ಆ್ಯಪ್ನಗರ

ಸ್ವಚ್ಛತಾ ಅಭಿತಯಾನ:ನಾನಾ ಸಂಘಟನೆ ಭಾಗಿ

ಹಳಿಯಾಳ : ಸ್ವಚ್ಛತಾ ಅಭಿಯಾನದ ಅಂಗವಾಗಿ ಪಟ್ಟಣದ ವಿವಿಧ ಕಡೆಗಳಲ್ಲಿ ತಹಸೀಲ್ದಾರ ವಿದ್ಯಾಧರ ಗುಳಗುಳಿ ಅವರ ನೇತೃತ್ವದಲ್ಲಿ ಸ್ವಚ್ಛತಾ ಕಾರ್ಯವು ಮುಂದುವರೆದಿದ್ದು, ಇಲ್ಲಿಯ ವಿವಿಧ ಸಮಾಜ ಸೇವಾ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿ ಶ್ರಮದಾನವನ್ನು ಯಶಸ್ವಿಗೊಳಿಸುತ್ತಿದ್ದಾರೆ.

Vijaya Karnataka 10 Jun 2019, 5:00 am
ಹಳಿಯಾಳ : ಸ್ವಚ್ಛತಾ ಅಭಿಯಾನದ ಅಂಗವಾಗಿ ಪಟ್ಟಣದ ವಿವಿಧ ಕಡೆಗಳಲ್ಲಿ ತಹಸೀಲ್ದಾರ ವಿದ್ಯಾಧರ ಗುಳಗುಳಿ ಅವರ ನೇತೃತ್ವದಲ್ಲಿ ಸ್ವಚ್ಛತಾ ಕಾರ್ಯವು ಮುಂದುವರೆದಿದ್ದು, ಇಲ್ಲಿಯ ವಿವಿಧ ಸಮಾಜ ಸೇವಾ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿ ಶ್ರಮದಾನವನ್ನು ಯಶಸ್ವಿಗೊಳಿಸುತ್ತಿದ್ದಾರೆ.
Vijaya Karnataka Web KWR-09 HLY 2


ಈಗಾಗಲೇ ಬಸ್‌ಸ್ಟ್ಯಾಂಡ್‌ ಸುತ್ತಮುತ್ತಲಿನ ಪ್ರದೇಶ, ಚರಂಡಿ ಹಾಗೂ ಅಲ್ಲಿ ಸಂಗ್ರಹವಾಗಿದ್ದ ಕಸ ಕಡ್ಡಿ ಸೇರಿದಂತೆ ಇನ್ನಿತರ ತ್ಯಾಜ್ಯಗಳನ್ನು ತೆಗೆಯಲಾಗಿದ್ದು, ಬಸ್‌ ನಿಲ್ದಾಣದ ಗೋಡೆಗಳ ಮೇಲೆ ಅಂಟಿಸಿದ್ದ ಭಿತ್ತಿಪತ್ರ ಮತ್ತು ಇನ್ನಿತರ ಗೋಡೆ ಬರಹಗಳನ್ನು ತೆಗೆದು ಸ್ವಚ್ಛಗೊಳಿಸಲಾಯಿತು. ಇದರ ಜತೆಗೆ ಅತ್ಯಂತ ಹೀನಾಯ ಸ್ಥಿತಿಯಲ್ಲಿದ್ದ ಗುಡ್ನಾಪೂರ ಕೆರೆಯ ಪ್ರದೇಶದಲ್ಲಿ ಶ್ರಮದಾನ ಮೂಲಕ ಅಲ್ಲಿ ಸಂಗ್ರಹವಾಗಿದ್ದ ಮದ್ಯದ ಬಾಟಲ್‌ಗಳು, ಪೂಜಾ ಸಾಮಗ್ರಿಗಳು, ಹಳೆಯ ಬಟ್ಟೆ, ಚಪ್ಪಲಿ, ಪ್ಲಾಸ್ಟಿಕ್‌ ತ್ಯಾಜ್ಯ, ನೀರಿನ ಪೆಟ್‌ ಬಾಟಲ್‌ಗಳು ಸೇರಿದಂತೆ ಇನ್ನಿತರ ವಸ್ತುಗಳನ್ನು ಸಂಗ್ರಹಿಸಿ ಪುರಸಭೆಯ ವಾಹನದ ಮೂಲಕ ಸಾಗಿಸಲಾಯಿತು.

ಶ್ರಮದಾನದಲ್ಲಿ ಹಿರಿಯ ನಾಗರಿಕರಾದ ಜಿ.ಡಿ.ಗಂಗಾಧರ, ಡಿ.ಎಂ.ಸಾವಂತ, ಎಸ್‌.ಜಿ.ಕಡೇಮನಿ, ಅಶೋಕ ಕಣಿಮೆಹಳ್ಳಿ, ಎಂ.ಆರ್‌.ದೇಶಪಾಂಡೆ, ನುಚ್ಚಿ, ಹಂದ್ರಾಳ, ಶಿವಾನಂದ ಶೆಟ್ಟಿ, ಆರ್‌.ಎನ್‌.ಪಾಟೀಲ್‌, ಮಲ್ಲಪ್ಪಾ ಸವಟಗಿ, ಕೆ.ಬಿ.ಹುಬ್ಬಳ್ಳಿ, ಗಾಣಿಗೇರ, ಎಂ.ಡಿ.ಬಿರ್ಜೆ, ಕಮಲ್‌ ಸೀಕ್ವರಾ, ಕರವೇಯ ಬಸವರಾಜ ಬೆಂಡಿಗೇರಿಮಠ, ಲಯನ್‌ ಮಹಾಂತೇಶ ಹಿರೇಮಠ, ಜೀಜಾಮಾತಾ ಸಂಘದ ಮಂಗಲಾ ಕಶೀಲ್ಕರ, ಸುನಂದಾ ಬಿರ್ಜೆ, ಸೀಮಾ ಮಿರಾಶಿ, ಶಾಂತಾ ಕೆನ್ನೂರಕರ, ಅಂಜಲಿ ಹೈಬತ್ತಿ, ಪುರಸಭೆ ಸದಸ್ಯರಾದ ಶಾಂತಾ ಹಿರೇಕರ, ಶಮೀಮ್‌ಬಾನು ಜಂಬೂವಾಲೆ, ಪುರಸಭೆಯ ಅಭಿಯಂತರ ಹರೀಶ್‌ ಗೌಡಾ, ನೈರ್ಮಲ್ಯಾಧಿಕಾರಿ ಪರಶುರಾಮ ಶಿಂಧೆ, ಸಂಜಯ ಮುಳೆ, ವಿಶ್ರಾತವ್ವ ಮಾದರ, ಸತ್ಯಜಿತ ಗಿರಿ, ಶಿರಸ್ತೇದಾರ ಅನಂತ ಚಿಪ್ಪಲಗಟ್ಟಿ, ಸೇರಿದಂತೆ ಐವತ್ತುಕ್ಕೂ ಅಧಿಕ ಜನರು ಭಾಗವಹಿಸಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ