ಆ್ಯಪ್ನಗರ

ಕೋರೆಗಾಂವ ವಿಜಯೋತ್ಸವ

ಮುಂಡಗೋಡ : 201ನೇ ಕೋರೆಗಾಂವ್‌ ಮಹರ ಸೈನಿಕರ ವಿಜಯ ದಿವಸದ ವಿಜಯೋತ್ಸವವನ್ನು ಸಮತಾ ಸೈನಿಕ ದಳ ಸಂಘಟನೆಯವರು ಮಂಗಳವಾರ ಆಚರಿಸಿದರು.

Vijaya Karnataka 3 Jan 2019, 5:00 am
ಮುಂಡಗೋಡ : 201ನೇ ಕೋರೆಗಾಂವ್‌ ಮಹರ ಸೈನಿಕರ ವಿಜಯ ದಿವಸದ ವಿಜಯೋತ್ಸವವನ್ನು ಸಮತಾ ಸೈನಿಕ ದಳ ಸಂಘಟನೆಯವರು ಮಂಗಳವಾರ ಆಚರಿಸಿದರು.
Vijaya Karnataka Web KWR-2MND3-


ಕೊರೆಯುವ ಚಳಿಯಲ್ಲಿ ಪೇಶ್ವೆ 2ನೇ ಬಾಜಿರಾವನ ವಿರುದ್ಧ ಬಾಂಬೆ ನೆಟೀವ್ಲಾಯಿಟ್‌ ಇನ್ಪೆಟ್ರಿಯ 500ಮಹರ ಸೈನಿಕರು ಪೇಶ್ವೆಗಳ ಪೈಶಾಚಿಕ ಹಾಗೂ ಅಸ್ಪಶ್ಯತೆ ಆಚರಣೆಯ ವಿರುದ್ಧ ಹಾಗೂ ಛತ್ರಪತಿ ಸಂಭಾಜಿಯ ಮಹಾರಾಜ ಕೊಲೆಯ ಸೇಡನ್ನು ತೀರಿಸಿಕೊಳ್ಳುವ ಉದ್ದೇಶದಿಂದ ಸಿಟ್ಟಿನಿಂದ ಕುದಿಯುತ್ತಿದ್ದರು. 500ಮಹರ ಯೋಧರು ಸಿದ್ಧನಾಕನ ನಾಯಕತ್ವದಲ್ಲಿ ಇಪ್ಪತ್ತೇಂಟು ಸಾವಿರ ಪೇಶ್ವೆಗಳನ್ನು ಸಂಹರಿಸಿದರು ಎಂದು ಸಮತಾ ಸೈನಿಕ ದಳದ ಜಿಲ್ಲಾ ಸಂಚಾಲಕ ಅಶೋಕ ಚಲವಾದಿ ಹೇಳಿದರು. ಆರಂಭದಲ್ಲಿ ಅಂಬೇಡ್ಕರ ವೃತ್ತದಲ್ಲಿನ ಡಾ. ಬಿ.ಆರ್‌.ಅಂಬೇಡ್ಕರ ಮೂರ್ತಿಗೆ ಮಾಲಾರ್ಪಣೆ ಮಾಡಿದರು.

ಈ ವೇಳೆ ವಿರುಪಾಕ್ಷ ಪ್ಪ ಚಲವಾದಿ, ಪ್ರಕಾಶ ದೇವರಮನಿ, ಡಾ.ವೀರಭದ್ರ ಕಾಳೆ, ವಿನಾಯಕ ಚಲವಾದಿ, ರಾಘವೇಂದ್ರ ಟಪಾಲದವರ, ಪರಮೇಶ್ವರ ಧಾರವಾಡ, ಚಿದಾನಂದ ಹರಿಜನ, ಮಹಬೂಬ ಜಮಖಂಡಿ ಮುಂತಾದವರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ