ಆ್ಯಪ್ನಗರ

ಗುತ್ತಿಗೇರಿ ಕೆರೆ ಸುತ್ತ ಸ್ವಚ್ಛತಾ ಅಭಿಯಾನ

ಹಳಿಯಾಳ : ನಸುಕಿನ ಜಾವ ಚುಮು ಚುಮು ಮಂಜು ಹಾಗೂ ಮಳೆ ಮಿಶ್ರಿತ ವಾತಾವರಣದಲ್ಲಿ ಇಲ್ಲಿಯ ಕರ್ನಾಟಕ ರಕ್ಷ ಣಾ ವೇದಿಕೆಯ ಪದಾಧಿಕಾರಿಗಳು ಸೇರಿದಂತೆ ಸಾಮಾಜಿಕ ಕಾರ್ಯಕರ್ತರ ಪಡೆಯು ಪಟ್ಟಣದ ಅಂಚಿನಲ್ಲಿರುವ ಹೊರಗಿನ ಗುತ್ತಿಗೇರಿಯ ದೊಡ್ಡ ಕೆರೆಯಲ್ಲಿ ಭಾನುವಾರ ಶ್ರಮದಾನದ ಮೂಲಕ ಸ್ವಚ್ಛತಾಗೊಳಿಸಿದರು.

Vijaya Karnataka 15 Jul 2019, 5:00 am
ಹಳಿಯಾಳ : ನಸುಕಿನ ಜಾವ ಚುಮು ಚುಮು ಮಂಜು ಹಾಗೂ ಮಳೆ ಮಿಶ್ರಿತ ವಾತಾವರಣದಲ್ಲಿ ಇಲ್ಲಿಯ ಕರ್ನಾಟಕ ರಕ್ಷ ಣಾ ವೇದಿಕೆಯ ಪದಾಧಿಕಾರಿಗಳು ಸೇರಿದಂತೆ ಸಾಮಾಜಿಕ ಕಾರ್ಯಕರ್ತರ ಪಡೆಯು ಪಟ್ಟಣದ ಅಂಚಿನಲ್ಲಿರುವ ಹೊರಗಿನ ಗುತ್ತಿಗೇರಿಯ ದೊಡ್ಡ ಕೆರೆಯಲ್ಲಿ ಭಾನುವಾರ ಶ್ರಮದಾನದ ಮೂಲಕ ಸ್ವಚ್ಛತಾಗೊಳಿಸಿದರು.
Vijaya Karnataka Web KWR-14 HLY 2


ಬೆಳಗ್ಗೆ 6 ಗಂಟೆಗೆ ಕೆರೆಯ ಆವರಣಕ್ಕೆ ಆಗಮಿಸಿ ಕೆರೆಯಲ್ಲಿ ಹಾಕಲಾಗಿದ್ದ ತ್ಯಾಜ್ಯ, ಬಿಯರ್‌ ಬಾಟಲ್‌, ಪ್ಲಾಸ್ಟಿಕ್‌, ಪೂಜಾ ಸಾಮಗ್ರಿಗಳು, ಪೂಜೆ ಮಾಡಿದ ತೆಂಗಿನಕಾಯಿ, ವಾಟರ್‌ ಬಾಟಲ್‌, ಚಿಫ್ಸ್‌ ಪ್ಯಾಕೇಟ್ಸ್‌ ಮತ್ತು ಬಟ್ಟೆಗಳು ಸೇರಿದಂತೆ ಕೆರೆಯ ಆವರಣದ ಸುತ್ತಲೂ ಬೆಳೆದು ನಿಂತ ಪಾರ್ಥೆನಿಯಂ ಸಸಿಗಳನ್ನು ತೆಗೆದು ಸಾಗಿಸಿದರು. ಕೆರೆಯ ಸುತ್ತಲೂ ಇರುವ ವಾಕಿಂಗ್‌ ಪಾಥ್‌ನ ಸುತ್ತಲೂ ಎಸೆಯಲಾಗಿದ್ದ ಗುಟಕಾ ಪ್ಯಾಕೇಟ್ಸ್‌ ಸೇರಿದಂತೆ ಇನ್ನಿತರ ತ್ಯಾಜ್ಯಗಳನ್ನು ಸಂಗ್ರಹಿಸಲಾಯಿತು. ಸುಮಾರು 8ಕ್ಕೂ ಅಧಿಕ ದೊಡ್ಡ ಚೀಲಗಳಲ್ಲಿ ತ್ಯಾಜ್ಯ ಸಂಗ್ರಹಿಸಿ ನಂತರ ಪುರಸಭೆಗೆ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಕರವೇ ತಾಲೂಕಾಧ್ಯಕ್ಷ ಬಸವರಾಜ್‌ ಬೆಂಡಿಗೇರಿಮಠ, ವಿನೋದ ದೊಡಮನಿ, ಸುಧಾಕರ ಕುಂಬಾರ, ಮಹೇಶ ಆನೇಗುಂದಿ, ನಾಗೇಶ ಹೆಗಡೆ, ಶ್ರೀಶೈಲ್‌ ಮಠದೇವರು, ವಿಜಯ ಪಡ್ನೀಸ್‌, ಸುರೇಶ ಕೋಕಿತ್ಕರ, ರಾಮಾ ಮತ್ತು ಯೋಗರಾಜ್‌ ಕರಾಂಡೆ ಶ್ರಮದಾನದಲ್ಲಿ ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ