ಸಹಕಾರಿ ಸನ್ಮಿತ್ರ ಅಭಿನಂದನಾ ಗ್ರಂಥ ಬಿಡುಗಡೆ
ಸಿದ್ದಾಪುರ : ಹಿರಿಯ ಸಹಕಾರಿ ಧುರೀಣ, ಹಿರಿಯ ರಾಜಕಾರಣಿ ಎಸ್.ಬಿ.ಗೌಡ ಕಲ್ಲೂರು ಅವರನ್ನು ಕಳೆದ ಫೆ.2ರಂದು ಅವರ ಅಭಿಮಾನಿಗಳ ಸಮ್ಮುಖದಲ್ಲಿ ಸನ್ಮಾನ ಮಾಡಲಾಗಿತ್ತು. ಆ ಸಂದರ್ಭದಲ್ಲಿ ಅವರ ಕುರಿತಾದ ಅಭಿನಂದನಾ ಗ್ರಂಥವನ್ನು ಸಾಂಕೇತಿಕವಾಗಿ ಬಿಡುಗಡೆ ಮಾಡಲಾಗಿತ್ತು.
Vijaya Karnataka 30 Jun 2019, 5:00 am
ಸಿದ್ದಾಪುರ : ಹಿರಿಯ ಸಹಕಾರಿ ಧುರೀಣ, ಹಿರಿಯ ರಾಜಕಾರಣಿ ಎಸ್.ಬಿ.ಗೌಡ ಕಲ್ಲೂರು ಅವರನ್ನು ಕಳೆದ ಫೆ.2ರಂದು ಅವರ ಅಭಿಮಾನಿಗಳ ಸಮ್ಮುಖದಲ್ಲಿ ಸನ್ಮಾನ ಮಾಡಲಾಗಿತ್ತು. ಆ ಸಂದರ್ಭದಲ್ಲಿ ಅವರ ಕುರಿತಾದ ಅಭಿನಂದನಾ ಗ್ರಂಥವನ್ನು ಸಾಂಕೇತಿಕವಾಗಿ ಬಿಡುಗಡೆ ಮಾಡಲಾಗಿತ್ತು.
ಶನಿವಾರ ಪಟ್ಟಣದ ಟಿ.ಎಂ.ಎಸ್. ಸಭಾಭವನದಲ್ಲಿ ಎಸ್.ಬಿ.ಗೌಡ ಕಲ್ಲೂರು ಅಭಿನಂದನಾ ಸಮಿತಿಯವರು ಸಂಪೂರ್ಣವಾಗಿ ಸಿದ್ದಗೊಂಡ ಅಭಿನಂದನಾ ಗ್ರಂಥದ ಬಿಡುಗಡೆ ಹಾಗೂ ಕಾರ್ಯಕ್ರಮದ ಖರ್ಚು-ವೆಚ್ಚಗಳ ಮಾಹಿತಿ ನೀಡುವ ಕಾರ್ಯಕ್ರಮವನ್ನು ನಡೆಸಿದರು.
ಅಭಿನಂದನಾ ಗ್ರಂಥವನ್ನು ಬಿಡುಗಡೆಗೊಳಿಸಿದ ಡಾ.ಶಶಿಭೂಷಣ ಹೆಗಡೆ ಮಾತನಾಡಿ, ಇಂದು ಸಮಾಜ ಸೇವೆ ಎನ್ನುವುದು ರಾಜಕೀಯವಾಗಿ ಮೇಲೇರುವ ಮೆಟ್ಟಿಲು ಎಂದು ತಿಳಿಯುವವರು ಹೆಚ್ಚಾಗುತ್ತಿದ್ದು, ರಾಜಕೀಯ ಹೊರತು ಪಡಿಸಿ ಸಾಮಾಜಿಕ ಸೇವೆ ಸಲ್ಲಿಸುವವರ ಅವಶ್ಯಕತೆ ಇದೆ. ಒಂದು ಸಂಸ್ಥೆಯನ್ನು ಕಟ್ಟುವುದು, ಸಮಾಜವನ್ನು ಕಟ್ಟುವುದು ಕಷ್ಟದ ಕೆಲಸ. ರಾಜಕೀಯವನ್ನು ಬದಿಗಿರಿಸದೇ ಇಂತಹ ಕೆಲಸಕ್ಕೆ ಮುಂದಾದರೆ ಅದು ಸ್ವಾರ್ಥಿಗಳ ಗೂಡಾಗುತ್ತದೆ. ಸಮಾಜ ಎನ್ನುವುದು ಕಾಲಕಾಲಕ್ಕೆ ಬದಲಾವಣೆಯಾಗುತ್ತಿರುತ್ತದೆ ಈ ಬದಲಾವಣೆಗೆ ಅನುಗುಣವಾಗಿ ಸಾಮಾಜಿಕ ಕೆಲಸಗಳು ಬದಲಾಗುತ್ತದೆ. ಸಿದ್ದಾಪುರಕ್ಕೆ ಇಂತಹ ಸಾಮಾಜಿಕ ಸಂಸ್ಥೆಯನ್ನು ಕಟ್ಟುವ ಶ್ರೀಮಂತ ಪರಂಪರೆ ಇದೆ. ಇಂತಹ ಪರಂಪರೆಯ ಒಬ್ಬ ವ್ಯಕ್ತಿ ಎಸ್.ಬಿ.ಗೌಡಕಲ್ಲೂರು ಅನೇಕ ಸಂಸ್ಥೆಗಳನ್ನು ಕಟ್ಟುವದರ ಜೊತೆಗೆ ಸಹಕಾರಿ ಕ್ಷೇತ್ರದಲ್ಲಿ ರಾಜಕೀಯ ಕ್ಷೇತ್ರದಲ್ಲಿ ಅನೇಕರನ್ನು ಬೆಳೆಸಿದ್ದಾರೆ. ಇಂತಹ ವ್ಯಕ್ತಿಯ ಕುರಿತಾದ ಅಭಿನಂದನಾ ಗ್ರಂಥ ಒಂದು ತಲೆಮಾರಿನ ದಾಖಲಾತಿಯೇ ಆಗಿರುತ್ತದೆ. ಇಂತಹ ಗ್ರಂಥ ಮುಂದಿನ ಪೀಳಿಗೆಯವರಿಗೆ ದಾರಿದೀಪವಾಗಿರುತ್ತದೆ ಎಂದು ಹೇಳಿದರು.
ಅಧ್ಯಕ್ಷ ತೆ ವಹಿಸಿದ್ದ ಡಾ.ಎಂ.ಪಿ.ಶೆಟ್ಟಿ ಅಭಿಮಾನಿಗಳು ನೀಡಿದ ಧನವನ್ನು ಸಮರ್ಪಿಸಿದರು. ವೇದಿಕೆಯಲ್ಲಿ ಲಯನ್ಸ್ ಅಧ್ಯಕ್ಷ ಸಿ.ಎಸ್.ಗೌಡರ್, ತಾ.ಪಂ. ಅಧ್ಯಕ್ಷ ಸುಧೀರ್ ಗೌಡರ್,ಎಪಿಎಂಸಿ ಅಧ್ಯಕ್ಷ ಕೆ.ಜಿ.ನಾಗರಾಜ ಉಪಸ್ಥಿತರಿದ್ದರು.
ಅಭಿನಂದನಾ ಸಮಿತಿಯ ಅಧ್ಯಕ್ಷ ಆರ್.ಎಂ.ಹೆಗಡೆ ಬಾಳೆಸರ ಪ್ರಾಸ್ತಾವಿಕ ಮಾತನಾಡಿದರು. ಸಹಕಾರಿ ಸನ್ಮಿತ್ರ ಗ್ರಂಥದ ಸಂಪಾದಕ ಜಿ.ಜಿ.ಹೆಗಡೆ ಬಾಳಗೋಡ ನಿರೂಪಿಸಿದರು.
ಶನಿವಾರ ಪಟ್ಟಣದ ಟಿ.ಎಂ.ಎಸ್. ಸಭಾಭವನದಲ್ಲಿ ಎಸ್.ಬಿ.ಗೌಡ ಕಲ್ಲೂರು ಅಭಿನಂದನಾ ಸಮಿತಿಯವರು ಸಂಪೂರ್ಣವಾಗಿ ಸಿದ್ದಗೊಂಡ ಅಭಿನಂದನಾ ಗ್ರಂಥದ ಬಿಡುಗಡೆ ಹಾಗೂ ಕಾರ್ಯಕ್ರಮದ ಖರ್ಚು-ವೆಚ್ಚಗಳ ಮಾಹಿತಿ ನೀಡುವ ಕಾರ್ಯಕ್ರಮವನ್ನು ನಡೆಸಿದರು.
ಅಭಿನಂದನಾ ಗ್ರಂಥವನ್ನು ಬಿಡುಗಡೆಗೊಳಿಸಿದ ಡಾ.ಶಶಿಭೂಷಣ ಹೆಗಡೆ ಮಾತನಾಡಿ, ಇಂದು ಸಮಾಜ ಸೇವೆ ಎನ್ನುವುದು ರಾಜಕೀಯವಾಗಿ ಮೇಲೇರುವ ಮೆಟ್ಟಿಲು ಎಂದು ತಿಳಿಯುವವರು ಹೆಚ್ಚಾಗುತ್ತಿದ್ದು, ರಾಜಕೀಯ ಹೊರತು ಪಡಿಸಿ ಸಾಮಾಜಿಕ ಸೇವೆ ಸಲ್ಲಿಸುವವರ ಅವಶ್ಯಕತೆ ಇದೆ. ಒಂದು ಸಂಸ್ಥೆಯನ್ನು ಕಟ್ಟುವುದು, ಸಮಾಜವನ್ನು ಕಟ್ಟುವುದು ಕಷ್ಟದ ಕೆಲಸ. ರಾಜಕೀಯವನ್ನು ಬದಿಗಿರಿಸದೇ ಇಂತಹ ಕೆಲಸಕ್ಕೆ ಮುಂದಾದರೆ ಅದು ಸ್ವಾರ್ಥಿಗಳ ಗೂಡಾಗುತ್ತದೆ. ಸಮಾಜ ಎನ್ನುವುದು ಕಾಲಕಾಲಕ್ಕೆ ಬದಲಾವಣೆಯಾಗುತ್ತಿರುತ್ತದೆ ಈ ಬದಲಾವಣೆಗೆ ಅನುಗುಣವಾಗಿ ಸಾಮಾಜಿಕ ಕೆಲಸಗಳು ಬದಲಾಗುತ್ತದೆ. ಸಿದ್ದಾಪುರಕ್ಕೆ ಇಂತಹ ಸಾಮಾಜಿಕ ಸಂಸ್ಥೆಯನ್ನು ಕಟ್ಟುವ ಶ್ರೀಮಂತ ಪರಂಪರೆ ಇದೆ. ಇಂತಹ ಪರಂಪರೆಯ ಒಬ್ಬ ವ್ಯಕ್ತಿ ಎಸ್.ಬಿ.ಗೌಡಕಲ್ಲೂರು ಅನೇಕ ಸಂಸ್ಥೆಗಳನ್ನು ಕಟ್ಟುವದರ ಜೊತೆಗೆ ಸಹಕಾರಿ ಕ್ಷೇತ್ರದಲ್ಲಿ ರಾಜಕೀಯ ಕ್ಷೇತ್ರದಲ್ಲಿ ಅನೇಕರನ್ನು ಬೆಳೆಸಿದ್ದಾರೆ. ಇಂತಹ ವ್ಯಕ್ತಿಯ ಕುರಿತಾದ ಅಭಿನಂದನಾ ಗ್ರಂಥ ಒಂದು ತಲೆಮಾರಿನ ದಾಖಲಾತಿಯೇ ಆಗಿರುತ್ತದೆ. ಇಂತಹ ಗ್ರಂಥ ಮುಂದಿನ ಪೀಳಿಗೆಯವರಿಗೆ ದಾರಿದೀಪವಾಗಿರುತ್ತದೆ ಎಂದು ಹೇಳಿದರು.
ಅಧ್ಯಕ್ಷ ತೆ ವಹಿಸಿದ್ದ ಡಾ.ಎಂ.ಪಿ.ಶೆಟ್ಟಿ ಅಭಿಮಾನಿಗಳು ನೀಡಿದ ಧನವನ್ನು ಸಮರ್ಪಿಸಿದರು. ವೇದಿಕೆಯಲ್ಲಿ ಲಯನ್ಸ್ ಅಧ್ಯಕ್ಷ ಸಿ.ಎಸ್.ಗೌಡರ್, ತಾ.ಪಂ. ಅಧ್ಯಕ್ಷ ಸುಧೀರ್ ಗೌಡರ್,ಎಪಿಎಂಸಿ ಅಧ್ಯಕ್ಷ ಕೆ.ಜಿ.ನಾಗರಾಜ ಉಪಸ್ಥಿತರಿದ್ದರು.
ಅಭಿನಂದನಾ ಸಮಿತಿಯ ಅಧ್ಯಕ್ಷ ಆರ್.ಎಂ.ಹೆಗಡೆ ಬಾಳೆಸರ ಪ್ರಾಸ್ತಾವಿಕ ಮಾತನಾಡಿದರು. ಸಹಕಾರಿ ಸನ್ಮಿತ್ರ ಗ್ರಂಥದ ಸಂಪಾದಕ ಜಿ.ಜಿ.ಹೆಗಡೆ ಬಾಳಗೋಡ ನಿರೂಪಿಸಿದರು.