ಆ್ಯಪ್ನಗರ

ಸಂತೆ ಮಾರುಕಟ್ಟೆಯಲ್ಲಿ ಮುಂದುವರಿದ ಗೊಂದಲ

ಕುಮಟಾ : ಪಟ್ಟಣದ ಎಪಿಎಂಸಿ ಆವಾರದಲ್ಲಿ ನೂತನವಾಗಿ ಉದ್ಘಾಟನೆಗೊಂಡಿರುವ ವಾರದ ಸಂತೆ ಮಾರುಕಟ್ಟೆಯಲ್ಲಿ ವ್ಯಾಪಾರಸ್ಥರ ಗೊಂದಲ ಮುಂದುವರಿದಿದೆ. ಸಮಸ್ಯೆ ಬಗೆ ಹರಿಸಿ ಸುಸೂತ್ರವಾಗಿ ವ್ಯಾಪಾರ ನಡೆಸುವ ವ್ಯವಸ್ಥೆ ಕಲ್ಪಿಸಿಕೊಡುವ ಮತ್ತು ಸಮಸ್ಯೆ ಬಗೆ ಹರಿಸುವ ಮನಸ್ಸು ಯಾರೂ ಮಾಡುತ್ತಿಲ್ಲ ಎಂದು ಸ್ಥಳೀಯ ಮಹಿಳಾ ವ್ಯಾಪಾರಸ್ಥರು, ಗ್ರಾಹಕರು ತಮ್ಮ ಅಳಲು ತೋಡಿಕೊಂಡಿದ್ದಾರೆ.

Vijaya Karnataka 8 Feb 2019, 5:00 am
ಕುಮಟಾ : ಪಟ್ಟಣದ ಎಪಿಎಂಸಿ ಆವಾರದಲ್ಲಿ ನೂತನವಾಗಿ ಉದ್ಘಾಟನೆಗೊಂಡಿರುವ ವಾರದ ಸಂತೆ ಮಾರುಕಟ್ಟೆಯಲ್ಲಿ ವ್ಯಾಪಾರಸ್ಥರ ಗೊಂದಲ ಮುಂದುವರಿದಿದೆ. ಸಮಸ್ಯೆ ಬಗೆ ಹರಿಸಿ ಸುಸೂತ್ರವಾಗಿ ವ್ಯಾಪಾರ ನಡೆಸುವ ವ್ಯವಸ್ಥೆ ಕಲ್ಪಿಸಿಕೊಡುವ ಮತ್ತು ಸಮಸ್ಯೆ ಬಗೆ ಹರಿಸುವ ಮನಸ್ಸು ಯಾರೂ ಮಾಡುತ್ತಿಲ್ಲ ಎಂದು ಸ್ಥಳೀಯ ಮಹಿಳಾ ವ್ಯಾಪಾರಸ್ಥರು, ಗ್ರಾಹಕರು ತಮ್ಮ ಅಳಲು ತೋಡಿಕೊಂಡಿದ್ದಾರೆ.
Vijaya Karnataka Web KWR-PHT 7 KMT 3


ಎಪಿಎಂಸಿಯ ನೂತನವಾಗಿ ನಿರ್ಮಾಣವಾದ ಸಂತೆ ಮಾರುಕಟ್ಟೆಯಲ್ಲಿ ಕಳೆದ ವಾರ ಗಲಾಟೆಯ ಕೇಳಿ ಬಂದಿತ್ತು. ಈ ಬುಧವಾರದ ಸಂತೆಯಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ವ್ಯಾಪಾರಸ್ಥರು ಬಂದಿರುವದರಿಂದ ಸ್ಥಳೀಯ ತರಕಾರಿ ಬೆಳೆಗಾರರು ಮತ್ತು ವ್ಯಾಪಾರಸ್ಥರು ತೊಂದರೆ ಅನುಭವಿಸುವಂತಾಯಿತು.

ಸ್ವತಃ ತರಕಾರಿ ಬೆಳೆದು ವ್ಯಾಪಾರ ಮಾಡುವ ತಾಲೂಕಿನ ಮಹಿಳೆಯರಿಗೆ ಸಮಸ್ಯೆ ಎದುರಾಯಿತು.

ಎಪಿಎಂಸಿ ಕಳೆದವಾರ ಪ್ರತಿಯೊಂದು ಅಂಗಡಿಗೆ 300 ರೂ. ಬಾಡಿಗೆ ವಸೂಲಿ ಮಾಡಿತ್ತು. ಇದು ಸ್ಥಳೀಯ ವ್ಯಾಪಾರಸ್ಥರ ಆಕ್ರೋಶಕ್ಕೆ ಕಾರಣವಾಗಿತ್ತು. ಬರುವ ವಾರದ ಸಂತೆಗೆ ಸಮಸ್ಯೆ ಬಗೆಹರಿಸಿಕೊಡುವುದಾಗಿ ಎಪಿಎಂಸಿ ಅಧ್ಯಕ್ಷ ರಾಮನಾಥ ಶಾನಭಾಗ ಮಾಧ್ಯಮಗಳಿಗೆ ತಿಳಿಸಿದ್ದರು. ಈ ಬಾರಿ ಎಪಿಎಂಸಿ ಪ್ರತಿಯೊಬ್ಬರಿಗೆ 200 ರೂ.ಗಳಂತೆ ಬಾಡಿಗೆ ಪಾವತಿಸಿದೆ. ಆಸ್ಥಳೀಯ ತರಕಾರಿ ಮಾರಾಟ ಮಹಿಳೆಯರು ಇದೂ ಸಹಿತ ಹೆಚ್ಚಾಗಿದ್ದು ಇಷ್ಟೊಂದು ಬಾಡಿಗೆ ನೀಡಲು ಕಷ್ಟವಾಗುತ್ತದೆ ಎಂದು ತಿಳಿಸಿದ್ದಾರೆ. ಪ್ರತಿವಾರ ತರಕಾರಿ ಬೆಳೆದು ಮಾರಾಟಕ್ಕೆ ತಂದು ವ್ಯಾಪಾರ ನಡೆಸಲು ಸ್ಥಳದ ಅನುಕೂಲ ಮಾಡಿಕೊಡಬೇಕು.

2-3 ಸಾವಿರ ರೂ ಖರ್ಚು ಮಾಡಿ ಇಲ್ಲಿಗೆ ಬಂದು ಜನರಿಗೆ ಕಡಿಮೆ ಬೆಲೆಯಲ್ಲಿ ಹಣ್ಣುಗಳನ್ನು ಮಾರಾಟ ಮಾಡುತ್ತೇವೆ. 500 ರೂಪಾಯಿ ವ್ಯಾಪಾರವಾದರೆ, ಅದರಲ್ಲಿ 250 ರೂ. ಎಪಿಎಂಸಿ ಅವರಿಗೆ ನೀಡಬೇಕಾಗಿದೆ. ನಮಗೆ ಜಾಗದ ಬಾಡಿಗೆ ಶುಲ್ಕ ನಿಜಕ್ಕೂ ಜಾಸ್ತಿಯಾಗಿದೆ. ಕುಳಿತುಕೊಂಡು ವ್ಯಾಪಾರ ಮಾಡಲು ಸರಿಯಾದ ಸ್ಥಳಾವಕಾಶವೂ ಇಲ್ಲ. ಎಂದು ಹಾನಗಲ್‌ ತಾಲೂಕಿನ ಹಣ್ಣಿನ ವ್ಯಾಪಾರಿ ಮೆಹಬೂಬ್‌ ಅಲಿ ಅವರ ನೋವಿನ ಮಾತಾದರೆ, ತಾಲೂಕಿನ ಧಾರೇಶ್ವರದ ಸತೀಷ ಭಂಡಾರಿ ಅವರು, ಇಲ್ಲಿನ ಎಪಿಎಂಸಿಯವರು ಕೋಟಿಗಟ್ಟಲೆ ರೂಪಾಯಿ ಖರ್ಚು ಮಾಡಿ ನಿರ್ಮಿಸಿದ ಸಂತೆ ಮಾರುಕಟ್ಟೆ ಸಾಲದು. ನಾವು ಮೊದಲಿನಂತೆ ರಸ್ತೆ, ಧರೆ ಬದಿಯಲ್ಲಿ ಬಿಸಿಲಿನಲ್ಲಿ ಕುಳಿತುಕೊಳ್ಳುವಂತಾಗಿದೆ. ಇಲ್ಲಿನ ರಸ್ತೆ ತಮ್ಮದೆಂದು ಪುರಸಭೆಯವರು ಎಚ್ಚರಿಸಿ ಹೋಗಿದ್ದಾರೆ. ಹೀಗಾದರೆ ನಾವೇನು ಮಾಡಬೇಕು ಎಂದು ಪ್ರಶ್ನಿಸಿದರು.

ವಾರದ ಸಂತೆಯಾಗಿರುವುದರಿಂದ ಗ್ರಾಮೀಣ ಭಾಗದ ಜನರಿಗೆ ಹಾಗೂ ಸ್ಥಳೀಯರಿಗೆ ಆದ್ಯತೆ ನೀಡಬೇಕೇ ಹೊರತು ಸಂತೆಯ ಮೂಲಕ ಎಪಿಎಂಸಿ ಆದಾಯದ ಗುರಿಯೊಂದನ್ನೇ ಇಟ್ಟುಕೊಳ್ಳಬಾರದು. ಸ್ಥಳೀಯ ರೈತರು ಹಾಗೂ ತರಕಾರಿ ಬೆಳೆಗಾರರಿಗೆ ಹೆಚ್ಚಿನ ಆದ್ಯತೆಯನ್ನು ನೀಡಲು ಎಪಿಎಂಸಿ ಕಾಳಜಿ ವಹಿಸಬೇಕು ಎಂದು ವಾರದ ಸಂತೆಗೆ ಬಂದ ಪ್ರಜ್ಞಾವಂತ ನಾಗರಿಕರ ಅಭಿಪ್ರಾಯವಾಗಿದೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ