿತು ಉಮಾಮಹೇಶ್ವರ ಹೆಗಡೆ, ಬೀಜದುಂಡೆ ಕುರಿತು ಉಮಾಪತಿ ಭಟ್ಟ ಮಾಹಿತಿ ನೀಡುವರು ಎಂದರು. ಚಂದ್ರು ಎಸಳೆ, ಡಾ.ಗಣೇಶ ಹೆಗಡೆ, ಶೋಭಾ ಹೆಗಡೆ ತಾರಗೋಡ, ವಿರೇಶ ನರೇಗಲ್‌ ಉಪಸ್ಥಿತರಿದ್ದರು.

ರಾಜ್ಯದ ವಿವಿಧೆಡೆಯಿಂದ ಜನರು ಕಾರ್ಯಕ್ರಮದಲ್ಲಿಭಾಗವಹಿಸುವರು. ಈಗಾಗಲೇ ಸಾಕಷ್ಟು ಜನ ನೋಂದಣಿ ಮಾಡಿಕೊಂಡಿದ್ದಾರೆ. ಪರಿಸರ ಸೇವೆ ಆಂದೋಲನವಾಗಬೇಕು, ಯುವಜನರಲ್ಲಿನಿಸ್ವಾರ್ಥ ಸ್ವಯಂ ಸೇವಾ ಕೆಲಸ ಮಾಡಲು ಪ್ರೇರಣೆ ನೀಡಲಾಗುತ್ತಿದೆ. ಯುತ್‌ ಫಾರ್‌ ಸೇವಾ ಸಂಸ್ಥೆ ಈ ನಿಟ್ಟಿನಲ್ಲಿಕೆಲಸ ಮಾಡುತ್ತಿದ್ದು, ಯುವಜನರಲ್ಲಿನಾಯಕತ್ವದ ಗುಣ ಬಗ್ಗೆಯೂ ಅರಿವು ಮೂಡಿಸಲಾಗುತ್ತದೆ ಎಂದು ಆರ್‌.ವಾಸುದೇವ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ