ಆ್ಯಪ್ನಗರ

ಭರದಿಂದ ನಡೆದ ಕೋಡಿ ಕಡಿವ ಕಾರ‍್ಯ

ಅಂಕೋಲಾ : ಸಂಗ್ರಹಗೊಂಡ ನೀರನ್ನು ಸಮುದ್ರಕ್ಕೆ ಹರಿ ಬಿಡುವ ವಿಶಿಷ್ಟ ಕಾರ್ಯ ಭಾನುವಾರ ಇಲ್ಲಿಯ ನದಿಭಾಗದ ಸಂಗಮ ತೀರದಲ್ಲಿ ನಡೆಯಿತು. ಈ ಕಾರ್ಯದಲ್ಲಿ ಸಂಭ್ರಮ, ಆತಂಕ, ನೆಮ್ಮದಿ ಎಲ್ಲವೂ ಇತ್ತು. ಸುತ್ತಮುತ್ತಲಿನ ಎಂಟು ಗ್ರಾಮಗಳು ಜಲಾವೃತವಾಗುವುದನ್ನು ತಪ್ಪಿಸಲು ಕೋಡಿ ಕಡಿಯುವ ಕೆಲಸ ಭಾನುವಾರ ನಡೆಯಿತು.

Vijaya Karnataka 24 Jun 2019, 5:00 am
ಅಂಕೋಲಾ : ಸಂಗ್ರಹಗೊಂಡ ನೀರನ್ನು ಸಮುದ್ರಕ್ಕೆ ಹರಿ ಬಿಡುವ ವಿಶಿಷ್ಟ ಕಾರ್ಯ ಭಾನುವಾರ ಇಲ್ಲಿಯ ನದಿಭಾಗದ ಸಂಗಮ ತೀರದಲ್ಲಿ ನಡೆಯಿತು. ಈ ಕಾರ್ಯದಲ್ಲಿ ಸಂಭ್ರಮ, ಆತಂಕ, ನೆಮ್ಮದಿ ಎಲ್ಲವೂ ಇತ್ತು. ಸುತ್ತಮುತ್ತಲಿನ ಎಂಟು ಗ್ರಾಮಗಳು ಜಲಾವೃತವಾಗುವುದನ್ನು ತಪ್ಪಿಸಲು ಕೋಡಿ ಕಡಿಯುವ ಕೆಲಸ ಭಾನುವಾರ ನಡೆಯಿತು.
Vijaya Karnataka Web codys low key job
ಭರದಿಂದ ನಡೆದ ಕೋಡಿ ಕಡಿವ ಕಾರ‍್ಯ


ಏನಿದು ಕೋಡಿ ಕಡಿಯುವುದು ? : ತಾಲೂಕಿನ ಸಮುದ್ರದಂಚಿನ 7 ಕಿ.ಮೀ. ವ್ಯಾಪ್ತಿಯ ಪೂಜಗೇರಿ, ತೆಂಕಣಕೇರಿ, ನದಿಭಾಗ, ಬೆಳಂಬಾರ, ಲಕ್ಷ್ಮೇಶ್ವರ, ವಂದಿಗೆ, ಖಾರ್ವಿವಾಡಾ ಭಾಗದಲ್ಲಿ ಸಮುದ್ರ ತೀರದ ಪ್ರದೇಶದ ಜನತೆಗೆ ಕೋಡಿ ಕಡಿದ ಮೇಲೆಯೇ ಇಲ್ಲಿ ಕೃಷಿ ಚಟುವಟಿಕೆ ಚಾಲನೆ ಪಡೆಯುತ್ತದೆ. ನದಿಭಾಗದ ಖಾರ್ವಿಕೇರಿಯಲ್ಲಿ ಶನಿವಾರ 40 ಮನೆಗಳು ಜಲಾವೃತಗೊಂಡಿದ್ದವು. ಇಲ್ಲಿ ಶೇಖರಗೊಂಡಿದ್ದ ನೀರನ್ನು ಸಮುದ್ರಕ್ಕೆ ಹರಿ ಬಿಟ್ಟರು.

ಇಲ್ಲಿ ಬಿದ್ದ ಮಳೆ ನೀರು ಹರಿದು ಸಮುದ್ರ ಸೇರಬೇಕು. ಆದರೆ ಘಟ್ಟದ ಮೇಲಿನಿಂದಲೂ ಬರುವ ನೀರು ಇಲ್ಲಿಯ ಮಳೆ ನೀರು ಸೇರಿ ಸಮುದ್ರಕ್ಕೆ ಸಾಗದೇ ಇಲ್ಲೇ ನಿಂತು ಪ್ರದೇಶ ಜಲಾವೃತಗೊಳ್ಳುತ್ತದೆ. ಈ ನೀರನ್ನು ನದಿಭಾಗದ ಮುಖಜ ಪ್ರದೇಶದಿಂದ ಸಮುದ್ರ ಸಂಗಮದಲ್ಲಿ ಮರಳನ್ನು ತೆಗೆದು ನೀರನ್ನು ಬಿಡಲಾಗುತ್ತದೆ. ಇದಕ್ಕೆ ಕೋಡಿ ಕಡಿಯುವುದು ಎನ್ನಲಾಗುತ್ತದೆ. ಒಂದು ವೇಳೆ ಕೋಡಿ ಕಡಿಯದೇ ಹೋದರೆ ಸುತ್ತಲಿನ 8 ಗ್ರಾಮಗಳು ತಮ್ಮ ನೆಲೆಯನ್ನೇ ಕಳೆದುಕೊಳ್ಳುತ್ತವೆ.

ಆತಂಕ ಏಕೆ ? : ಕೋಡಿ ಕಡೆಯುವಾಗ ಒಂದೇ ಸಮನೆ ನಿಂತ ನೀರು ಸಮುದ್ರ ಕಡೆಗೆ ನುಗ್ಗುವುದರಿಂದ ಕಡಿಯುವ ಜನರು ಕೊಚ್ಚಿ ಹೋಗುವ ಸಾಧ್ಯತೆಗಳಿರುತ್ತದೆ. ಇಂತಹುದೇ ಸಂದರ್ಭದಲ್ಲಿನ 26 ವರ್ಷದ ಹಿಂದೆ ಇಬ್ಬರು ಸಮುದ್ರ ಪಾಲಾಗಿದ್ದರು. ಹೀಗಾಗಿ ಸಮುದ್ರ ದೇವನಿಗೆ ಪೂಜಾ ಕಾರ್ಯ, ಬಲಿ ವಿಧಿವಿಧಾನಗಳನ್ನು ಪೂರೈಸಿ ಇಲ್ಲಿ ಕೋಡಿ ಕಡಿಯುವ ಅನುಭವವಿದ್ದವರು ಮಾತ್ರ ಕೋಡಿ ಕಡಿಯುವ ಕಾರ್ಯಕ್ಕೆ ಕೈ ಹಚ್ಚುತ್ತಾರೆ.

ಬೊಬ್ರವಾಡ ಗ್ರಾ.ಪಂ. ಹಾಗೂ ತಾಲೂಕಾಡಳಿತದ ಆಶ್ರಯದಲ್ಲಿ ನದಿಭಾಗದ ನೂರಾರು ನಾಗರಿಕರು ಕೋಡಿ ಕಡಿಯುತ್ತಾರೆ. ಬ್ರಿಟೀಷ ಆಡಳಿತಾವಧಿಯಲ್ಲಿ ಈ ಕೆಲಸಕ್ಕೆ 20 ರೂ. ನೀಡುತ್ತಿದ್ದರಂತೆ. ಆದರೆ ಈಗ ಬೊಬ್ರವಾಡ ಗ್ರಾ.ಪಂ. 10 ಸಾವಿರ ರೂ. ಗೌರವ ಧನ ನೀಡುತ್ತಿದೆ. ಇದನ್ನು 20 ಸಾವಿರ ರೂ.ಗೆ ಏರಿಸಬೇಕೆನ್ನುವುದು ಗ್ರಾಮಸ್ಥರ ಒತ್ತಾಯ.

ಬೊಬ್ರವಾಡದ ಸದಸ್ಯರಾದ ಅರುಣ ಎಸ್‌. ನಾಯ್ಕ, ಚಂದ್ರಕಾಂತ ನಾಯ್ಕ, ಪ್ರಮುಖರಾದ ಶ್ರೀನಿವಾಸ ಎಚ್‌. ನಾಯ್ಕ, ಪಾಮಡುರಂಗ ಡಿ. ನಾಯ್ಕ, ರವಿ ಆನಂದು ನಾಯ್ಕ, ಸದಾನಂದ ಟಿ. ನಾಯ್ಕ, ಸಂದೇಶ ಖಾರ್ವಿ, ವಿನೋದ ನಾಯ್ಕ, ಜಯಂತ ಬಿ. ನಾಐಕ, ಲಿಂಗಪ್ಪ ನಾಯ್ಕ, ಶಿವಾನಂದ ನಾಯ್ಕ, ಅನಿಲ ಖಾರ್ವಿ, ಮಹೇಶ ನಾಯ್ಕ, ರವಿ ಗಣಪತಿ ನಾಐಕ, ದಿನೇಷ ನಾಯ್ಕ, ಸತೀಶ ಆರ್‌. ನಾಯಕ, ಮೋಹನ ನಾಯ್ಕ, ಧನಂಜಯ ಖಾರ್ವಿ, ನಾಗರಾಜ್‌ ಪೀರು ನಾಯ್ಕ ಸೇರಿದಂತೆ ಮೊದಲಾದವರು ಅಲ್ಲಿ ಹಾಜರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ