ಆ್ಯಪ್ನಗರ

ರಸ್ತೆಗಳಲ್ಲಿ ಬಿರುಕು: ಸಂಚಾರಕ್ಕೆ ಅಡ್ಡಿ

ಸಿದ್ದಾಪುರ : ಸಿದ್ದಾಪುರ-ಕುಮಟಾ, ಸಿದ್ದಾಪುರ-ಸೊರಬಾ, ಸಿದ್ದಾಪುರ-ಹೊನ್ನಾವರ ರಸ್ತೆಗಳು ಬಿರುಕು ಬಿಟ್ಟಿದ್ದು ವಾಹನ ಸಂಚಾರಕ್ಕೆ ಅಡಚಣೆಯಾಗಿತ್ತು. ಸಿದ್ದಾಪುರ-ಕುಮಟಾ ರಸ್ತೆ ಹೊರತು ಪಡಿಸಿ ಉಳಿದ ರಸ್ತೆಗಳಲ್ಲಿ ಭಾನುವಾರ ಲಘುವಾಹನಗಳಿಗೆ ಹಾಗೂ ಬಸ್‌ಗಳ ಸಂಚಾರಕ್ಕೆ ಅನುಮತಿ ನೀಡಲಾಗಿದ್ದು, ಭಾರಿ ವಾಹನಗಳ ಓಡಾಟವನ್ನು ತಡೆಹಿಡಿಯಲಾಗಿದೆ.

Vijaya Karnataka 12 Aug 2019, 5:00 am
ಸಿದ್ದಾಪುರ : ಸಿದ್ದಾಪುರ-ಕುಮಟಾ, ಸಿದ್ದಾಪುರ-ಸೊರಬಾ, ಸಿದ್ದಾಪುರ-ಹೊನ್ನಾವರ ರಸ್ತೆಗಳು ಬಿರುಕು ಬಿಟ್ಟಿದ್ದು ವಾಹನ ಸಂಚಾರಕ್ಕೆ ಅಡಚಣೆಯಾಗಿತ್ತು. ಸಿದ್ದಾಪುರ-ಕುಮಟಾ ರಸ್ತೆ ಹೊರತು ಪಡಿಸಿ ಉಳಿದ ರಸ್ತೆಗಳಲ್ಲಿ ಭಾನುವಾರ ಲಘುವಾಹನಗಳಿಗೆ ಹಾಗೂ ಬಸ್‌ಗಳ ಸಂಚಾರಕ್ಕೆ ಅನುಮತಿ ನೀಡಲಾಗಿದ್ದು, ಭಾರಿ ವಾಹನಗಳ ಓಡಾಟವನ್ನು ತಡೆಹಿಡಿಯಲಾಗಿದೆ.
Vijaya Karnataka Web cracks in roads disruption to traffic
ರಸ್ತೆಗಳಲ್ಲಿ ಬಿರುಕು: ಸಂಚಾರಕ್ಕೆ ಅಡ್ಡಿ


ಕುಮಟಾ-ಸಿದ್ದಾಪುರ ರಾಜ್ಯ ಹೆದ್ದಾರಿಯಲ್ಲಿ ಅಲ್ಲಲ್ಲಿ ಮರಗಳು, ಮಣ್ಣು ಗುಡ್ಡಗಳು ಕುಸಿಯುತ್ತಿದ್ದು, ವಾಹನ ಓಡಾಟಕ್ಕೆ ತೊಂದರೆಯಾಗುತ್ತಿದೆ. ದೊಡ್ಮನೆಯಿಂದ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ಬಡಾಳ ಘಾಟಿಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ನೀಡುತ್ತಿಲ್ಲ. ಸಿದ್ದಾಪುರದಿಂದ ಬೀರಲಮಕ್ಕಿ, ಮೆಣಸಿ, ಲಂಬಾಪುರ, ಹಾರ್ಸಿಕಟ್ಟಾ ಸೇರಿದಂತೆ ವಿವಿಧ ರಸ್ತೆಗಳಲ್ಲಿ ಪ್ರತಿದಿನ ಗುಡ್ಡ, ಮರಗಳು ಕುಸಿಯುತ್ತಿದ್ದು, ಲೊಕೋಪಯೋಗಿ ಇಲಾಖೆಯವರು ಜೆಸಿಬಿ ಮೂಲಕ ಮಣ್ಣು ಮತ್ತು ಮರವನ್ನು ತೆರವುಗೊಳಿಸುತ್ತಿದ್ದಾರೆ. ಇದರಿಂದ ವಿಳಂಬವಾದರೂ ವಾಹನ ಸಂಚಾರಕ್ಕೆ ಅನುಕೂಲವಾಗುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ