ಆ್ಯಪ್ನಗರ

ಕಾಂಗ್ರೆಸ್‌ ಆರೋಪ..ಬೆಲೆ ಇಳಿಕೆಗೆ ಆಗ್ರಹ

ಶಿರಸಿ : ವಿದೇಶದಲ್ಲಿಕಚ್ಚಾತೈಲ ಬೆಲೆ ಇಳಿಕೆಯಾಗಿದ್ದರೂ ದೇಶದಲ್ಲಿಮಾತ್ರ ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ಮಾಡುತ್ತಿರುವುದು ಕೇಂದ್ರ ಸರಕಾರ ಜನವಿರೋಧಿ ನೀತಿಯಾಗಿದೆ ಎಂದು ಆರೋಪಿಸಿ ಕಾಂಗ್ರೆಸ್‌ನಿಂದ ಶುಕ್ರವಾರ ಪ್ರತಿಭಟನೆ ನಡೆಯಿತು.

Vijaya Karnataka 4 Jul 2020, 5:00 am
ಶಿರಸಿ : ವಿದೇಶದಲ್ಲಿಕಚ್ಚಾತೈಲ ಬೆಲೆ ಇಳಿಕೆಯಾಗಿದ್ದರೂ ದೇಶದಲ್ಲಿಮಾತ್ರ ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ಮಾಡುತ್ತಿರುವುದು ಕೇಂದ್ರ ಸರಕಾರ ಜನವಿರೋಧಿ ನೀತಿಯಾಗಿದೆ ಎಂದು ಆರೋಪಿಸಿ ಕಾಂಗ್ರೆಸ್‌ನಿಂದ ಶುಕ್ರವಾರ ಪ್ರತಿಭಟನೆ ನಡೆಯಿತು.
Vijaya Karnataka Web 3SRS14_26
ತೈಲ್‌ ಬೆಲೆ ಏರಿಕೆ ವಿರೋಧಿಸಿ ತಹಸೀಲ್ದಾರ ಕಚೇರಿ ಎದುರು ಕಾಂಗ್ರೆಸ್‌ನಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ ಕಚೇರಿ ಮೂಲಕ ರಾಷ್ಟ್ರಪತಿಗೆ ಮನವಿಪತ್ರ ಕಳುಹಿಸಲಾಯಿತು.


ಇಲ್ಲಿಯ ತಹಸೀಲ್ದಾರ ಕಚೇರಿ ಆವಾರ ಎದುರು ಜಿಲ್ಲಾಕಾಂಗ್ರೆಸ್‌ ಹಾಗೂ ತಾಲೂಕು ಕಾಂಗ್ರೆಸ್‌ ಘಟಕಗಳ ನೇತೃತ್ವದಲ್ಲಿನಡೆದ ಪ್ರತಿಭಟನೆಯಲ್ಲಿಕೇಂದ್ರ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು. ಪೆಟ್ರೋಲ್‌ ದುಬಾರಿ ಮಾಡಿ ಬಡವರ ಮೇಲೆ ಕೇಂದ್ರ ಸರಕಾರ ಸವಾರಿ ಮಾಡಲು ಹೊರಟಿದೆ. ಕೊರೊನಾ ಜೀವ ಹಿಂಡುತ್ತಿರುವ ಕಾಲದಲ್ಲಿತೈಲೆ ಬೆಲೆ ಹೆಚ್ಚಳ ಜನವಿರೋಧಿ ನೀತಿಯಾಗಿ ಎಂದು ದೂರಿದರು.

ಕೊರೊನಾ ವಿಷಮ ಪರಿಸ್ಥಿತಿಯಲ್ಲಿಕೇಂದ್ರ ಸರ್ಕಾರ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಯನ್ನು ಸತತವಾಗಿ ಏರಿಸುತ್ತಿದ್ದು, ಕೂಲಿಕಾರರು, ಕಾರ್ಮಿಕರು, ವ್ಯಾಪಾರಸ್ಥರು ಹಾಗೂ ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕೂಡಲೇ ಬೆಲೆ ಇಳಿಕೆಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ವಿ.ಎಸ್‌.ಆರಾಧ್ಯ, ಎಸ್‌.ಕೆ.ಭಾಗ್ವತ, ಜಿ.ಎನ್‌.ಹೆಗಡೆ ಮುರೇಗಾರ, ರಮೇಶ ದುಭಾಶಿ, ದೀಪಕ ಹೆಗಡೆ ದೊಡ್ಡೂರು, ಜಗದೀಶ ಗೌಡ, ಸತೀಶ ನಾಯ್ಕ, ಪ್ರವೀಣ ಗೌಡ ಮುಂತಾದವರು ಪಾಲ್ಗೊಂಡರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ