ಆ್ಯಪ್ನಗರ

ಉತ್ತರ ಕನ್ನಡ: ಸೆಲ್ಫಿ ತೆಗೆಯಲು ಹೋಗಿ ಅನಾಹುತ? ಸೇತುವೆ ಮೇಲಿಂದ ಕಾಳಿ ನದಿಗೆ ಬಿದ್ದ ಜೋಡಿ

ದಾಂಡೇಲಿಯಿಂದ ಆಟೋದಲ್ಲಿ ಬಂದಿದ್ದ ಇವರು, ಗಣೇಶಗುಡಿಯ ಡ್ಯಾಮ್ ಕೆಳಭಾಗದ ಸೇತುವೆಯ ಕಟ್ಟೆಯ ಮೇಲೆ ನಿಂತು ಸೆಲ್ಫಿ ಕ್ಲಿಕ್ಕಿಸಿದ್ದಾರೆ ಎನ್ನಲಾಗುತ್ತಿದ್ದು, ಈ ವೇಳೆ ಇಬ್ಬರೂ ಆಯ ತಪ್ಪಿ ಕಾಳಿ ನದಿಗೆ ಬಿದ್ದು ನಾಪತ್ತೆಯಾಗಿದ್ದಾರೆ

Vijaya Karnataka Web 12 Apr 2021, 8:56 pm
ಜೋಯಿಡಾ: ಕಾಳಿ ನದಿಯ ಸೇತುವೆ ಮೇಲಿಂದ ಸೆಲ್ಫಿ ತೆಗೆಯಲು ಪ್ರಯತ್ನಿಸಿದ ಯುವಕ, ಯುವತಿ ಕೆಳಗೆ ನದಿಯ ನೀರಿನಲ್ಲಿ ಬಿದ್ದು ನಾಪತ್ತೆಯಾದ ಘಟನೆ ಜೊಯಿಡಾ ತಾಲೂಕಿನ ಗಣೇಶಗುಡಿ ಬಳಿಯ ಸೂಪಾ‌ ಡ್ಯಾಂ ಬಳಿ ಇರುವ ಕಾಳಿ ಸೇತುವೆ ಬಳಿ‌ ಸೋಮವಾರ ಸಂಜೆ ವೇಳೆಗೆ ನಡೆದಿದೆ.
Vijaya Karnataka Web ಸೆಲ್ಫಿ
ಸೆಲ್ಫಿ


ದಾಂಡೇಲಿಯಿಂದ ಆಟೋದಲ್ಲಿ ಬಂದಿದ್ದ ಇವರು, ಗಣೇಶಗುಡಿಯ ಡ್ಯಾಮ್ ಕೆಳಭಾಗದ ಸೇತುವೆಯ ಕಟ್ಟೆ ಮೇಲೆ ನಿಂತು ಸೆಲ್ಫಿ ಕ್ಲಿಕ್ಕಿಸಿದ್ದಾರೆ ಎನ್ನಲಾಗುತ್ತಿದ್ದು, ಈ ವೇಳೆ ಇಬ್ಬರೂ ಆಯ ತಪ್ಪಿ ಕಾಳಿ ನದಿಗೆ ಬಿದ್ದು ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.

ಸ್ಥಳಕ್ಕೆ ರಾಮನಗರ ಪಿ.ಎಸ್‌.ಐ ಕಿರಣ ಪಾಟೀಲ ಮತ್ತು ಸಿಬ್ಬಂದಿ, ಜೊಯಿಡಾದ ಅಗ್ನಿಶಾಮಕ ಸಿಬ್ಬಂದಿ, ಮತ್ತು ವೈಟ್ ವಾಟರ್ ರಾಪ್ಟಿಂಗ್ ತಂಡ ಸ್ಥಳದಲ್ಲಿದ್ದು ಹುಡುಕಾಟ ನಡೆಸುತ್ತಿದ್ದಾರೆ.

ಸದ್ಯ ಯುವತಿಯನ್ನು ಬೀದರ ಮೂಲದ ರಕ್ಷಿತಾ ಎಂದು ಗುರುತಿಸಲಾಗಿದ್ದು ಯುವತಿಯ ಆಧಾರ ಕಾರ್ಡ್ ಸಹಿತ ಬ್ಯಾಗ್ ಸೇತುವೆ ಮೇಲೆ ದೊರೆತಿದ್ದು, ಗುರುತು ಪತ್ತೆಗೆ ಸಹಕಾರಿಯಾಗಿದೆ.

ಯುವಕನ ಬಗ್ಗೆ ತಿಳಿದು ಬರಬೇಕಿದೆ. ರಾಮನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪ್ರಕರಣ ದಾಖಲಾಗಬೇಕಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ