ಆ್ಯಪ್ನಗರ

ಎಸ್‌.ಬಿ.ಗೌಡ ಕಲ್ಲೂರಗೆ ಅಭಿನಂದನಾ ಸಮಾರಂಭ ಫೆ.2ಕ್ಕೆ

ಸಿದ್ದಾಪುರ : ಸಹಕಾರ, ರಾಜಕೀಯ, ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಷಣ್ಮುಖ ಬಸವರಾಜ ಗೌಡ ಕಲ್ಲೂರ ಅವರ ಬಹುಮುಖ ಸೇವೆಯನ್ನು ಗುರುತಿಸಿ ಫೆ.2ರಂದು ಮಧ್ಯಾಹ್ನ 3ಕ್ಕೆ ಅವರಿಗೆ ಟಿಎಂಎಸ್‌ ಆವರಣದಲ್ಲಿ ಅಭಿನಂದನಾ ಸಮಾರಂಭವನ್ನು ಏರ್ಪಡಿಸಲಾಗಿದೆ ಎಂದು ಅಭಿನಂದನಾ ಸಮಿತಿಯ ಕಾರ್ಯಾಧ್ಯಕ್ಷ ಆರ್‌.ಎಂ.ಹೆಗಡೆ ಬಾಳೇಸರ ಹೇಳಿದರು.

Vijaya Karnataka 17 Jan 2019, 5:00 am
ಸಿದ್ದಾಪುರ : ಸಹಕಾರ, ರಾಜಕೀಯ, ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಷಣ್ಮುಖ ಬಸವರಾಜ ಗೌಡ ಕಲ್ಲೂರ ಅವರ ಬಹುಮುಖ ಸೇವೆಯನ್ನು ಗುರುತಿಸಿ ಫೆ.2ರಂದು ಮಧ್ಯಾಹ್ನ 3ಕ್ಕೆ ಅವರಿಗೆ ಟಿಎಂಎಸ್‌ ಆವರಣದಲ್ಲಿ ಅಭಿನಂದನಾ ಸಮಾರಂಭವನ್ನು ಏರ್ಪಡಿಸಲಾಗಿದೆ ಎಂದು ಅಭಿನಂದನಾ ಸಮಿತಿಯ ಕಾರ್ಯಾಧ್ಯಕ್ಷ ಆರ್‌.ಎಂ.ಹೆಗಡೆ ಬಾಳೇಸರ ಹೇಳಿದರು.
Vijaya Karnataka Web congratulations to sb gowda kallur on february 2
ಎಸ್‌.ಬಿ.ಗೌಡ ಕಲ್ಲೂರಗೆ ಅಭಿನಂದನಾ ಸಮಾರಂಭ ಫೆ.2ಕ್ಕೆ


ಅವರು ಬುಧವಾರ ಟಿಎಂಎಸ್‌ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರಣೆ ನೀಡಿದರು.

ತಾಲೂಕಿನ ಹಿತ್ತಲಕೊಪ್ಪ ಸೊಸೈಟಿಯ ಮೂಲಕ ಸಹಕಾರಿ ರಂಗಕ್ಕೆ ಬಂದ ಗೌಡರು ಪಿಎಲ್‌ಡಿ ಬ್ಯಾಂಕಿನ ಅಧ್ಯಕ್ಷ ರಾಗಿ, ಎಪಿಎಂಸಿ ನಿರ್ದೇಶಕರಾಗಿ, ಜಿ.ಪಂ. ಸದಸ್ಯರಾಗಿ, ಅಧ್ಯಕ್ಷ ರಾಗಿ, ಟಿಎಂಎಸ್‌ ನಿರ್ದೇಶಕರಾಗಿ, ಜಿಲ್ಲಾ ಮಧ್ಯವರ್ತಿ ಬ್ಯಾಂಕಿನ ನಿರ್ದೇಶಕರಾಗಿ, ರಾಜ್ಯ ಅಪೆಕ್ಸ್‌ ಬ್ಯಾಂಕ್‌ ನಿರ್ದೇಶಕರಾಗಿ, ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಹಲವು ಸಂಘ ಸಂಸ್ಥೆಗಳಲ್ಲಿ ಈಗಲೂ ನಿರ್ದೇಶಕರಾಗಿದ್ದಾರೆ ಎಂದು ಹೇಳಿದ ಅವರು ಹಿಂದೆ ತಾಲೂಕಾ ಜನತಾ ದಳದ ಅಧ್ಯಕ್ಷ ರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಕಾಂಗ್ರೆಸ್‌ ಪಕ್ಷ ದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಾಲೂಕಿನ ಜನಮನದಲ್ಲಿ ತನ್ನದೇ ಆದ ಸ್ಥಾನ ಗಳಿಸಿರುವ ಇಂತಹ ಹಿರಿಯರನ್ನು ಗೌರವಿಸಲಾಗುತ್ತಿದೆ ಇವರ ಸಾಧನೆ ಸಾರುವ 'ಸಹಕಾರಿ ಸನ್ಮಿತ್ರ' ಸ್ಮರಣ ಸಂಚಿಕೆಯನ್ನು ಹೊರ ತರಲಾಗುತ್ತಿದೆ ಎಂದರು.

ಅಭಿನಂದನಾ ಸಮಾರಂಭದಲ್ಲಿ ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಸಚಿವ ಆರ್‌.ವಿ.ದೇಶಪಾಂಡೆ, ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ, ಟಿಎಸ್‌ಎಸ್‌ ಅಧ್ಯಕ್ಷ ಶಾಂತಾರಾಮ ಹೆಗಡೆ, ಎಂಎಲ್‌ಸಿ ಎಸ್‌.ಎಲ್‌.ಘೋಟ್ನೇಕರ, ಶಾಸಕ ಎಸ್‌.ಎಂ.ಹೆಬ್ಬಾರ, ರಾಜ್ಯ ಸಹಕಾರ ಮಾರಾಟ ಮಹಾಮಂಡಲದ ಅಧ್ಯಕ್ಷ ಡಾ.ರಾಜೇಂದ್ರಕುಮಾರ, ಹೊನ್ನಾಳಿ ಮಾಜಿ ಶಾಸಕ ಶಾಂತನಗೌಡ ಡಿ.ಜೆ., ರಾಜ್ಯ ಬಾರ್‌ ಕೌನ್ಸಿಲ್‌ ಮಾಜಿ ಅಧ್ಯಕ್ಷ ಜಯಕುಮಾರ ಪಾಟೀಲ, ಸಾಹಿತಿ ಶಾ.ಮಂ.ಕೃಷ್ಣರಾಯ, ಜಿ.ಪಂ.ಮಾಜಿ ಅಧ್ಯಕ್ಷ ರಮಾನಂದ ನಾಯಕ, ಸಂಕಲ್ಪದ ಅಧ್ಯಕ್ಷ ಪ್ರಮೋದ ಹೆಗಡೆ ಯಲ್ಲಾಪುರ, ಕೆಡಿಸಿಸಿ ಬ್ಯಾಂಕ್‌ ಮಾಜಿ ಎಂ.ಡಿ. ಎನ್‌.ಪಿ.ಗಾಂವಕರ್‌, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಭೀಮಣ್ಣ ನಾಯ್ಕ, ಶಿಕ್ಷ ಣ ಪ್ರಸಾರಕ ಸಮಿತಿ ಉಪಾಧ್ಯಕ್ಷ ಡಾ.ಶಶಿಭೂಷಣ ಹೆಗಡೆ ಮುಂತಾದವರು ಪಾಲ್ಗೊಳ್ಳಲಿದ್ದಾರೆ. ಅಭಿನಂದನಾ ನುಡಿಯನ್ನು ಲ.ಡಾ.ರವಿ ಹೆಗಡೆ ಹೂವಿನಮನೆ ಆಡಲಿದ್ದಾರೆ. ಕಾರ್ಯಕ್ರಮದ ನಂತರ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಆರ್‌.ಎಂ.ಹೆಗಡೆ ವಿವರಿಸಿದರು.

ಸ್ಮರಣ ಸಂಚಿಕೆಯ ಸಂಪಾದಕ ಜಿ.ಜಿ.ಹೆಗಡೆ ಬಾಳಗೋಡ, ಎಪಿಎಂಸಿ ಅಧ್ಯಕ್ಷ ಕೆ.ಜಿ.ನಾಗರಾಜ, ಟಿಎಂಎಸ್‌ ನಿರ್ದೇಶಕ ಎಂ.ಆರ್‌.ಹೆಗಡೆ ನೇಗಾರ, ಸಮಿತಿ ಉಪಾಧ್ಯಕ್ಷ ಸತೀಶ ಗೌಡರ್‌, ಸ್ವಾಗತ ಸಮಿತಿಯ ಜಿ.ಎಂ.ಭಟ್ಟ ಕಾಜಿನಮನೆ, ಎಂ.ಆರ್‌.ಭಟ್ಟ ತಟ್ಟಿಕೈ ಮುಂತಾದವರು ಉಪಸ್ಥಿತರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ