ಆ್ಯಪ್ನಗರ

ಕಡಲಸಿರಿ ಸಂಘದ ಸದಸ್ಯರಿಂದ ಸ್ವಚ್ಛತಾಕಾರ್ಯ

ಕಾರವಾರ : ತಾಲೂಕಿನ ಮುಡಗೇರಿ ಗ್ರಾಮದ ಡ್ಯಾಂ ಸುತ್ತಮುತ್ತಲಿನ ಪ್ರದೇಶದಲ್ಲಿ ರಾಶಿ ಬಿದ್ದಿದ್ದ ಪ್ಲಾಸ್ಟಿಕ್‌ ಮತ್ತು ಖಾಲಿ ಬಾಟಲಿಗಳನ್ನು ಕಡಲಸಿರಿ ಸಂಘದ ಸದಸ್ಯರು ತೆರವುಗೊಳಿಸಿದರು.

Vijaya Karnataka 30 Jul 2019, 5:00 am
ಕಾರವಾರ : ತಾಲೂಕಿನ ಮುಡಗೇರಿ ಗ್ರಾಮದ ಡ್ಯಾಂ ಸುತ್ತಮುತ್ತಲಿನ ಪ್ರದೇಶದಲ್ಲಿ ರಾಶಿ ಬಿದ್ದಿದ್ದ ಪ್ಲಾಸ್ಟಿಕ್‌ ಮತ್ತು ಖಾಲಿ ಬಾಟಲಿಗಳನ್ನು ಕಡಲಸಿರಿ ಸಂಘದ ಸದಸ್ಯರು ತೆರವುಗೊಳಿಸಿದರು.
Vijaya Karnataka Web cleanliness from members of the seaside association
ಕಡಲಸಿರಿ ಸಂಘದ ಸದಸ್ಯರಿಂದ ಸ್ವಚ್ಛತಾಕಾರ್ಯ


ಸಂಘದ ಹತ್ತಾರು ಯುವತಿಯರೇ ಸೇರಿಕೊಂಡು ಭಾನುವಾರ ಸತತ ಶ್ರಮಾದಾನ ನಡೆಸಿ ಡ್ಯಾಂ ಸುತ್ತಲಿನ ಪ್ರದೇಶವನ್ನು ಸ್ವಚ್ಛಗೊಳಿಸಿದರು. ಮುಡಗೇರಿ ಗ್ರಾಮದಲ್ಲಿ ಜಾಥಾ ನಡೆಸಿ ಒಣ ಕಸ ಮತ್ತು ಹಸಿ ಕಸ ಪ್ರತ್ಯೇಕವಾಗಿಸಿ ವಿಲೇವಾರಿಗೊಳಿಸುವಂತೆ ಜನರಲ್ಲಿ ಜಾಗೃತಿ ಮೂಡಿಸಿದರು. ಕಡಲಸಿರಿ ಸಂಘದ ಸದಸ್ಯರಾದ ಸೋನಾಲಿ, ರವಿತಾ, ಅಶ್ವಿನಿ, ಶಾಶ್ವತಾ, ನಮೃತಾ, ಪ್ರಸಿಲ್ಲಾ, ಪೂಜಾ, ರೇಷ್ಮಾ, ರಶ್ಮಿತಾ ಮತ್ತಿತರರು ಸ್ವಚ್ಛತಾ ಶ್ರಮಾದಾನದಲ್ಲಿ ಪಾಲ್ಗೊಂಡಿದ್ದರು. ಇವರೊಂದಿಗೆ ಮುಡಗೇರಿಯ ಪರಿಸರವಾದಿ ರಾಮದಾಸ ನಾಯ್ಕ ಕೂಡ ಪಾಲ್ಗೊಂಡಿದ್ದರು. ಯುವತಿಯರ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ