ಆ್ಯಪ್ನಗರ

62ನೇ ವಾರಕ್ಕೆ ಕಾಲಿಟ್ಟ ಸ್ವಚ್ಛತಾ ಕಾರ‍್ಯಕ್ರಮ

ಗೋಕರ್ಣ : ಗೋಕರ್ಣ ಸಮೀಪದ ಹೆಗ್ರೆ ಹಾಗು ಕೇಶ್‌ಗುಡ್ಡೆಯಲ್ಲಿ ಭಾನುವಾರ ಹಲವು ಸಂಘಟನೆಯವರು ಸೇರಿಕೊಂಡು ಸ್ವಚ್ಛತಾ ಕಾರ್ಯ ಕೈಗೊಂಡರು. ಅರಿವು ಬಳಗ, ಶಂಕರ ಪ್ರಸಾದ ಆಶ್ರಮ, ಗೋಕರ್ಣ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಜಗದೀಶ್‌ ನಾಯ್ಕ, ಊರಿನ ನಾಗರಿಕರು ಹಾಗೂ ವಿದೇಶೀಯರು ಸೇರಿ ಸ್ವಚ್ಛತೆ ಮಾಡಿದರು. ಅರಿವು ಬಳಗದವರು ಪ್ರತಿ ಭಾನುವಾರ ಸ್ವಚ್ಛತಾ ಕಾರ್ಯ ಕೈಗೊಂಡಿದ್ದು, ಇದೀಗ ನಡೆಸಿದ ಸ್ವಚ್ಛತೆ 62ನೇ ವಾರದ್ದಾಗಿದೆ. ವೈದ್ಯಾಧಿಕಾರಿ ಡಾ.ಜಗದೀಶ್‌ ನಾಯ್ಕ ಮಾತನಾಡಿ, ಜನರಿಗೆ ಸ್ವಚ್ಛತೆ ಬಗ್ಗೆ ಮಾಹಿತಿ ನೀಡಿದರು. ಶಂಕರ ಪ್ರಸಾದ ಆಶ್ರಮದ ವತಿಯಿಂದ ನೆರೆದವರಿಗೆ ಉಪಹಾರ ವ್ಯವಸ್ಥೆ ಮಾಡಲಾಗಿತ್ತು. ಸ್ವಚ್ಛತಾ ಕಾರ್ಯದಲ್ಲಿ ವಿದೇಶೀಯರು, ಊರ ನಾಗರಿಕರು ಸಹ ಪಾಲ್ಗೊಂಡಿದ್ದರು.

Vijaya Karnataka 1 Apr 2019, 5:00 am
ಗೋಕರ್ಣ : ಗೋಕರ್ಣ ಸಮೀಪದ ಹೆಗ್ರೆ ಹಾಗು ಕೇಶ್‌ಗುಡ್ಡೆಯಲ್ಲಿ ಭಾನುವಾರ ಹಲವು ಸಂಘಟನೆಯವರು ಸೇರಿಕೊಂಡು ಸ್ವಚ್ಛತಾ ಕಾರ್ಯ ಕೈಗೊಂಡರು. ಅರಿವು ಬಳಗ, ಶಂಕರ ಪ್ರಸಾದ ಆಶ್ರಮ, ಗೋಕರ್ಣ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಜಗದೀಶ್‌ ನಾಯ್ಕ, ಊರಿನ ನಾಗರಿಕರು ಹಾಗೂ ವಿದೇಶೀಯರು ಸೇರಿ ಸ್ವಚ್ಛತೆ ಮಾಡಿದರು. ಅರಿವು ಬಳಗದವರು ಪ್ರತಿ ಭಾನುವಾರ ಸ್ವಚ್ಛತಾ ಕಾರ್ಯ ಕೈಗೊಂಡಿದ್ದು, ಇದೀಗ ನಡೆಸಿದ ಸ್ವಚ್ಛತೆ 62ನೇ ವಾರದ್ದಾಗಿದೆ. ವೈದ್ಯಾಧಿಕಾರಿ ಡಾ.ಜಗದೀಶ್‌ ನಾಯ್ಕ ಮಾತನಾಡಿ, ಜನರಿಗೆ ಸ್ವಚ್ಛತೆ ಬಗ್ಗೆ ಮಾಹಿತಿ ನೀಡಿದರು. ಶಂಕರ ಪ್ರಸಾದ ಆಶ್ರಮದ ವತಿಯಿಂದ ನೆರೆದವರಿಗೆ ಉಪಹಾರ ವ್ಯವಸ್ಥೆ ಮಾಡಲಾಗಿತ್ತು. ಸ್ವಚ್ಛತಾ ಕಾರ್ಯದಲ್ಲಿ ವಿದೇಶೀಯರು, ಊರ ನಾಗರಿಕರು ಸಹ ಪಾಲ್ಗೊಂಡಿದ್ದರು.
Vijaya Karnataka Web KWR-31 GKN 2 E




ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ