ಆ್ಯಪ್ನಗರ

ಸ್ವಚ್ಛತಾ ರಥ ಇದ್ರೂ ಕ್ಲೀನ್‌ ಕೇಳ್ಬೇಡಿ

ಜೊಯಿಡಾ : ತಾಲೂಕಿನಲ್ಲಿ ಹಲವು ಯೋಜನೆಗಳು ಸರಿಯಾಗಿ ಜಾರಿಯಾಗುವುದೇ ಇಲ್ಲ . ಇದಕ್ಕೊಂದು ತಾಜಾ ಉದಾಹರಣೆ ಅಂದ್ರೆ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಸ್ವಚ್ಛತಾ ರಥ ಬಳಸಿಕೊಂಡು ತಾಲೂಕಿನ ಅಲವು ಭಾಗಗಳಲ್ಲಿ ಸ್ವಚ್ಛತೆ ಮಾಡಲು ಶುರುಮಾಡಲಾಯಿತು. ಆದರೆ ಕಸ ಮಾತ್ರ ಹಾಗೇ ಉಳಿದಿದೆ.

Vijaya Karnataka 18 Aug 2018, 5:00 am
ಜೊಯಿಡಾ : ತಾಲೂಕಿನಲ್ಲಿ ಹಲವು ಯೋಜನೆಗಳು ಸರಿಯಾಗಿ ಜಾರಿಯಾಗುವುದೇ ಇಲ್ಲ . ಇದಕ್ಕೊಂದು ತಾಜಾ ಉದಾಹರಣೆ ಅಂದ್ರೆ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಸ್ವಚ್ಛತಾ ರಥ ಬಳಸಿಕೊಂಡು ತಾಲೂಕಿನ ಅಲವು ಭಾಗಗಳಲ್ಲಿ ಸ್ವಚ್ಛತೆ ಮಾಡಲು ಶುರುಮಾಡಲಾಯಿತು. ಆದರೆ ಕಸ ಮಾತ್ರ ಹಾಗೇ ಉಳಿದಿದೆ.
Vijaya Karnataka Web clean cleaning charts are not clean yet
ಸ್ವಚ್ಛತಾ ರಥ ಇದ್ರೂ ಕ್ಲೀನ್‌ ಕೇಳ್ಬೇಡಿ


ತಾಪಂ ಕಚೇರಿ: ಸ್ವಚ್ಛ ಮಾಡುವ ಕುರಿತು ಮೈಕ್‌ನಲ್ಲಿ ಕೂಗಿ ಹೇಳಲಾಯಿತು. ಆದರೆ ದೀಪದ ಬುಡದಲ್ಲಿ ಕತ್ತಲು ಎನ್ನುವಂತೆ ಕಚೇರಿ ಸುತ್ತ ಮುತ್ತ ಕಸದ ರಾಶಿ ಹಾಗೇ ಇದೆ.

ಬೀರ್‌ ಬಾಟಲಗಳು, ಪ್ಲಾಸ್ಟಿಕ್‌ಗಳು ,ಇತರೆ ಕಸ ಹೊರ ಬದಿಯಲ್ಲಿ ಬಿದ್ದಿದೆ. ತಾಪಂ ಒಳ ಬದಿಯಲ್ಲಿ ಗೋದಾಮಿನಂತೆ ಎಲ್ಲೆಂದರಲ್ಲಿ ಕಪಾಟು ,ಖರ್ಚಿ, ಬ್ಯಾನರ್‌ಗಳನ್ನು ಎಸೆಯಲಾಗಿದೆ. ಇಲ್ಲಿನ ಶೌಚಾಲಯವೂ ಗಬ್ಬು ನಾರುತ್ತಿದೆ. ಕೈ ತೊಳೆಯುವ ನಲ್ಲಿಯಂತು ಮುಟ್ಟುವ ಹಾಗೆ ಇಲ್ಲ, ಸ್ವಚ್ಛತಾ ಅಭಿಯಾನ ಮಾಡಬೇಕಾದರೆ ತಮ್ಮ ಇಲಾಖೆ ,ತಮ್ಮ ಕಚೇರಿ ಹೇಗಿದೆ ಎಂದು ನೋಡಿಕೊಳ್ಳಬೇಕು ಅಲ್ಲವೇ, ಇದೆಲ್ಲ ನೋಡಿಕೊಂಡು ಇಲ್ಲಿನ ತಾಪಂ ಅಧಿಕಾರಿಗಳು ,ಅಧ್ಯಕ್ಷ ರು ಸದಸ್ಯರುಗಳು ಸುಮ್ಮನೆ ಕುಳಿತಿದ್ದಾರೂ ಏಕೆ? ಎಂಬ ಪ್ರಶ್ನೇ ಸಾರ್ವಜನಿರನ್ನು ಕಾಡುತ್ತಿದೆ.

ತಮ್ಮಲ್ಲಿ ಕಸದ ರಾಶಿ ಇಟ್ಟುಕೊಂಡು ಊರು ಸ್ವಚ್ಛ ಮಾಡುವ ಕೆಲಸ ಯಾಕಪ್ಪ, ನೆಟ್ಟಗೆ ತಮ್ಮ ಕಚೇರಿ ಸ್ವಚ್ಛ ಮಾಡಿಕೊಳ್ಳಲು ಆಗದ ಈ ತಾಪಂಗೆ ಈಡೀ ತಾಲೂಕು ಸ್ವಚ್ಛ ಮಾಡಲು ಹೇಗೆ ಸಾಧ್ಯ ಂಬ ಮಾತುಗಳು ಕೇಳಿ ಬರುತ್ತಿವೆ.

ತಾಲೂಕಿನ ಸ್ವಚ್ಛತೆಗೆಂದು ಬಹಳಷ್ಟು ಹಣ ಬಿಡುಗಡೆಯಾಗಿದೆ, ಆದರೆ ಇಲ್ಲಿನ ಅಧಿಕಾರಗಳ ಬೇಜಾವಾಬ್ದಾರಿ ತನದಿಂದವೂ ಏನೂ ಗೊತ್ತಿಲ್ಲ, ತಾಲೂಕಿನಲ್ಲಿ ಸ್ವಚ್ಛತೆ ಮಾತ್ರ ಆಗಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ