ಆ್ಯಪ್ನಗರ

ಕಾವ್ಯದಿಂದ ಕರುಣೆಯುಳ್ಳ ಮನುಷ್ಯನ ಸೃಷ್ಟಿ

ಶಿರಸಿ: ಕರುಣೆಯುಳ್ಳ ಮನುಷ್ಯನನ್ನು ಸೃಷ್ಟಿಸುವುದೇ ಕಾವ್ಯದ ಉದ್ದೇಶ ಎಂದು ಸಾಹಿತಿ ಸುಬ್ರಾಯ ಮತ್ತಿಹಳ್ಳಿ ಹೇಳಿದರು.

Vijaya Karnataka 1 Oct 2019, 5:00 am
ಶಿರಸಿ: ಕರುಣೆಯುಳ್ಳ ಮನುಷ್ಯನನ್ನು ಸೃಷ್ಟಿಸುವುದೇ ಕಾವ್ಯದ ಉದ್ದೇಶ ಎಂದು ಸಾಹಿತಿ ಸುಬ್ರಾಯ ಮತ್ತಿಹಳ್ಳಿ ಹೇಳಿದರು.
Vijaya Karnataka Web creation of a merciful man by poetry
ಕಾವ್ಯದಿಂದ ಕರುಣೆಯುಳ್ಳ ಮನುಷ್ಯನ ಸೃಷ್ಟಿ


ನಗರದ ಟಿಎಸ್‌ಎಸ್‌ ಸಭಾಭವನದಲ್ಲಿ ನಟರಾಜ ನೃತ್ಯ ಕಲಾಲೋಕ, ನೇಕಾರ ಪ್ರಕಾಶನ ಸೊರಬಾ ಸಹಯೋಗದಲ್ಲಿಕವಯತ್ರಿ ಶೋಭಾ ಹಿರೇಕೈ ಕಂಡ್ರಾಜಿ ಅವರ ಚೊಚ್ಚಲ ಕವನ ಸಂಕಲನ ಅವ್ವ ಮತ್ತು ಅಬ್ಬಲಿಗೆ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಗ್ರಾಮೀಣ ಭಾಗದಲ್ಲಿಅಕ್ಷರ ಇರಲಿಲ್ಲ. ಆದರೆ ಅನುಭವ ಸಾಕಷ್ಟಿತ್ತ ಎಂದರು. ಹಿರೇಕೈ ಕವನಗಳಲ್ಲಿತಾಯ್ತನದ ಮೌಲ್ಯ ಉದ್ದೀಪಿಸುವ ಸಾಕಷ್ಟು ಅಂಶಗಳಿವೆ. ನಿಜವಾದ ನೋವು ತಲ್ಲಣಗಳಿಗೆ ಸತ್ಯ ದರ್ಶನ ಮಾಡಿಸುತ್ತದೆ ಎಂದರು.

ಕವನ ಸಂಕಲನ ಬಿಡುಗಡೆ ಮಾಡಿದ ಸಾಹಿತಿ ಡಾ. ವಿಷ್ಣು ನಾಯ್ಕ, ಇದೊಂದು ನೆಲಮುಖಿ ಚಿಂತನೆಯ ಕವನ ಸಂಕಲನವಾಗಿದ್ದು, ಮೂಲ ನೆಲದ ನೆನಪುಗಳನ್ನು ಮೆಲುಕು ಹಾಕಲಾಗಿದೆ ಎಂದರು.

ಕೃತಿ ಪರಿಚಯಿಸಿದ ಉಪನ್ಯಾಸಕಿ ನಾಗರೇಖಾ ಗಾಂವಕರ್‌, ಆಧುನಿಕತೆ ಎಷ್ಟೇ ಬೆನ್ನತಿದರೂ ಇಷ್ಟವಾಗುವುದು ಮೂಲ ನೆಲವೇ. ಕಾಪೊರ್‍ರೇಟ್‌ ಜಗತ್ತಿನಲ್ಲಿಪ್ರತಿಯೊಂದನ್ನು ಲಾಭದ ದೃಷ್ಟಿಯಲ್ಲಿನೋಡುತ್ತಿರುವ ಕುರಿತು ಕವನ ಸಂಕಲನದಲ್ಲಿಸರಳ ಕಾವ್ಯಗಳ ಮೂಲಕ ಓದುಗರಿಗೆ ನೀಡಿದ್ದಾರೆ. ಪ್ರಕೃತ್ತಿ ಹಾಗೂ ನೆಲದ ಸಂಸ್ಕೃತಿಯನ್ನು ಕವಿತೆಯಲ್ಲಿಕಟ್ಟಿಕೊಟ್ಟಿದ್ದಾರೆ ಎಂದರು.

ಕವಯತ್ರಿ ಶೋಭಾ ಹಿರೇಕೈ, ನಾಣಿಕಟ್ಟಾ ಪಪೂ ಕಾಲೇಜು ಪ್ರಾಚಾರ್ಯ ಎಂ.ಕೆ.ನಾಯ್ಕ ಹೊಸಳ್ಳಿ, ನೇಕಾರ ಪ್ರಕಾಶನ ಪ್ರಕಾಶಕ ರಾಮಕೃಷ್ಣ ಉಪಸ್ಥಿತರಿದ್ದರು. ಕನ್ನೇಶ್‌ ಕೋಲಶಿರ್ಸಿ ಸ್ವಾಗತಿಸಿದರು. ಶಿಕ್ಷಕಿ ಪ್ರಮೀಳಾ ಬದಾಮಿ ರೈತಗೀತೆ ಹಾಡಿದರು. ನಾಗರಾಜ ಮಡಿವಾಳ ನಿರೂಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ