ಆ್ಯಪ್ನಗರ

ಸಾಂಸ್ಕೃತಿಕ ವೈವಿಧ್ಯ ತೆರೆದಿಟ್ಟ ವನವಾಸಿಗಳು

ಶಿರಸಿ : ವನವಾಸಿಗಳಲ್ಲಿಸುಪ್ತವಾಗಿ ಹುದುಗಿರುವ ಸಾಂಸ್ಕೃತಿಕ ವೈವಿಧ್ಯತೆ ಅನಾವರಗೊಂಡಿತು. ವನವಾಸಿಗಳು ನೃತ್ಯಗಳ ಮೂಲಕ ಸೇರಿದ್ದವರನ್ನು ಮನಸೆಳೆದರು.

Vijaya Karnataka 4 Nov 2019, 5:00 am
ಶಿರಸಿ : ವನವಾಸಿಗಳಲ್ಲಿಸುಪ್ತವಾಗಿ ಹುದುಗಿರುವ ಸಾಂಸ್ಕೃತಿಕ ವೈವಿಧ್ಯತೆ ಅನಾವರಗೊಂಡಿತು. ವನವಾಸಿಗಳು ನೃತ್ಯಗಳ ಮೂಲಕ ಸೇರಿದ್ದವರನ್ನು ಮನಸೆಳೆದರು.
Vijaya Karnataka Web cultural diversity experts
ಸಾಂಸ್ಕೃತಿಕ ವೈವಿಧ್ಯ ತೆರೆದಿಟ್ಟ ವನವಾಸಿಗಳು


ಗ್ರಾಮೀಣ ಸೊಗಡು, ಮುಗ್ಧತೆ, ಸಂಸ್ಕೃತಿಯ ಸತ್ವವುಳ್ಳ ವನವಾಸಿಗಳ ಸಾಂಸ್ಕೃತಿಕ ಕಲೆ ತಾಲೂಕಿನ ದೇವನಳ್ಳಿಯಲ್ಲಿನಡೆದ ರಾಜ್ಯಮಟ್ಟದ ಕ್ರೀಡಾಕೂಟದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿವಿಶೇಷವಾಗಿ ರಂಜಿಸಿತು. ಕುಂಬ್ರಿ ಮರಾಠಿ, ದನಗರ ಗೌಳಿ, ಕೊರಗ, ಯರವ ಜನಾಂಗದವರು ತಮ್ಮ ಪಾರಂಪರಿಕ ನೃತ್ಯ ಪ್ರದರ್ಶಿಸಿ ಸೈ ಎನಿಸಿಕೊಂಡರು. ಹಾಗೇ ದಾಂಡೇಲಿ, ಚಿಪಗೇರಿ, ಯಲ್ಲಾಪುರದಲ್ಲಿವನವಾಸಿ ಕಲ್ಯಾಣ ನಡೆಸುವ ಹಾಸ್ಟೇಲ್‌ನ ವನವಾಸಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ವನವಾಸಿಗಳಲ್ಲಿಮುಗ್ಧತೆ... ವನವಾಸಿ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ವಿ.ಎಸ್‌.ಪಾಟೀಲ್‌ ಚಾಲನೆ ನೀಡಿದರು. ಮುಗ್ಧತೆ ಹೊಂದಿರುವ ವನವಾಸಿಗಳ ಮಧ್ಯೆ ಕೆಲಸ ಮಾಡುತ್ತಿರುವ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದರು. ದೈಹಿಕವಾಗಿ ಸದೃಢತೆ ಹೊಂದಿರುವ ವನವಾಸಿಗಳ ಕ್ರೀಡಾ ಪ್ರತಿಭೆ ತೋರಿಸಲು ಇದೊಂದು ವೇದಿಕೆಯಾಗಿದೆ ಎಂದರು.

ಜಿಪಂ ಮಾಜಿ ಸದಸ್ಯ ಆರ್‌.ಡಿ.ಹೆಗಡೆ ಜಾನ್ಮನೆ, ಸುರೇಶ ನಾಯ್ಕ, ದೇವರಾಜ ಮರಾಠಿ, ವಿಶ್ವನಾಥ ದಿವೇಕರ್‌, ರಾಜ್ಯ ಸಂಘಟನಾ ಕಾರ್ಯದರ್ಶಿ ಶ್ರೀನಿವಾಸ, ಕ್ರೀಡಾ ಪ್ರಮುಖ ರವೀಂದ್ರ ಯಡಳ್ಳಿ ಮುಂತಾದವರು ಪಾಲ್ಗೊಂಡಿದ್ದರು. ರಾಮು ನಿರೂಪಿಸಿದರು.

ಕ್ರೀಡಾಕೂಟದಲ್ಲಿಅಖಿಲ ಭಾರತೀಯ ವನವಾಸಿ ಕ್ರೀಡಾ ಪ್ರಮುಖ ಪ್ರಬೋದಾನಂದ ಕೊಲ್ಕತ್ತಾ ಪಾಲ್ಗೊಂಡು ಮಾರ್ಗದರ್ಶನ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ