ಆ್ಯಪ್ನಗರ

ವೈದ್ಯ ವಿಜ್ಞಾನ ಸಂಸ್ಥೆ ನಿರ್ದೇಶಕರನ್ನು ವರ್ಗ ಮಾಡಿ

ಕಾರವಾರ : ಕಾರವಾರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಶಿವಾನಂದ ದೊಡ್ಮನಿ ಅವರನ್ನು ತಕ್ಷ ಣ ವರ್ಗಾವಣೆ ಮಾಡಿ ಅವರ ಅವಧಿಯಲ್ಲಿ ನಡೆದ ಅಕ್ರಮಗಳ ಕುರಿತು ತನಿಖೆ ನಡೆಸುವಂತೆ ಜನಶಕ್ತಿ ವೇದಿಕೆಯ ವತಿಯಿಂದ ಗುರುವಾರ ಅಪರ ಜಿಲ್ಲಾಧಿಕಾರಿ ನಾಗರಾಜ ಸಿಂಗ್ರೇರ್‌ ಅವರಿಗೆ ಮನವಿ ಸಲ್ಲಿಸಲಾಯಿತು.

Vijaya Karnataka 17 May 2019, 5:00 am
ಕಾರವಾರ : ಕಾರವಾರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಶಿವಾನಂದ ದೊಡ್ಮನಿ ಅವರನ್ನು ತಕ್ಷ ಣ ವರ್ಗಾವಣೆ ಮಾಡಿ ಅವರ ಅವಧಿಯಲ್ಲಿ ನಡೆದ ಅಕ್ರಮಗಳ ಕುರಿತು ತನಿಖೆ ನಡೆಸುವಂತೆ ಜನಶಕ್ತಿ ವೇದಿಕೆಯ ವತಿಯಿಂದ ಗುರುವಾರ ಅಪರ ಜಿಲ್ಲಾಧಿಕಾರಿ ನಾಗರಾಜ ಸಿಂಗ್ರೇರ್‌ ಅವರಿಗೆ ಮನವಿ ಸಲ್ಲಿಸಲಾಯಿತು.
Vijaya Karnataka Web KWR-16 GURUDATT 8


ರಾಜ್ಯದ ಯಾವುದೇ ವೈದ್ಯಕೀಯ ವಿಜ್ಞಾನ ಕಾಲೇಜಿನಲ್ಲಿ ನಿರ್ದೇಶಕ ಹುದ್ದೆಯನ್ನು ನಾಲ್ಕು ವರ್ಷಕ್ಕಿಂತ ಹೆಚ್ಚಿಗೆ ಸೇವೆ ಸಲ್ಲಿಸಲು ಎಂ.ಸಿ.ಐ. ನಿಯಮದ ಪ್ರಕಾರ ಅವಕಾಶವಿಲ್ಲ. ಕಾರವಾರ ವೈದ್ಯಕೀಯ ವಿಜ್ಞಾನ ಸಂಸ್ಥೆಯನ್ನು ಹೊರತು ಪಡಿಸಿ, ಉಳಿದ ವೈದ್ಯಕೀಯ ಕಾಲೇಜುಗಳಾದ ಹುಬ್ಬಳ್ಳಿ ಕಿಮ್ಸ್‌, ಕೊಪ್ಪಳ ಮೆಡಿಕಲ್‌ ಕಾಲೇಜು ಸೇರಿದಂತೆ ಇನ್ನಿತರ ಕಾಲೇಜುಗಳಲ್ಲಿ ನಾಲ್ಕು ವರ್ಷ ಮುಗಿದ ತಕ್ಷ ಣ ನಿರ್ದೇಶಕರನ್ನು ಬದಲಾಯಿಸಲಾಗುತ್ತದೆ. ಆದರೆ, ಕಾರವಾರದಲ್ಲಿ ಶಿವಾನಂದ ದೊಡ್ಮನಿ ನಾಲ್ಕು ವರ್ಷ ಕಳೆದರೂ ಅಕ್ರಮ ನಡೆಸುತ್ತ ಇಲ್ಲಿಯೇ ಇದ್ದಾರೆ ಎಂದು ಆರೋಪಿಸಿದ್ದಾರೆ.

ಮೆಡಿಕಲ್‌ ಕಾಲೇಜಿನ ನಿರ್ದೇಶಕ ಹುದ್ದೆಗೆ ಮೂರು ಬಾರಿ ಜಾಹೀರಾತು ಮೂಲಕ ಟೆಂಡರ ಕರೆಯಲಾಗಿದೆ. ಆದರೆ, ಈವರೆಗೂ ಸಂದರ್ಶನ ನಡೆದಿಲ್ಲ.ಅದರಂತೆ ಕಾಲೇಜಿನಲ್ಲಿ ಸಮರ್ಪಕವಾಗಿ ಟೆಂಡರ್‌ ಕರೆಯದೇ ಅನೇಕ ಕೆಲಸವನ್ನು ಗುತ್ತಿಗೆ ನೀಡಲಾಗುತ್ತಿದೆ. ಕ್ಯಾಂಟಿನ್‌, ಪೀಠೋಪಕರಣ, ಯಂತ್ರೋಪಕರಣ ಸೇರಿದಂತೆ ಇನ್ನಿತರ ಖರೀದಿಗಳಲ್ಲಿ ಯಾವುದೇ ಟೆಂಡರ್‌ ಕರೆಯದೇ ಖರೀದಿ ಮಾಡಲಾಗಿದೆ. ಸಮರ್ಪಕ ಅರ್ಹತೆ ಇಲ್ಲದ ವೈದ್ಯರನ್ನು ಮೇಲ್ದರ್ಜೆಯ ಹುದ್ದೆಗೆ ನೀಡಲಾಗಿದೆ. ಕಾಲೇಜಿನ ವ್ಯವಹಾರಗಳನ್ನು ಅನೇಕ ಬ್ಯಾಂಕ್‌ ಖಾತೆಗಳ ಮೂಲಕ ಮಾಡಲಾಗುತ್ತಿದೆ. ಸರಕಾರಕ್ಕೆ ನಾಲ್ಕು ಲಕ್ಷ ರೂ.ತೆರಿಗೆ ವಂಚಿಸಿದ ನಿವೃತ್ತ ಅಧಿಕಾರಿಯೊಬ್ಬರನ್ನು ಆಡಳಿತಾಧಿಕಾರಿಯಾಗಿ ನೇಮಕ ಮಾಡಿಕೊಳ್ಳಲಾಗಿದೆ.ರೋಗಿಗಳು ಪಾವತಿಸಿದ ಹಣಕ್ಕೆ ಸೂಕ್ತ ರಸಿದಿ ನೀಡುತ್ತಿಲ್ಲ. ಕಚೇರಿ ಸಿಬ್ಬಂದಿಯನ್ನು ವಯಕ್ತಿಕ ಕೆಲಸಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಇದರ ಬಗ್ಗೆ ಸಮಗ್ರತನಿಖೆ ನಡೆಯಬೇಕು ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಅಪರ ಜಿಲ್ಲಾಧಿಕಾರಿ ನಾಗರಾಜ ಸಿಂಗ್ರೇರ ಮನವಿ ಸ್ವೀಕರಿಸಿದರು. ಸಂಘಟನೆಯ ಅಧ್ಯಕ್ಷ ಮಾಧವ ನಾಯ್ಕ, ಅಲ್ತಾಫ್‌ ಶೇಖ್‌, ಅನಮೋಲ್‌ ರೇವಣಕರ್‌ ಪ್ರಶಾಂತ ಗಾಂವಕಾರ್‌ ಇತರರು ಇದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ