ಆ್ಯಪ್ನಗರ

ಸಿಎಂ ಸ್ಪಂದನೆ, ಜಾವಲಿನ್‌ ಸಾಧಕನಲ್ಲಿ ಆಶಾಭಾವ

ಶಿರಸಿ : ರಾಷ್ಟ್ರೀಯ ಪ್ಯಾರಾ ಅಥ್ಲೇಟಿಕ್‌ನ ಚಾವಲಿನ್‌ ಸ್ಪರ್ಧೆಯಲ್ಲಿ ಕಂಚಿನ ಪದಕ ಪಡೆದು ಸಾಧನೆ ಮಾಡಿದ್ದ ಇಲ್ಲಿಯ ಕ್ರೀಡಾಪಟುವೊಬ್ಬರಿಗೆ ಸಿಗಬೇಕಿದ್ದ ಬಹುಮಾನ ಮೊತ್ತ ಕಳೆದ ಎರಡು ವರ್ಷವಾದರೂ ಕೈಗೆ ಸೇರಲಿಲ್ಲ. ಆದರೆ ಈ ಬಗ್ಗೆ ಮುಖ್ಯಮಂತ್ರಿಗೆ ಪಾಲಕರು ಮೊರೆಯಿಟ್ಟ ಪರಿಣಾಮ ಅವರಿಂದ ಸಕಾರಾತ್ಮಕ ಸ್ಪಂದನೆ ದೊರೆತಿದೆ. ಇದರಿಂದ ಕ್ರೀಡಾಪಟುವಿಗೆ ಬಹುಮಾನ ಮೊತ್ತ ಸಿಗಬಹುದೆಂಬ ಭರವಸೆ ಚಿಗುರೊಡೆದಿದೆ.

Vijaya Karnataka 18 Dec 2018, 5:00 am
ಶಿರಸಿ : ರಾಷ್ಟ್ರೀಯ ಪ್ಯಾರಾ ಅಥ್ಲೇಟಿಕ್‌ನ ಚಾವಲಿನ್‌ ಸ್ಪರ್ಧೆಯಲ್ಲಿ ಕಂಚಿನ ಪದಕ ಪಡೆದು ಸಾಧನೆ ಮಾಡಿದ್ದ ಇಲ್ಲಿಯ ಕ್ರೀಡಾಪಟುವೊಬ್ಬರಿಗೆ ಸಿಗಬೇಕಿದ್ದ ಬಹುಮಾನ ಮೊತ್ತ ಕಳೆದ ಎರಡು ವರ್ಷವಾದರೂ ಕೈಗೆ ಸೇರಲಿಲ್ಲ. ಆದರೆ ಈ ಬಗ್ಗೆ ಮುಖ್ಯಮಂತ್ರಿಗೆ ಪಾಲಕರು ಮೊರೆಯಿಟ್ಟ ಪರಿಣಾಮ ಅವರಿಂದ ಸಕಾರಾತ್ಮಕ ಸ್ಪಂದನೆ ದೊರೆತಿದೆ. ಇದರಿಂದ ಕ್ರೀಡಾಪಟುವಿಗೆ ಬಹುಮಾನ ಮೊತ್ತ ಸಿಗಬಹುದೆಂಬ ಭರವಸೆ ಚಿಗುರೊಡೆದಿದೆ.
Vijaya Karnataka Web SRS-17SIRSI3B


ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವ ಪ್ರತಾಪ ಪರಮಾನಂದ ಹೆಗಡೆ ರಾಷ್ಟ್ರಮಟ್ಟದ ಜಾವಲಿನ್‌ನಲ್ಲಿ ಸಾಧನೆ ಮಾಡಿದ ಕ್ರೀಡಾಪಟು. ಎರಡು ಬಾರಿ ಕಂಚಿನ ಪದಕ ಗಿಟ್ಟಿಸಿರುವ ಕ್ರೀಡಾಪಟುವಿಗೆ ಬರಬೇಕಾದ ಬಹುಮಾನ ಮೊತ್ತ ಇನ್ನೂ ಕೈ ಸೇರದ ಬಗ್ಗೆ ಪಾಲಕರು ಮುಖ್ಯಮಂತ್ರಿಗೆ ಕಳೆದ ಕೆಲ ತಿಂಗಳ ಹಿಂದೆ ಪತ್ರ ಬರೆದಿದ್ದರು. ಕ್ರೀಡಾಪಟುವಿನ ತಂದೆ ಪರಮಾನಂದ ಹೆಗಡೆ ಅವರಿಗೆ ಮುಖ್ಯಮಂತ್ರಿ ಸಚಿವಾಲಯದಿಂದ ಈ ಬಗ್ಗೆ ಸ್ಪಂದನೆ ಉತ್ತರ ಬಂದಿದೆ. ರಾಜ್ಯ ಯುವನಿಕ ಕೇಂದ್ರದ ಯುವಜನಸೇವೆ ಹಾಗೂ ಕ್ರೀಡಾ ಇಲಾಖೆ ನಿರ್ದೇಶಕರಿಗೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸಿಎಂ ಸೂಚಿಸಿರುವ ಬಗ್ಗೆ ಮುಖ್ಯಮಂತ್ರಿಯವರ ಉಪಕಾರ್ಯದರ್ಶಿ ಪಾಲಕರಿಗೆ ಮಾಹಿತಿ ಕಳಿಸಿದ್ದಾರೆ. ಇದು ಸಹಜವಾಗಿ ಕ್ರೀಡಾಪಟು ಹಾಗೂ ಅವರ ಪಾಲಕರಲ್ಲಿ ಆಶಾಭಾವ ಮೂಡಿಸಿದೆ.

ಸಾಮಾನ್ಯವಾಗಿ ಯಾವುದೇ ಕ್ರೀಡೆಯಲ್ಲಿ ಗೆದ್ದ ತಕ್ಷ ಣ ಬಹುಮಾನದ ಮೊತ್ತ ನೀಡುವುದು ಸಾಧಕನಿಗೆ ನೀಡುವ ಪ್ರೋತ್ಸಾಹ. ಆದರೆ 2017ರಲ್ಲಿ 17ನೇ ನ್ಯಾಷನಲ್‌ ಪ್ಯಾರಾ ಅಥ್ಲೆಟಿಕ್ಸ್‌ನ ಚಾವಲಿನ್‌ ಸ್ಪರ್ಧೆಯಲ್ಲಿ ಕಂಚಿನ ಪದಕ ಗಿಟ್ಟಿಸಿದ್ದ ಪ್ರತಾಪ ಹೆಗಡೆ, 2018ರಲ್ಲಿ ಇದೇ ಕ್ರೀಡಾಕೂಟದಲ್ಲಿ ಮತ್ತೊಮ್ಮೆ ಕಂಚಿನ ಪದಕ ತನ್ನದಾಗಿಸಿಕೊಂಡಿದ್ದರು. ಆದರೆ ಈ ಸಾಧನೆಗೆ ಬಹುಮಾನದ ಮೊತ್ತವಾಗಿ ತಲಾ 50ಸಾವಿರ ರೂ.ನಂತೆ ಎರಡೂ ಕ್ರೀಡಾಕೂಟದ ಸಾಧನೆಗೆ ಒಟ್ಟು 1ಲಕ್ಷ ರೂ. ಕ್ರೀಡಾಪಟುವಿಗೆ ಬಹುಮಾನವಾಗಿ ಬರಬೇಕಿತ್ತು. ಅದನ್ನು ರಾಜ್ಯ ಸರಕಾರ ನೀಡಬೇಕಿತ್ತು. ಇದೀಗ ಮೊದಲ ಹಂತದ ಸ್ಪಂದನೆ ದೊರಕಿದೆ. ಮುಂದೆ ಅವರ ಸೂಚನೆಯಂತೆ ಸಂಬಂಧಿಸಿದ ಇಲಾಖೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುತ್ತದೆಯೇ ಎಂಬುದು ಮುಖ್ಯವಾಗಿದೆ.

ವಿಕಲತೆ ನಡುವೆ ಸಾಧನೆ...

ಹುಟ್ಟಿನಿಂದಲೇ ಎಡಗೈ ವೈಕಲ್ಯ ಹೊಂದಿರುವ ಪ್ರತಾಪ ಹೆಗಡೆ ಸಾಧನೆಗೆ ಮಾತ್ರ ಇದು ಅಡ್ಡಿಯಾಗಿಲ್ಲ ಎಂಬುದು ಗಮನಾರ್ಹ ಸಂಗತಿ. ಚಿಕ್ಕಂದಿನಿಂದಲೇ ಕ್ರೀಡೆಯ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದ ಇವರು ಉನ್ನತ ಶಿಕ್ಷ ಣ ಪಡೆದ ನಂತರ ರಾಷ್ಟ್ರಮಟ್ಟದಲ್ಲೂ ತಮ್ಮ ಕ್ರೀಡಾ ಪ್ರತಾಪ ತೋರಿದ್ದು ವಿಶೇಷ.

ಅಂತಾರಾಷ್ಟ್ರೀಯ ಸಾಧನೆ ಮಾಡಲು...

ರಾಷ್ಟ್ರಮಟ್ಟದ ಸಾಧನೆ ಮಾಡಿರುವ ಪ್ರತಾಪ ಹೆಗಡೆ 53.62ಮೀಟರ್‌ ದೂರ ಜಾವಲಿನ್‌ ಎಸೆದು ತಮ್ಮ ಸಾಮರ್ಥ್ಯ‌ ತೋರಿದವರು. ವಿಶ್ವ ರಾರ‍ಯಂಕಿಂಗ್‌ ಪಟ್ಟಿಯಲ್ಲಿ ಅವರು ಎಂಟನೇಯ ಸ್ಥಾನದಲ್ಲಿ ನಿಲ್ಲುವುದರಿಂದ ಅವರಿಗೆ ಅಂತಾರಾಷ್ಟ್ರೀಯ ಮಟ್ಟದ ಸ್ಪಧೆಯಲ್ಲಿ ಭಾಗವಹಿಸುವುದಕ್ಕೆ ಅವಕಾಶ ಸಿಗುವ ಸಾಧ್ಯತೆಯಿದೆ. ದುಬೈನಲ್ಲಿ ನಡೆಯುವ ಕ್ರೀಡಾಕೂಟದಲ್ಲಿ ಭಾಗವಹಿಸುವ ಬಯಕೆ ಹೊಂದಿದ್ದಾರೆ. ಆದರೆ ಸಿಗಬೇಕಾದ ಹಿಂದಿನ ಬಹುಮಾನದ ಮೊತ್ತ ದೊರೆತರೆ ಅನುಕೂಲವಾಗುತ್ತದೆ ಎನ್ನುತ್ತಾರೆ ಕ್ರೀಡಾಪಟುವಿನ ತಂದೆ ಪರಮಾನಂದ ಹೆಗಡೆ.

ಪ್ಯಾರಾ ವಾಲಿಬಾಲ್‌ನಲ್ಲೂ ಸಾಧಕ..

ಸಾಧಕ ಕ್ರೀಡಾಪಟು ಕೇವಲ ಜಾವಲಿನ್‌ನಲ್ಲಿ ಮಾತ್ರ ಸಾಧನೆ ಮಾಡಿಲ್ಲ. ಅದರ ಜತೆಯಲ್ಲಿ ಕಳೆದ ವರ್ಷ ರಾಷ್ಟ್ರಮಟ್ಟದ ಪಿ.ವಿ.ಎಫ್‌.ಐ ಫೆಡರೇಶನ್‌ ಕಪ್‌ ಸಿಟ್ಟಿಂಗ್‌ ಪ್ಯಾರಾ ವಾಲಿಬಾಲ್‌ನಲ್ಲಿ ಎರಡನೇಯ ಬಹುಮಾನ ಗಳಿಸಿದ್ದರು. ಹಾಗೇ ಕೆಲ ತಿಂಗಳ ಹಿಂದೆ ಉಡುಪಿಯ ಮಲ್ಪೆ ಕಡಲತಡಿಯಲ್ಲಿ ನಡೆದ ದೇಶದ ಮೊದಲ ಸ್ಟ್ಯಾಂಡಿಂಗ್‌ ವಾಲಿಬಾಲ್‌ ಸೀನಿಯರ್‌ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ರನ್ನರ್‌ಅಪ್‌ ಆಗಿ ಹೊರಹೊಮ್ಮಿದ್ದರು. ಇದಕ್ಕೆ ಸಂಬಂಧಿಸಿದ ಬಹುಮಾನದ ಮೊತ್ತವೂ ಸಹ ಕ್ರೀಡಾಪಟುವಿಗೆ ಬರಬೇಕಿದೆ ಎನ್ನುತ್ತಾರೆ ಪಾಲಕರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ