ಕೋವಿಡ್ ಭೀತಿಯಲ್ಲಿ ಸೊರಗಿದ ಉತ್ತರ ಕನ್ನಡ ಪ್ರವಾಸೋದ್ಯಮ; ಬಿಕೋ ಎನ್ನುತ್ತಿವೆ ಪ್ರವಾಸಿ ಸ್ಥಳಗಳು
ಅನುಕೂಲ, ಅಭಿರುಚಿಗಳ ಕಾರಣಕ್ಕೆ ಗೋವಾ-ಮಹಾರಾಷ್ಟ್ರಗಳಿಂದ ಇಲ್ಲಿಗೆ ಬರುತಿದ್ದ ಪ್ರವಾಸಿಗಳಿಗೆ ಕೋವಿಡ್ ನಿಯಮಗಳ ನಿರ್ಬಂಧ ಅಡ್ಡಿಯಾಗಿದೆ. ಪ್ರತಿ ಬೇಸಿಗೆಯಲ್ಲಿ ತುಂಬಿ ತುಳುಕುತಿದ್ದ ಪ್ರವಾಸಿಗರಿಂದ ಕಂಗೊಳಿಸುತಿದ್ದ ದಾಂಡೇಲಿ, ಜೊಯಡಾ ತಾಲೂಕುಗಳ ಜಲಸಾಹಸ ಕ್ರೀಡೆಯ ಸ್ಥಳಗಳೂ ಈಗ ಬಿಕೋ ಎನ್ನುತ್ತಿವೆ.
Vijaya Karnataka Web 15 Apr 2021, 12:14 pm
ಹೈಲೈಟ್ಸ್:
- ಪ್ರವಾಸೋದ್ಯಮಕ್ಕೆ ಹೊಡೆತ ನೀಡಿದ ಕೊರೊನಾ ಸಾಂಕ್ರಾಮಿಕ ರೋಗ
- ಉತ್ತರಕನ್ನಡದ ಪ್ರವಾಸಿ ಸ್ಥಳಗಳು ಜನರಿಲ್ಲದೆ ಬಿಕೋ ಎನ್ನುತ್ತಿವೆ
- ದಾಂಡೇಲಿ, ಜೋಯಿಡಾ ತಾಲೂಕಿನ ಜಲಸಾಹಸ ಪ್ರದೇಶಗಳೂ ಖಾಲಿ ಖಾಲಿ
ಉತ್ತರಕನ್ನಡ: ಕೃಷಿಯೊಂದಿಗೆ ಪ್ರವಾಸೋದ್ಯಮದ ವಿಫುಲ ಅವಕಾಶವಿದ್ದ ಉತ್ತರ ಕನ್ನಡ ಜಿಲ್ಲೆ ಪ್ರವಾಸೋದ್ಯಮ ಬೆಳೆಸುವಲ್ಲಿ ವಿಫಲವಾಗುತ್ತಿದೆಯೇ ಎನ್ನುವ ಪ್ರಶ್ನೆಗೆ ಹೌದು ಎನ್ನುವ ಸ್ಥಿತಿ ಉತ್ತರ ಕನ್ನಡದಲ್ಲಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಗಾಲದ ನಂತರ ಜಲಪಾತಗಳ ಸೊಬಗು ಸವಿಯಲು ಪ್ರವಾಸಿಗರು ಬಂದರೆ ಚಳಿಗಾಲದ ನಂತರ ಇಲ್ಲಿಯ ನದಿಗಳ ಜಲಕ್ರೀಡೆಗೆ ಹೊರ ಊರವರು ಮುಗಿ ಬೀಳುತ್ತಾರೆ. ಜಿಲ್ಲೆಯ ಜೊಯಡಾ, ದಾಂಡೇಲಿ ತಾಲೂಕುಗಳ ಆಕರ್ಷಣೆಯ ಸ್ಥಳಗಳು, ಇಲ್ಲಿಯ ಕಾಳಿ ನದಿ ಈ ಭಾಗದ ವಿಶೇಶ ಆಕರ್ಷಣೆಗಳಾದರೂ ಕುಳಗಿ ನಿಸರ್ಗ ಶಿಬಿರ, ಗಣೇಶ್ ಗುಡಿ ಬೋಟಿಂಗ್, ರ್ಯಾಪ್ಟಿಂಗ್ ನಂಥ ಜಲಕ್ರೀಡೆಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ.
ಕಳೆದ ವರ್ಷ ಕೋವಿಡ್ ಹೊಡೆತಕ್ಕೆ ತತ್ತರಿಸಿದ್ದ ಉತ್ತರಕನ್ನಡ ಪ್ರವಾಸೋದ್ಯಮ ಈ ವರ್ಷ ಚೇತರಿಸಿಕೊಳ್ಳಬಹುದು ಎನ್ನುವ ಸಮಯಕ್ಕೆ ಮತ್ತೆ ಕೋವಿಡ್ 2 ನೇ ಅಲೆಯ ಭೀತಿ ಪ್ರಾರಂಭವಾಗಿದೆ. ಪ್ರತಿವರ್ಷ ಬೇಸಿಗೆಯಲ್ಲಿ ದಾಂಡೇಲಿಗೆ ಬರುತಿದ್ದ ಪ್ರವಾಸಿಗರು ಇಲ್ಲಿಯ ಜಂಗಲ್ ರೆಸಾರ್ಟ್, ಕುಳಗಿ ಪ್ರಕೃತಿ ಶಿಬಿರಗಳಲ್ಲಿ ಉಳಿದು ಪ್ರಕೃತಿಯ ಸೊಬಗು ಸವಿಯುತ್ತಲೇ ಪರಿಸರದ ಬಗ್ಗೆ ಜ್ಞಾನ ಪಡೆಯುತಿದ್ದರು. ಈ ವರ್ಷ ಬೇಸಿಗೆ ಪ್ರಾರಂಭವಾಗುತ್ತಲೇ ಶುರುವಾಗಿರುವ ಕೋವಿಡ್ 2 ರ ಭೀತಿಯಿಂದಾಗಿ ಪ್ರವಾಸಿಗರು ಬರುತ್ತಿಲ್ಲ.
ಅನುಕೂಲ, ಅಭಿರುಚಿಗಳ ಕಾರಣಕ್ಕೆ ಗೋವಾ-ಮಹಾರಾಷ್ಟ್ರಗಳಿಂದ ಇಲ್ಲಿಗೆ ಬರುತಿದ್ದ ಪ್ರವಾಸಿಗಳಿಗೆ ಕೋವಿಡ್ ನಿಯಮಗಳ ನಿರ್ಬಂಧ ಅಡ್ಡಿಯಾಗಿದೆ. ಪ್ರತಿ ಬೇಸಿಗೆಯಲ್ಲಿ ತುಂಬಿ ತುಳುಕುತಿದ್ದ ಪ್ರವಾಸಿಗರಿಂದ ಕಂಗೊಳಿಸುತಿದ್ದ ದಾಂಡೇಲಿ, ಜೊಯಡಾ ತಾಲೂಕುಗಳ ಜಲಸಾಹಸ ಕ್ರೀಡೆಯ ಸ್ಥಳಗಳೂ ಈಗ ಬಿಕೋ ಎನ್ನುತ್ತಿವೆ. ಪಾಲಕರು ಮಕ್ಕಳಿಗೆ ವಿಹಾರ, ವಿಶ್ರಾಂತಿ, ಕಲಿಕೆಯ ಪ್ರದೇಶಗಳಾಗಿದ್ದ ಸುಂದರ ಪ್ರಕೃತಿ ವೈಶಿಷ್ಟ್ಯಗಳೂ ಪ್ರವಾಸಿಗರಿಲ್ಲದೆ ಉಲ್ಲಾಸ, ಸೊಗಸು ಕಳೆದುಕೊಂಡಂತಿವೆ. ಉತ್ತರ ಕನ್ನಡ ಜಿಲ್ಲೆಯ ಈ ಪ್ರವಾಸೋದ್ಯಮದ ಹಿನ್ನಡೆಗೆ ಮಕ್ಕಳ ಬೇಸಿಗೆ ರಜೆ ಇರದಿರುವುದು, ಕೋವಿಡ್ ಭೀತಿಗಳು ಕಾರಣ ಎನ್ನಲಾಗುತ್ತಿದೆ.
ಕಳೆದ ವರ್ಷ ಕೋವಿಡ್ ಹೊಡೆತಕ್ಕೆ ತತ್ತರಿಸಿದ್ದ ಉತ್ತರಕನ್ನಡ ಪ್ರವಾಸೋದ್ಯಮ ಈ ವರ್ಷ ಚೇತರಿಸಿಕೊಳ್ಳಬಹುದು ಎನ್ನುವ ಸಮಯಕ್ಕೆ ಮತ್ತೆ ಕೋವಿಡ್ 2 ನೇ ಅಲೆಯ ಭೀತಿ ಪ್ರಾರಂಭವಾಗಿದೆ. ಪ್ರತಿವರ್ಷ ಬೇಸಿಗೆಯಲ್ಲಿ ದಾಂಡೇಲಿಗೆ ಬರುತಿದ್ದ ಪ್ರವಾಸಿಗರು ಇಲ್ಲಿಯ ಜಂಗಲ್ ರೆಸಾರ್ಟ್, ಕುಳಗಿ ಪ್ರಕೃತಿ ಶಿಬಿರಗಳಲ್ಲಿ ಉಳಿದು ಪ್ರಕೃತಿಯ ಸೊಬಗು ಸವಿಯುತ್ತಲೇ ಪರಿಸರದ ಬಗ್ಗೆ ಜ್ಞಾನ ಪಡೆಯುತಿದ್ದರು. ಈ ವರ್ಷ ಬೇಸಿಗೆ ಪ್ರಾರಂಭವಾಗುತ್ತಲೇ ಶುರುವಾಗಿರುವ ಕೋವಿಡ್ 2 ರ ಭೀತಿಯಿಂದಾಗಿ ಪ್ರವಾಸಿಗರು ಬರುತ್ತಿಲ್ಲ.
ಅನುಕೂಲ, ಅಭಿರುಚಿಗಳ ಕಾರಣಕ್ಕೆ ಗೋವಾ-ಮಹಾರಾಷ್ಟ್ರಗಳಿಂದ ಇಲ್ಲಿಗೆ ಬರುತಿದ್ದ ಪ್ರವಾಸಿಗಳಿಗೆ ಕೋವಿಡ್ ನಿಯಮಗಳ ನಿರ್ಬಂಧ ಅಡ್ಡಿಯಾಗಿದೆ. ಪ್ರತಿ ಬೇಸಿಗೆಯಲ್ಲಿ ತುಂಬಿ ತುಳುಕುತಿದ್ದ ಪ್ರವಾಸಿಗರಿಂದ ಕಂಗೊಳಿಸುತಿದ್ದ ದಾಂಡೇಲಿ, ಜೊಯಡಾ ತಾಲೂಕುಗಳ ಜಲಸಾಹಸ ಕ್ರೀಡೆಯ ಸ್ಥಳಗಳೂ ಈಗ ಬಿಕೋ ಎನ್ನುತ್ತಿವೆ. ಪಾಲಕರು ಮಕ್ಕಳಿಗೆ ವಿಹಾರ, ವಿಶ್ರಾಂತಿ, ಕಲಿಕೆಯ ಪ್ರದೇಶಗಳಾಗಿದ್ದ ಸುಂದರ ಪ್ರಕೃತಿ ವೈಶಿಷ್ಟ್ಯಗಳೂ ಪ್ರವಾಸಿಗರಿಲ್ಲದೆ ಉಲ್ಲಾಸ, ಸೊಗಸು ಕಳೆದುಕೊಂಡಂತಿವೆ. ಉತ್ತರ ಕನ್ನಡ ಜಿಲ್ಲೆಯ ಈ ಪ್ರವಾಸೋದ್ಯಮದ ಹಿನ್ನಡೆಗೆ ಮಕ್ಕಳ ಬೇಸಿಗೆ ರಜೆ ಇರದಿರುವುದು, ಕೋವಿಡ್ ಭೀತಿಗಳು ಕಾರಣ ಎನ್ನಲಾಗುತ್ತಿದೆ.