ಆ್ಯಪ್ನಗರ

ಸತತ ಮಳೆ: ಎಲ್ಲಿ ನೋಡಿದರಲ್ಲಿ ನೀರು

ಕಾರವಾರ : ಒಂದು ವಾರದಿಂದ ಸತತವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದ ಸಾರ್ವಜನಿಕರು ತೊಂದರೆಗೆ ಸಿಲುಕಿಕೊಂಡಿದ್ದಾರೆ. ತಾಲೂಕಿನ ಮಾಜಾಳಿ ಬಾವಳದಲ್ಲಿ ಮಳೆ ನೀರು ಮನೆಗಳಲ್ಲಿ ಸೇರಿಕೊಂಡು ಜನರು ಮನೆ ತೊರೆದು ದೇವಸ್ಥಾನದಲ್ಲಿ ದಿನ ಕಳೆಯುವಂತಹ ಪರಿಸ್ಥಿತಿ ಎದುರಿಸುವಂತಾಗಿದೆ.

Vijaya Karnataka 28 Jul 2019, 5:00 am
ಕಾರವಾರ : ಒಂದು ವಾರದಿಂದ ಸತತವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದ ಸಾರ್ವಜನಿಕರು ತೊಂದರೆಗೆ ಸಿಲುಕಿಕೊಂಡಿದ್ದಾರೆ. ತಾಲೂಕಿನ ಮಾಜಾಳಿ ಬಾವಳದಲ್ಲಿ ಮಳೆ ನೀರು ಮನೆಗಳಲ್ಲಿ ಸೇರಿಕೊಂಡು ಜನರು ಮನೆ ತೊರೆದು ದೇವಸ್ಥಾನದಲ್ಲಿ ದಿನ ಕಳೆಯುವಂತಹ ಪರಿಸ್ಥಿತಿ ಎದುರಿಸುವಂತಾಗಿದೆ.
Vijaya Karnataka Web continuous rain where to see water
ಸತತ ಮಳೆ: ಎಲ್ಲಿ ನೋಡಿದರಲ್ಲಿ ನೀರು


ಮಳೆ ಎಡೆಬಿಡದೇ ಸುರಿಯುತ್ತಲಿದ್ದು, ಎತ್ತ ನೋಡಿದರತ್ತ ನೀರು ತುಂಬಿಕೊಂಡಿರುವುದು ಕಂಡು ಬರುತ್ತಿದೆ. ತಾಲೂಕಿನಾದ್ಯಂತ ಮಳೆಯಿಂದ ಹೆಚ್ಚಿನ ಪ್ರಮಾಣದಲ್ಲಿ ಹಾನಿ ಸಂಭವಿಸಿದ್ದು, ಕೆಲ ಮನೆಗಳು ಕುಸಿದು ಬಿದ್ದಿವೆ. ಮಾಜಾಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾವಳ ಸಮುದ್ರ ಕಿನಾರೆಯ ಸಮೀಪದಲ್ಲಿದ್ದು, ಮಳೆಯೊಂದಿಗೆ ಗಾಳಿ ಬೀಸುತ್ತಿರುವುದರಿಂದ ಇಲ್ಲಿನ ಮನೆಗಳ ಹಂಚುಗಳು ಗಾಳಿಯಲ್ಲಿ ಹಾರಿ ಹೋಗಿವೆ. ಅಲ್ಲದೇ ಮನೆಯ ಮಣ್ಣಿನ ಗೋಡೆಗಳು ನೆಲಕಚ್ಚಿವೆ.

ಬಾವಳದ ನಾಗರಿಕರು ಪ್ರತಿ ವರ್ಷವೂ ಮಳೆಯಿಂದ ತೊಂದರೆ ಅನುಭವಿಸುತ್ತಾರೆ. ಮೀನುಗಾರರೇ ಹೆಚ್ಚಿನ ಸಂಖ್ಯೆಯಲ್ಲಿರುವ ಇಲ್ಲಿ ಸುಮಾರು 20ಕ್ಕೂ ಅಧಿಕ ಮನೆಗಳು ಮಳೆಯಿಂದ ಹಾನಿಗೊಳಗಾಗಿವೆ. ಮಳೆ ನೀರು ಹರಿದು ಸಮುದ್ರ ಸೇರಲು ಕಾಲುವೆಗಳಿಲ್ಲದ ಕಾರಣ ನೀರು ಶೇಖರಣೆಗೊಳ್ಳುತ್ತದೆ. ಸ್ಥಳೀಯರು ಸೇರಿ ಪ್ರತಿ ಮಳೆಗಾಲದಲ್ಲಿ ಕಾಲುವೆ ನಿರ್ಮಾಣ ಮಾಡಿಕೊಳ್ಳುತ್ತಾರೆ. ಆದರೆ ಮಣ್ಣು ತುಂಬಿ ಅದು ಮುಚ್ಚಿಹೋಗುತ್ತದೆ. ಆದ್ದರಿಂದ ಸಿಮೆಂಟ್‌ ಕಾಲುವೆ ನಿರ್ಮಾಣ ಮಾಡಬೇಕು ಎಂದು ಸ್ಥಳೀಯರು ಗ್ರಾ.ಪಂ.ಗೆ ಆಗ್ರಹಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ