ಆ್ಯಪ್ನಗರ

ಖಾಜಿಗಲ್ಲಿ ಬಾರ್‌ ಬಂದ್‌ ಮಾಡಿ

ಶಿರಸಿ : ನಗರದ ಖಾಜಿಗಲ್ಲಿಯಲ್ಲಿ ನೂತನವಾಗಿ ತೆರೆಯಲಾಗಿರುವ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ನಿಂದ ಸುತ್ತಮುತ್ತಲ ನಿವಾಸಿಗಳಿಗೆ ತೊಂದರೆಯಾಗುತ್ತಿದ್ದು ಸಂಬಂಧಿಸಿದ ಅಧಿಕಾರಿಗಳು ಶೀಘ್ರ ಕ್ರಮ ಕೈಗೊಂಡು ಜನರಿಗೆ ನ್ಯಾಯ ಒದಗಿಸಬೇಕು ಎಂದು ನಗರಸಭಾ ಸದಸ್ಯ ದಯಾನಂದ ಗೋಪಾಲಕೃಷ್ಣ ನಾಯ್ಕ ಒತ್ತಾಯಿಸಿದ್ದಾರೆ.

Vijaya Karnataka 14 Apr 2019, 5:00 am
ಶಿರಸಿ : ನಗರದ ಖಾಜಿಗಲ್ಲಿಯಲ್ಲಿ ನೂತನವಾಗಿ ತೆರೆಯಲಾಗಿರುವ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ನಿಂದ ಸುತ್ತಮುತ್ತಲ ನಿವಾಸಿಗಳಿಗೆ ತೊಂದರೆಯಾಗುತ್ತಿದ್ದು ಸಂಬಂಧಿಸಿದ ಅಧಿಕಾರಿಗಳು ಶೀಘ್ರ ಕ್ರಮ ಕೈಗೊಂಡು ಜನರಿಗೆ ನ್ಯಾಯ ಒದಗಿಸಬೇಕು ಎಂದು ನಗರಸಭಾ ಸದಸ್ಯ ದಯಾನಂದ ಗೋಪಾಲಕೃಷ್ಣ ನಾಯ್ಕ ಒತ್ತಾಯಿಸಿದ್ದಾರೆ.
Vijaya Karnataka Web close the bar in khajji
ಖಾಜಿಗಲ್ಲಿ ಬಾರ್‌ ಬಂದ್‌ ಮಾಡಿ


ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಜನತೆಯ ವಿರೋಧದ ನಡುವೆಯೂ ಬಾರ್‌ ತೆರೆದ ಕುರಿತಾಗಿ ಜಿಲ್ಲಾಧಿಕಾರಿಗಳು ಹಾಗೂ ಸ್ಥಳಿಯ ಸಹಾಯಕ ಆಯುಕ್ತರಲ್ಲಿ ಮನವಿ ಮಾಡಲಾಗಿತ್ತು. ಆದರೆ ಬಾರ್‌ ಬಂದ್‌ ಮಾಡಲು ಅಗತ್ಯ ಕ್ರಮವಾಗಿಲ್ಲ. ಖಾಜಿಗಲ್ಲಿ ಸಮೀಪದಲ್ಲೆ ಮಾರಿಕಾಂಬಾ ನಗರ, ವೀರಭದ್ರಗಲ್ಲಿ, ಹಾಲೊಂಡ ಸೇರಿದಂತೆ ಸುಮಾರು ನೂರೈವತ್ತಕ್ಕೂ ಅಧಿಕ ಕುಟುಂಬಗಳು ಜೀವನ ನಡೆಸುತ್ತಿವೆ. ಜನವಸತಿಯ ಮಧ್ಯವೆ ಬಾರ್‌ ತೆರೆದಿರುವದರಿಂದ ತೀವ್ರ ತೊಂದರೆ ಉಂಟಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಮೀಪದ ಮಾರಿಕಾಂಬಾ ದೇವಾಲಯದ ಹಾಗೂ ಸುಬ್ರಹ್ಮಣ್ಯ ದೇವಸ್ಥಾನದ ಉತ್ಸವ ಮೂರ್ತಿಯನ್ನು ಹೊತ್ತ ಪಲ್ಲಕ್ಕಿ ಸಾಗುವ ದಾರಿ ಇದಾಗಿದೆ. ಅಂಗನವಾಡಿ ಕೇಂದ್ರವೂ ಹತ್ತಿರದಲ್ಲೆ ಇದೆ. ಇಲ್ಲಿಯ ನಿವಾಸಿಗಳು ಕುಡುಕರ ಹಾವಳಿ ತಾಳಲಾರದೆ ಬೇರೆಡೆಯಲ್ಲಿ ಬಾಡಿಗೆ ಮನೆ ಮಾಡುವ ನಿರ್ಧಾರ ಕೈಗೊಂಡಿದ್ದಾರೆ. ಆ ನಿಟ್ಟಿನಲ್ಲಿ ಜನರ ಅನುಕೂಲಕ್ಕಾಗಿ ಬಾರ್‌ ಬಂದ್‌ ಮಾಡಲು ಅಧಿಕಾರಿಗಳು ಕೂಡಲೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ವೆಂಕಟೇಶ ಶಾನಭಾಗ, ನಜೀರ್‌ ಅಹ್ಮದ್‌ ಶೇಖ್‌, ನಿಸಾರ್‌ ಅಹ್ಮದ್‌, ರಾಜೇಶ ಶಿರ್ಸಿಕರ್‌, ಇಮ್ತಿಯಾಜ್‌, ವಿನಯಾ ಆರ್‌.ಸಿ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ