ಆ್ಯಪ್ನಗರ

ಮುಚ್ಚುತ್ತಿರುವ ಕಾಳಜಿ ಕೇಂದ್ರಗಳು

ಹಳಿಯಾಳ : ಮಳೆಯ ಪ್ರಮಾಣ ಮತ್ತು ಪ್ರವಾಹವು ಕಡಿಮೆಯಾಗುತ್ತಲೇ ಹಂತ ಹಂತವಾಗಿ ಕಾಳಜಿ ಕೇಂದ್ರಗಳನ್ನು ಬಂದ್‌ ಮಾಡಿ ನಿರಾಶ್ರಿತರಿಗೆ ಪರ್ಯಾಯ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ತಾಲೂಕಿನ ಕೆಸರೊಳ್ಳಿ, ಕರ್ಲಕಟ್ಟಾ, ಕೆಕೆ ಹಳ್ಳಿ, ನೀರಲಗಾ, ಅರ್ಲವಾಡ, ಭಾಗವತಿ ಪ್ರಾಥಮಿಕ ಶಾಲೆ, ಅಂಬಿಕಾನಗರ, ಹುನ್ಸವಾಡ, ಭಾಗವತಿ ಪ್ರೌಢ ಶಾಲೆ ಮತ್ತು ದಾಂಡೇಲಿಗಳಲ್ಲಿ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿತ್ತು.

Vijaya Karnataka 12 Aug 2019, 5:00 am
ಹಳಿಯಾಳ : ಮಳೆಯ ಪ್ರಮಾಣ ಮತ್ತು ಪ್ರವಾಹವು ಕಡಿಮೆಯಾಗುತ್ತಲೇ ಹಂತ ಹಂತವಾಗಿ ಕಾಳಜಿ ಕೇಂದ್ರಗಳನ್ನು ಬಂದ್‌ ಮಾಡಿ ನಿರಾಶ್ರಿತರಿಗೆ ಪರ್ಯಾಯ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ತಾಲೂಕಿನ ಕೆಸರೊಳ್ಳಿ, ಕರ್ಲಕಟ್ಟಾ, ಕೆಕೆ ಹಳ್ಳಿ, ನೀರಲಗಾ, ಅರ್ಲವಾಡ, ಭಾಗವತಿ ಪ್ರಾಥಮಿಕ ಶಾಲೆ, ಅಂಬಿಕಾನಗರ, ಹುನ್ಸವಾಡ, ಭಾಗವತಿ ಪ್ರೌಢ ಶಾಲೆ ಮತ್ತು ದಾಂಡೇಲಿಗಳಲ್ಲಿ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿತ್ತು.
Vijaya Karnataka Web closing care centers
ಮುಚ್ಚುತ್ತಿರುವ ಕಾಳಜಿ ಕೇಂದ್ರಗಳು


ಭಾನುವಾರ ಸಾಯಂಕಾಲ ಪಟ್ಟಣದ ಅಂಚಿನಲ್ಲಿರುವ ಸುಮಾರು 40 ಕುಟುಂಬದ ಸದಸ್ಯರು ಆಶ್ರಯ ಪಡೆದಿದ್ದ ಕೆಸರೊಳ್ಳಿ ಕಾಳಜಿ ಕೇಂದ್ರವನ್ನು ಬಂದ್‌ ಮಾಡಿ ತಾಲೂಕಿನ ಎಲ್ಲ ಕಾಳಜಿ ಕೇಂದ್ರಗಳನ್ನು ಮುಚ್ಚಲಾಯಿತು. ಒಂದು ವಾರ 5 ಸಾವಿರಕ್ಕೂ ಅಧಿಕ ಜನರು ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದರು.

ಆಸ್ತಿ ಹಾನಿ ಸಮೀಕ್ಷೆ ಶುರು : ಹೊಲ ಗದ್ದೆಗಳಿಗೆ ಮತ್ತು ಮನೆಗಳಿಗೆ ನೀರು ನುಗ್ಗಿದ್ದರಿಂದ ಕೋಟ್ಯಂತರ ರೂ. ಹಾನಿಯನ್ನು ಅಂದಾಜಿಸಲಾಗಿತ್ತು. ಭಾನುವಾರ ಬೆಳೆ ಸೇರಿದಂತೆ ಮನೆಗಳನ್ನು ಕಳೆದುಕೊಂಡ ಸ್ಥಳಗಳಿಗೆ ಕಂದಾಯ ಇಲಾಖೆಯ ಸಿಬ್ಬಂದಿ ಧಾವಿಸಿ ಸಮೀಕ್ಷೆ ನಡೆಸಿ, ಮೂಲ ಸೌಕರ್ಯಗಳ ಕುರಿತು ನಿರಾಶ್ರಿತರ ಜತೆಗೆ ಸಂವಾದ ನಡೆಸಿ, ಅಪಾಯದಲ್ಲಿರುವ ಮತ್ತು ತಗ್ಗು ಪ್ರದೇಶಗಳನ್ನು ಬಿಟ್ಟು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಮನವಿ ಮಾಡಿದರು.

ಬಿದ್ದ ಮನೆಗಳಿಗೆ ತೆರಳಿದ ಸಂತ್ತಸ್ತರು : ಮನೆಗಳನ್ನು ಕಳೆದುಕೊಂಡು ಭಾರವಾದ ಮನಸ್ಸು ಮತ್ತು ಅನಾಥ ಪ್ರಜ್ಞೆಯಿಂದ ಬೇರೆ ಕಡೆಗಳಲ್ಲಿ ನೆಲೆಸಿದ್ದ ಸಂತ್ರಸ್ತರು ಮಳೆ ನಿಂತಿದ್ದರಿಂದ ಭಾನುವಾರ ತಮ್ಮ ಮುರಿದು ಬಿದ್ದ ಮನೆಗಳಿಗೆ ತೆರಳಿದರು. ಮನೆಗಳ ಸ್ಥಿತಿಗತಿ ನೋಡಿ ಕಣ್ಣೀರು ಹಾಕಿದರು. ಮನೆಗಳನ್ನು ಸ್ವಚ್ಚಗೊಳಿಸುವ ಹಾಗೂ ಅವಶೇಷಗಳ ಅಡಿಯಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಕೆಲವು ಸರಕು ಸರಂಜಾಮುಗಳನ್ನು ತೆಗೆದು ಸಂಗ್ರಹಿಸಿದರು. ಮುಂದಿನ ದಿನಗಳಲ್ಲಿ ಸರಕಾರದ ಧನಸಹಾಯದಿಂದ ಮನೆಗಳನ್ನು ಕಟ್ಟಿಕೊಂಡರಾಯಿತು ಎಂದು ವಿಚಾರ ಮಾಡಿ ನಿಟ್ಟುಸಿರು ಬಿಟ್ಟರು.

ರವಿವಾರದ ಸಂತೆಗೆ ಬಂದು ಜನರು : ಎರಡು ವಾರಗಳಿಂದ ವಿಪರೀತ ಮಳೆಯ ಕಾರಣ ಮಳೆಯಲ್ಲಿ ಸಂತೆ ನಡೆಸುವಂತಾಗಿತ್ತು. ಅಲ್ಲದೇ ಹಳಿಯಾಳ ಪಟ್ಟಣವನ್ನು ಸಂಪರ್ಕಿಸುವ ಸೇತುವೆಗಳು ಒಡೆದು ಹೋಗಿದ್ದರಿಂದ ಬೇರೆ ಭಾಗಗಳಿಂದ ಸಂತೆಯ ವ್ಯಾಪಾರಕ್ಕೆ ಆಗಮಿಸುತ್ತಿದ್ದ ಜನರು ಬರದೇ ಹಾಗೂ ಧಾರಾಕಾರ ಮಳೆಗೆ ಸಿಕ್ಕು ನಲುಗಿದ ಜನರು ಮನೆ ಬಿಟ್ಟು ಹೊರಗೆ ಬಾರದ ಪರಿಸ್ಥಿತಿ ನಿರ್ಮಾಣವಾಗಿದ್ದರಿಂದ ರವಿವಾರದ ಸಂತೆಗಳು ಸಪ್ಪೆಯಾಗಿದ್ದವು. ಆದರೆ ಈ ವಾರದ ಸಂತೆಗೆ ಮಳೆರಾಯ ಬಿಡುವು ನೀಡಿದ್ದರಿಂದ ಜನರು ಕುಟುಂಬದ ಸದಸ್ಯರೊಂದಿಗೆ ಸಂತೆಗೆ ಆಗಮಿಸಿ ವ್ಯಾಪಾರ ಮಾಡಿದ್ದು ಕಂಡು ಬಂದಿತು. ಒಂದು ವಾರದಿಂದ ದೊಡ್ಡ ಪ್ರಮಾಣದಲ್ಲಿ ಸುರಿದ ವರುಣ ರವಿವಾರ ರಜೆ ಘೋಷಿಸಿದ್ದರಿಂದ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ