ಕಾರವಾರ : ಜಿಲ್ಲೆಯಲ್ಲಿಮೇ 3ರವರೆಗೂ ಲಾಕ್ಡೌನ್ ಯಥಾ ಸ್ಥಿತಿಯಲ್ಲಿಮುಂದುವರಿಯಲಿದೆ. ಲಾಕ್ಡೌನ್ ಮುಗಿದ ಮೇಲೂ ಮುಂದಿನ ನಾಲ್ಕು ತಿಂಗಳ ಕಾಲ ಅನಗತ್ಯ ಓಡಾಟ ನಿಷೇಧಿಸಲಾಗಿದೆ ಎಂದು ಡಿಸಿ ಡಾ. ಹರೀಶಕುಮಾರ ಕೆ. ತಿಳಿಸಿದರು.
ನಗರದಲ್ಲಿಸುದ್ದಿಗೋಷ್ಠಿಯಲ್ಲಿಸೋಮವಾರ ಮಾತನಾಡಿದ ಅವರು, ಲಾಕ್ಡೌನ್ ಮುಗಿದ ಬಳಿಕ ಮುಂದಿನ ನಾಲ್ಕು ತಿಂಗಳು ಸಹ ಎಚ್ಚರಿಕೆಯಿಂದ ಇರುವ ಅಗತ್ಯವಿದೆ. ಈ ಅವಧಿಯಲ್ಲಿಯೂ ದಿನಸಿ, ತರಕಾರಿ , ಮೀನು ಇತ್ಯಾದಿ ಮನೆ ಬಾಗಲಿಗೆ ಪೂರೈಸುವ ವ್ಯವಸ್ಥೆ ಮುಂದುವರಿಯಲಿದೆ ಎಂದರು. ಏ. 21ರಿಂದ ಕೃಷಿ ಚಟುವಟಿಕೆಗೆ ಅವಕಾಶ ನೀಡಲಾಗುತ್ತದೆ. ಕಟ್ಟಡ ನಿರ್ಮಾಣ ಕಾಮಗಾರಿ ಪ್ರಾರಂಭಿಸಬಹುದಾಗಿದ್ದು ಗುತ್ತಿಗೆದಾರರು ಥರ್ಮಲ್ ಸ್ಕಾತ್ರ್ಯನರ್ ಖರೀದಿಸಿ ಪ್ರತಿ ದಿನ ಕಾರ್ಮಿಕರ ಆರೋಗ್ಯ ತಪಾಸಣೆ ನಡೆಸಬೇಕು. ಕಾರ್ಖಾನೆಗಳು, ಉದ್ದಿಮೆಗಳಲ್ಲಿಯೂ ಪ್ರತಿ ದಿನ ಕಾರ್ಮಿಕರ ಆರೋಗ್ಯ ತಪಾಸಣೆ ನಡೆಸಿ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಬೇಕು. ಕಾಮಗಾರಿ ನಡೆಸುವ ಸ್ಥಳದಲ್ಲೇ ಕಾರ್ಮಿಕರಿಗೆ ನೆಲೆ ಕಲ್ಪಿಸಲು ಒತ್ತು ನೀಡಬೇಕು ಎಂದು ಸೂಚಿಸಿದರು.
ಮೇ 3ರ ಬಳಿಕ ಎಲ್ಲಾದರೂ ಸೋಂಕಿತರು ಪತ್ತೆಯಾದರೆ ಸೋಂಕು ಕಾಣಿಸಿಕೊಂಡ ಮೂರು ಕಿಮೀ ಸುತ್ತಳತೆಯ ಪ್ರದೇಶವನ್ನು ಕಂಟೋನ್ಮೆಂಟ್ ಮಾಡಲು ಚಿಂತಿಸಲಾಗುತ್ತಿದೆ. ಇನ್ನು ಮುಂದೆ ಆರೋಗ್ಯ ಕಾರ್ಯಕರ್ತೆಯರು ವಾರದಲ್ಲಿಎರಡು ದಿನ ಮನೆ ಮನೆ ಭೇಟಿ ಮಾಡಿ ಸಮೀಕ್ಷೆ ನಡೆಸಲಿದ್ದಾರೆ. ಕಮ್ಯುನಿಟಿ ರಿಪೋರ್ಟಿಂಗ್ ಸಹ ಆರಂಭಿಸಲಾಗುತ್ತದೆ. ಸಾರ್ವಜನಿಕರು ಜ್ವರ ಕಾಣಿಸಿಕೊಂಡರೆ ಆಯಾ ದಿನದ ಬೆಳಗ್ಗೆ 10 ಗಂಟೆಯ ಒಳಗೆ ಸ್ವಯಂ ಪ್ರೇರಿತರಾಗಿ ಮಾಹಿತಿ ನೀಡಬೇಕು. ಅಂಥವರ ಗಂಟಲುದ್ರವದ ಮಾದರಿಯನ್ನು ಪಡೆದು ಮಾರನೇಯ ದಿನ ವರದಿ ತರಿಸಿಕೊಳ್ಳಲು ಸಾಧ್ಯವಾಗುತ್ತದೆ. ಮುಂದಿನ ನಾಲ್ಕು ತಿಂಗಳ ಕಾಲ ಈ ಪದ್ಧತಿ ಜಾರಿಯಲ್ಲಿರುತ್ತದೆ ಎಂದರು.
ಗರ್ಭಿಣಿ ಆರೋಗ್ಯ ಚೇತರಿಕೆ
ಉಡುಪಿಯ ಆಸ್ಪತ್ರೆಯಲ್ಲಿಚಿಕಿತ್ಸೆ ಪಡೆಯುತ್ತಿರುವ ಭಟ್ಕಳದ ಗರ್ಭಿಣಿಯ ಆರೋಗ್ಯ ಚೇತರಿಸಿದೆ. ಅವರಿಗೆ ಇತರ ಚಿಕಿತ್ಸೆಗಳು ನಡೆಯುತ್ತಿವೆ. ಇನ್ನು 3-4 ದಿನಗಳ ಬಳಿಕ ಅವರು ಬಿಡುಗಡೆ ಹೊಂದಲಿದ್ದಾರೆ. ಕದಂಬ ನೌಕಾನೆಲೆಯ ಪತಂಜಲಿ ಆಸ್ಪತ್ರೆಯಲ್ಲಿಚಿಕಿತ್ಸೆ ಪಡೆಯುತ್ತಿರುವ ಅವರ ಪತಿ ಸಹ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಏ. 27ರಂದು ಅವರ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗುವುದು. ಪ್ರಯೋಗಾಲಯದ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಡಿಸಿ ಮಾಹಿತಿ ನೀಡಿದರು.
ನಗರದಲ್ಲಿಸುದ್ದಿಗೋಷ್ಠಿಯಲ್ಲಿಸೋಮವಾರ ಮಾತನಾಡಿದ ಅವರು, ಲಾಕ್ಡೌನ್ ಮುಗಿದ ಬಳಿಕ ಮುಂದಿನ ನಾಲ್ಕು ತಿಂಗಳು ಸಹ ಎಚ್ಚರಿಕೆಯಿಂದ ಇರುವ ಅಗತ್ಯವಿದೆ. ಈ ಅವಧಿಯಲ್ಲಿಯೂ ದಿನಸಿ, ತರಕಾರಿ , ಮೀನು ಇತ್ಯಾದಿ ಮನೆ ಬಾಗಲಿಗೆ ಪೂರೈಸುವ ವ್ಯವಸ್ಥೆ ಮುಂದುವರಿಯಲಿದೆ ಎಂದರು. ಏ. 21ರಿಂದ ಕೃಷಿ ಚಟುವಟಿಕೆಗೆ ಅವಕಾಶ ನೀಡಲಾಗುತ್ತದೆ. ಕಟ್ಟಡ ನಿರ್ಮಾಣ ಕಾಮಗಾರಿ ಪ್ರಾರಂಭಿಸಬಹುದಾಗಿದ್ದು ಗುತ್ತಿಗೆದಾರರು ಥರ್ಮಲ್ ಸ್ಕಾತ್ರ್ಯನರ್ ಖರೀದಿಸಿ ಪ್ರತಿ ದಿನ ಕಾರ್ಮಿಕರ ಆರೋಗ್ಯ ತಪಾಸಣೆ ನಡೆಸಬೇಕು. ಕಾರ್ಖಾನೆಗಳು, ಉದ್ದಿಮೆಗಳಲ್ಲಿಯೂ ಪ್ರತಿ ದಿನ ಕಾರ್ಮಿಕರ ಆರೋಗ್ಯ ತಪಾಸಣೆ ನಡೆಸಿ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಬೇಕು. ಕಾಮಗಾರಿ ನಡೆಸುವ ಸ್ಥಳದಲ್ಲೇ ಕಾರ್ಮಿಕರಿಗೆ ನೆಲೆ ಕಲ್ಪಿಸಲು ಒತ್ತು ನೀಡಬೇಕು ಎಂದು ಸೂಚಿಸಿದರು.
ಮೇ 3ರ ಬಳಿಕ ಎಲ್ಲಾದರೂ ಸೋಂಕಿತರು ಪತ್ತೆಯಾದರೆ ಸೋಂಕು ಕಾಣಿಸಿಕೊಂಡ ಮೂರು ಕಿಮೀ ಸುತ್ತಳತೆಯ ಪ್ರದೇಶವನ್ನು ಕಂಟೋನ್ಮೆಂಟ್ ಮಾಡಲು ಚಿಂತಿಸಲಾಗುತ್ತಿದೆ. ಇನ್ನು ಮುಂದೆ ಆರೋಗ್ಯ ಕಾರ್ಯಕರ್ತೆಯರು ವಾರದಲ್ಲಿಎರಡು ದಿನ ಮನೆ ಮನೆ ಭೇಟಿ ಮಾಡಿ ಸಮೀಕ್ಷೆ ನಡೆಸಲಿದ್ದಾರೆ. ಕಮ್ಯುನಿಟಿ ರಿಪೋರ್ಟಿಂಗ್ ಸಹ ಆರಂಭಿಸಲಾಗುತ್ತದೆ. ಸಾರ್ವಜನಿಕರು ಜ್ವರ ಕಾಣಿಸಿಕೊಂಡರೆ ಆಯಾ ದಿನದ ಬೆಳಗ್ಗೆ 10 ಗಂಟೆಯ ಒಳಗೆ ಸ್ವಯಂ ಪ್ರೇರಿತರಾಗಿ ಮಾಹಿತಿ ನೀಡಬೇಕು. ಅಂಥವರ ಗಂಟಲುದ್ರವದ ಮಾದರಿಯನ್ನು ಪಡೆದು ಮಾರನೇಯ ದಿನ ವರದಿ ತರಿಸಿಕೊಳ್ಳಲು ಸಾಧ್ಯವಾಗುತ್ತದೆ. ಮುಂದಿನ ನಾಲ್ಕು ತಿಂಗಳ ಕಾಲ ಈ ಪದ್ಧತಿ ಜಾರಿಯಲ್ಲಿರುತ್ತದೆ ಎಂದರು.
ಗರ್ಭಿಣಿ ಆರೋಗ್ಯ ಚೇತರಿಕೆ
ಉಡುಪಿಯ ಆಸ್ಪತ್ರೆಯಲ್ಲಿಚಿಕಿತ್ಸೆ ಪಡೆಯುತ್ತಿರುವ ಭಟ್ಕಳದ ಗರ್ಭಿಣಿಯ ಆರೋಗ್ಯ ಚೇತರಿಸಿದೆ. ಅವರಿಗೆ ಇತರ ಚಿಕಿತ್ಸೆಗಳು ನಡೆಯುತ್ತಿವೆ. ಇನ್ನು 3-4 ದಿನಗಳ ಬಳಿಕ ಅವರು ಬಿಡುಗಡೆ ಹೊಂದಲಿದ್ದಾರೆ. ಕದಂಬ ನೌಕಾನೆಲೆಯ ಪತಂಜಲಿ ಆಸ್ಪತ್ರೆಯಲ್ಲಿಚಿಕಿತ್ಸೆ ಪಡೆಯುತ್ತಿರುವ ಅವರ ಪತಿ ಸಹ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಏ. 27ರಂದು ಅವರ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗುವುದು. ಪ್ರಯೋಗಾಲಯದ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಡಿಸಿ ಮಾಹಿತಿ ನೀಡಿದರು.