ಆ್ಯಪ್ನಗರ

ಪೌರಕಾರ್ಮಿಕರಿಗೆ ಕಾಂಪ್ಲೆಕ್ಸ್‌

ಶಿರಸಿ : ಸ್ವಂತ ಮನೆ ಇಲ್ಲದ ಪೌರಕಾರ್ಮಿಕರಿಗೆ ಸಮುಚ್ಛಯ ಮಾದರಿಯ ಸೂರು ಬಹುತೇಕ ಸಿದ್ಧವಾಗಿದೆ. ನಗರದ ಮರಾಠಿಕೊಪ್ಪದಲ್ಲಿಎರಡು ಅಂತಸ್ತಿನ ಕಟ್ಟಡದಲ್ಲಿಆರು ಪೌರಕಾರ್ಮಿಕರಿಗೆ ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.

Vijaya Karnataka 16 Sep 2019, 5:00 am
ಶಿರಸಿ : ಸ್ವಂತ ಮನೆ ಇಲ್ಲದ ಪೌರಕಾರ್ಮಿಕರಿಗೆ ಸಮುಚ್ಛಯ ಮಾದರಿಯ ಸೂರು ಬಹುತೇಕ ಸಿದ್ಧವಾಗಿದೆ. ನಗರದ ಮರಾಠಿಕೊಪ್ಪದಲ್ಲಿಎರಡು ಅಂತಸ್ತಿನ ಕಟ್ಟಡದಲ್ಲಿಆರು ಪೌರಕಾರ್ಮಿಕರಿಗೆ ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.
Vijaya Karnataka Web complex for citizens
ಪೌರಕಾರ್ಮಿಕರಿಗೆ ಕಾಂಪ್ಲೆಕ್ಸ್‌


ಸಾಮಾನ್ಯವಾಗಿ ಶಹರಗಳಲ್ಲಿಹತ್ತಾರು ಮನೆಗಳುಳ್ಳ ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಿಸಲಾಗುತ್ತದೆ. ಹಾಗೇ ನೆಲಮಹಡಿ ಹಾಗೂ ಎರಡು ಅಂತಸ್ತಿನ ಮನೆಗಳ ಸಮುಚ್ಛಯ ನಿರ್ಮಿಸಿ ನಗರದ ಸ್ವಚ್ಛತೆಯಲ್ಲಿತೊಡಗಿರುವ ಪೌರಕಾರ್ಮಿಕರಿಗೂ ಒದಗಿಸಲಾಗುತ್ತಿದೆ. ಗೃಹಭಾಗ್ಯ ಯೋಜನೆಯಡಿ ಪೌರಕಾರ್ಮಿಕರು ಒಂದೇ ಕಟ್ಟಡದಲ್ಲಿಸ್ವಂತ ಮನೆಗಳನ್ನು ಹೊಂದಲಿದ್ದಾರೆ. 45 ಲಕ್ಷ ರೂ. ವೆಚ್ಚದ ಕಾಮಗಾರಿ ಬಹುತೇಕ ಮುಗಿದಿದ್ದು, ಟೈಲ್ಸ್‌ ಅಳವಡಿಕೆ ಹಾಗೂ ಕಟ್ಟಡಕ್ಕೆ ಬಣ್ಣ ಹಚ್ಚುವ ಕೆಲಸ ಬಾಕಿಯಿದೆ.

ಆರೋಗ್ಯಪೂರ್ಣ ಶಹರ ನಿರ್ಮಾಣದಲ್ಲಿಮಹತ್ವದ ಪಾತ್ರ ವಹಿಸುವ ಪೌರಕಾರ್ಮಿಕರು ನಗರದಲ್ಲಿನಿತ್ಯ ಸ್ವಚ್ಛತೆ, ತ್ಯಾಜ್ಯ ವಿಲೇವಾರಿ ಕಾರ್ಯದಲ್ಲಿತೊಡಗಿರುತ್ತಾರೆ. ಶ್ರಮಜೀವಿಗಳಾಗಿ ಕೆಲಸ ಮಾಡುವ ಪೌರಕಾರ್ಮಿಕರಿಗೆ ವಸತಿ ವ್ಯವಸ್ಥೆ ಮಾಡಲಾಗುತ್ತಿದೆ. ನಗರಸಭೆಯ ಕಾಯಂ ಪೌರಕಾರ್ಮಿಕರಲ್ಲಿಆರು ಮಂದಿಗೆ ಸ್ವಂತ ಮನೆ ಹೊಂದುವ ಭಾಗ್ಯ ಬಂದಿದೆ. ಈ ಮೂಲಕ ಹಲವು ವರ್ಷಗಳ ಕನಸು ನನಸಾಗುವ ಕಾಲ ಸನ್ನಿಹಿತವಾಗಿದೆ.

ಹೀಗೆ ಸಮುಚ್ಛಯ ಮಾದರಿಯಲ್ಲಿಮನೆ ನಿರ್ಮಿಸಿರುವುದರಿಂದ ಪೌರಕಾರ್ಮಿಕರು, ಅವರ ಕುಟುಂಬಕ್ಕೆ ಸೌಲಭ್ಯ ಕಲ್ಪಿಸಲು, ತುರ್ತು ಕೆಲಸಗಳು ಬಂದಾಗ ಒಂದೇ ಕಡೆಯಿಂದ ಕರೆ ತರಲು ಅನುಕೂಲವಾಗುತ್ತದೆ. ಎಲ್ಲೆಲ್ಲೋ ಮನೆಗಳಿದ್ದರೆ ಅನಿವಾರ್ಯ ಸಂದರ್ಭದಲ್ಲಿಕರೆತರುವುದು ಸಮಸ್ಯೆಯಾಗುತ್ತದೆ. ಪೊಲೀಸ್‌, ಅರಣ್ಯ ಇಲಾಖೆ ಸಿಬ್ಬಂದಿ ಒಂದೇ ಕಡೆ ನೆಲೆಸಲು ಇರುವ ವಸತಿಗೃಹಗಳಂತೆ ಪೌರಕಾರ್ಮಿಕರು ಒಂದೇ ಸ್ಥಳದಲ್ಲಿಮನೆ ಹೊಂದುವಂತಾಗಲಿದೆ.

ಒಂದೇ ಕಟ್ಟಡದಲ್ಲಿ6 ಮನೆ : ಎರಡು ವರ್ಷಗಳ ಹಿಂದೆಯೇ ಸಮುಚ್ಛಯ ಮಾದರಿ ಮನೆಗಳ ನಿರ್ಮಾಣ ಯೋಜನೆ ಸಿದ್ಧವಾಗಿತ್ತು. ಟೆಂಡರ್‌ ಪ್ರಕ್ರಿಯೆ ಕಾಮಗಾರಿ ನಡೆದು ಇದೀಗ ಕಟ್ಟಡ ತಲೆಯೆತ್ತಿದೆ. ನೆಲಮಹಡಿ ಹಾಗೂ ಎರಡು ಅಂತಸ್ತಿನ ಕಟ್ಟಡದಲ್ಲಿತಲಾ ಎರಡೆರಡು ಮನೆಗಳಿವೆ.

45 ಲಕ್ಷ ರೂ.ವೆಚ್ಚದ ಕಾಂಪ್ಲೆಕ್ಸ್‌ : ಕಾಂಪ್ಲೆಕ್ಸ್‌ ಮಾದರಿಯಲ್ಲಿಮನೆಗಳನ್ನು ನಿರ್ಮಿಸಿರುವುದು ವಿಶೇಷವಾಗಿದೆ. ಸರಕಾರದಿಂದ ಗೃಹಭಾಗ್ಯ ಯೋಜನೆಯಡಿ ಬಿಡುಗಡೆಯಾದ 45 ಲಕ್ಷ ರೂ.ವೆಚ್ಚದಲ್ಲಿಮನೆಗಳನ್ನು ಕಟ್ಟಲಾಗಿದೆ. ಇನ್ನೂ ಹೆಚ್ಚುವರಿ ವೆಚ್ಚ ತಗುಲಿದರೆ ಅದನ್ನು ಪೌರಕಾರ್ಮಿಕರು ಭರಿಸಬೇಕಾಗುತ್ತದೆ ಎನ್ನುತ್ತಾರೆ ನಗರಸಭೆ ಸಹಾಯಕ ಕಾರ್ಯಪಾಲಕ ಅಭಿಯಂತರ ಮಧುರಾ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ